<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-20227321</id><updated>2011-11-18T05:06:12.806-08:00</updated><title type='text'>Avalokana</title><subtitle type='html'>Use Baraha fonts to read this blog.. http://www.baraha.com</subtitle><link rel='http://schemas.google.com/g/2005#feed' type='application/atom+xml' href='http://kannadablogs.blogspot.com/feeds/posts/default'/><link rel='self' type='application/atom+xml' href='http://www.blogger.com/feeds/20227321/posts/default?max-results=100'/><link rel='alternate' type='text/html' href='http://kannadablogs.blogspot.com/'/><link rel='hub' href='http://pubsubhubbub.appspot.com/'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>30</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-20227321.post-3115143750850353813</id><published>2007-05-26T20:58:00.000-07:00</published><updated>2007-05-26T20:59:16.903-07:00</updated><title type='text'>ದಂತವೈದ್ಯೋ ನಾರಾಯಣೋ ಹರಿ:</title><content type='html'>ಪ್ರಾಮಾಣಿಕವಾಗಿ ಹೇಳುತ್ತೇನೆ; ಹತ್ತು ವರುಷಗಳ ಹಿಂದೆ ನನಗೆ ದಂತವೈದ್ಯ ವೃತ್ತಿಯ ಬಗ್ಗೆ ಉತ್ತಮ ಅಭಿಪ್ರಾಯವೇನೂ ಇರಲಿಲ್ಲ. ಭಗವಂತ ದಯಪಾಲಿಸಿದ ಹಲ್ಲುಗಳು ಇನ್ನೂ ಹೊಸದಾಗಿದ್ದವು. ದೂರದರ್ಶನದಲ್ಲಿ "ರಾಮಾಯಣ" ಧಾರಾವಾಹಿಯ ಮೊದಲು ಬರುತ್ತಿದ್ದ ಜಾಹೀರಾತಿನ ಸಲಹೆಯಂತೆ ಡಾಬರ್ ಕೆಂಪು ಹಲ್ಲುಪುಡಿ ಬಳಸಿ ನನ್ನ ಹಲ್ಲುಗಳನ್ನು ಬೆಳ್ಳಗೆ ಇರಿಸಿದ್ದೆ. ದಂತವೈದ್ಯರೆಂದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂ ಬಿ ಬಿ ಎಸ್ ಸೀಟು ಸಿಗದ ನಿರಾಶಿಗಳು ಇಲ್ಲವೇ ಪಿತ್ರಾರ್ಜಿತವಾಗಿ ಬಂದಂಥ ದಂತವೈದ್ಯಾಲಯವಿದ್ದು ಅದರ ಮೂಲಕ ಉದರಂಭರಣಂ ಮಾಡುವ ಉದ್ದೇಶದಿಂದ ದಂತವೈದ್ಯ ವೃತ್ತಿಯನ್ನು ಪರಿಗಣಿಸಿದವರು ಎಂದು ನನ್ನ ದೃಢ ನಂಬಿಗೆಯಾಗಿತ್ತು. ಅಲ್ಲದೇ ನಾನು ಭೇಟಿ ನೀಡಿದ ಕೆಲ ದಂತ ವೈದ್ಯರ ಸಲಹೆ ಕೂಡಾ ನನಗೆ ರುಚಿಸಿರಲಿಲ್ಲ. ಸುಮ್ಮನೇ, ಹಲ್ಲಿನ ಜೊತೆಗೆ ಹಣವನ್ನೂ ಕೀಳುವ ವ್ಯವಸ್ಥೆ ಇವರದು ಎಂದು ಭಾವಿಸಿದ್ದೆ.&lt;br /&gt; ಆನುವಂಶಿಕವಾಗಿ ನನ್ನದು ದಂತರೋಗಿಗಳ ಕುಟುಂಬ; ಅಪ್ಪನ ಒರಿಜಿನಲ್ ಹಲ್ಲುಗಳನ್ನೇ ನೋಡಿರದ ನಾನು ಅಮ್ಮನ ಹುಳುಕು ಉಬ್ಬುಹಲ್ಲುಗಳನ್ನು ನೋಡಿದ್ದೆ. ಹುಳುಕು ಹಲ್ಲಿನ ನೋವಿನಿಂದ ತಾವು ಪಟ್ಟ ಬವಣೆ, ನೋವು ಮಕ್ಕಳಿಗೆ ಬೇಡ ಎಂಬ ಸದುದ್ದೇಶದಿಂದ ನಮ್ಮನ್ನು ಮೊದಲಿನಿಂದಲೇ ಸರಿಯಾಗಿ ಹಲ್ಲುಜ್ಜುವ ಶಿಸ್ತಿಗೆ ಗುರಿಪಡಿಸಿದ್ದ ನನ್ನ ಹಿರಿಯರು ಆರೋಗ್ಯಕರ ದಂತ ಜೀವನಕ್ಕೆ ನಾಂದಿ ಹಾಡಿದ್ದರು. ಹೀಗಾಗಿ ವಾರ್ಷಿಕ ದಂತವೈದ್ಯರ ಭೇಟಿ ನಮ್ಮ ಅಭ್ಯಾಸವಾಗಿತ್ತು. ಹೀಗೇ ಒಂದು ವಾರ್ಷಿಕ ಭೇಟಿಯ ಸಂದರ್ಭದಲ್ಲಿ ದವಡೆಯ ಕೊನೆಯ ಹಲ್ಲನ್ನು ನೋಡಿದ ವೈದ್ಯರು "ಇದೇನು ಕೆಂಡದಂತೆ ಕಪ್ಪಾಗಿದೆಯಲ್ಲ? ನೋವಿದೆಯಾ?" ಎಂದು ಕೇಳಿದಾಗ ಬಾಯಲ್ಲಿ ಉತ್ತರಿಸಲಾಗದೇ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದ್ದೆ. ಅದನ್ನು ಅವರು ನಂಬಲಿಲ್ಲ; ದಂತವೈದ್ಯಾಯುಧಗಳಲ್ಲೊಂದಾದ ಸಣ್ಣ ಸುತ್ತಿಗೆಯಂಥ ವಸ್ತುವಿನಲ್ಲಿ ಎರಡು ಬಾರಿ ಆ ಹಲ್ಲನ್ನು ಮೊಟಕಿ "ಈಗ?" ಎಂದು ಪುನ: ಕೇಳಿದರು. "ಇನ್ನೇನು? ಸುತ್ತಿಗೆಯಲ್ಲಿ ಮೊಟಕಿದರೆ ಎಂಥಾ ಹಲ್ಲೂ ನೋಯುತ್ತದೆ" ಎಂದು ಉತ್ತರಿಸುವ ಮನಸ್ಸಾದರೂ ವಾಸ್ತವದಲ್ಲಿ ನನಗೆ ನೋವಿರದಿದ್ದರಿಂದ "ನೋವೇನೂ ಇಲ್ಲ" ಎಂದು ತೆರೆದ ಬಾಯಲ್ಲೇ ಹಸನ್ಮುಖಿಯಾಗಿ ಸಂಜ್ಞೆ ನೀಡಿದ್ದೆ. ಇದರಿಂದ ತುಸು ನಿರಾಶೆಗೊಂಡಂತೆ ತೋರಿದರೂ, ವೃತ್ತಿ ಧರ್ಮದಂತೆ "ತೊಂದರೆಯೇನೂ ಇರದಿದ್ದರೆ ಹಾಗೇ ಇರಲಿ ಬಿಡಿ" ಎಂದು ಸಲಹೆ ನೀಡಿ "ಉಳಿದಂತೆ ಎಲ್ಲಾ ಚೆನ್ನಾಗಿದೆ, ಆದರೆ ಉಜ್ಜುವ ಕ್ರ್‍ಅಮ ಸ್ವಲ್ಪ ಬದಲಾದರೆ ಒಳ್ಳೆಯದು" ಎಂದು ಹದಿನೈದು ನಿಮಿಷ ಕೊರೆದಿದ್ದರು. ಈ ಘಟನೆ ದಂತವೈದ್ಯರ ಬಗೆಗಿನ ನನ್ನ ಅಭಿಪ್ರಾಯವನ್ನೇನೂ ಬದಲಿಸದಿದ್ದರೂ ತುಸು ಉತ್ತಮಗೊಳಿಸಿತ್ತು.&lt;br /&gt; ಮುಂದಿನ ಎರಡು ವರುಷಗಳು ಯೋಚನೆಯಿಲ್ಲದೇ ಸಾಗಿದವು. ಮೂರನೇ ವರುಷದ ಭೇಟಿಯ ಸಂದರ್ಭದಲ್ಲಿ ನನ್ನ ಜ್ಞಾನದಂತ ತುಸು ತೊಂದರೆ ನೀಡುತ್ತಿತ್ತು. ಅದೇ ತಾನೆ ಚರ್ಮ ಸೀಳಿ ಹೊರಬರುವ ಪ್ರಯತ್ನದಲ್ಲಿದ್ದ ಜ್ಞಾನದಂತ ಭಾರೀ ನೋವನ್ನೇ ನೀಡಿತ್ತು. "ದಂತವೈದ್ಯ ಕಾಲೇಜಿಗೇ ಭೇಟಿ ನೀಡು, ಒಳ್ಳೇ ಟೈಮ್ ಪಾಸ್" ಎಂದು ಸಲಹೆ ನೀಡಿದ್ದ ಸ್ನೇಹಿತರನ್ನು ಧಿಕ್ಕರಿಸಿ ವೃತ್ತಿಪರ ವೈದ್ಯರ ಅಂಗಡಿಗೆ ದೌಡಾಯಿಸಿದ್ದೆ. ಎಲ್ಲಾ ದಂತವೈದ್ಯರಂತೆ ಇವರ ಹಲ್ಲೂ ಬೆಳ್ಳಗಿತ್ತು. ಪ್ರತೀ ವೃತ್ತಿಗೂ ಒಂದು ಕೊರತೆ ಇದ್ದೇ ಇರುತ್ತದಲ್ಲವೇ? ಗಿರಾಕಿಗಳಿಗೆ ಕೊಲ್ಗೇಟ್ ನಗೆ ಬೀರುವ ಅನಿವಾರ್ಯತೆಯಿಂದ ಪಾನ್ ಮಸಾಲಾ, ಗುಟ್ಕಾದಂತ ರುಚಿಕರ ವಸ್ತುಗಳನ್ನು ಅಗಿಯುವ ಬಯಕೆಯನ್ನು ಅವರು ಅದುಮಿಟ್ಟುಕೊಳ್ಳಬೇಕಾಗುತ್ತದಲ್ಲ, ಎಂದು ನನಗೆ ಕನಿಕರವೆನಿಸಿತು. "ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನು ಕೀಳೋಣ " ಎಂದ ಅವರ ಸಲಹೆ ನನಗೆ ರುಚಿಸಲಿಲ್ಲ. ಅದೇ ತಾನೇ ಕಾಲೇಜು ಮುಗಿಸಿದ್ದ ಅವರು ಇನ್ನೂ ಎಳಸು ಎಂದು ಅಭಿಪ್ರಾಯಿಸಿ "ಆಯಿತು ಅತೀ ಶೀಘ್ರ್‍ಅ ಭೇಟಿ ಗೊತ್ತುಪಡಿಸುತ್ತೇನೆ" ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತೆ. ಅದೇ ನನ್ನ ಕೊನೆಯ ಭೇಟಿಯಾಯಿತು.         &lt;br /&gt; ಕೆಲ ವರುಷಗಳ ಹಿಂದೆ ವೃತ್ತಿ ಅರಸುತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನಾನು ಮೊದಲು ಮಾಡಿದ ಕೆಲಸಗಳಲ್ಲೊಂದು, ದಂತ ವೈದ್ಯರನ್ನು ಹುಡುಕಿದ್ದು. ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಕೇಳಿದ್ದ ನಾನು ಶೀಘ್ರದಲ್ಲೇ ಒಂದು ಭೇಟಿಯನ್ನು ಗೊತ್ತುಪಡಿಸಿದೆ. ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಕುತೂಹಲಿಯಾಗಿದ್ದ ನಾನು, ಸರ್ಕಾರಿ ದಂತವೈದ್ಯ ಕಾಲೇಜು, ಬೆಂಗಳೂರಿನ ಸ್ವರ್‍ಣ ಪದಕ ವಿಜೇತ ವೈದ್ಯರು ಎಂದು ತಿಳಿದಾಗ ಪರವಾಗಿಲ್ಲ ಎಂ ಬಿ ಬಿ ಎಸ್ ಸೀಟು ಮಿಸ್ ಆದವರಲ್ಲಿ ಉನ್ನತ ಶ್ರ್‍ಏಣಿಯ ವಿದ್ಯಾರ್ಥಿ ಎಂದು ಕಟಕಿಯಾಡಿದ್ದೆ. ಆದರೆ ಭೇಟಿಯ ಸಂದರ್ಭದಲ್ಲಿ ನನಗೊಂದು ಆಘಾತ ಕಾದಿತ್ತು. ಬಲಭಾಗದ ಮೇಲ್ಪಂಕ್ತಿಯ ಸಾಲಿನ ಮೂರನೇ ಹಲ್ಲು ಹುಳುಕು ಹಿಡಿಯುವ ಹಾದಿಯಲ್ಲಿದೆ ಎಂದು ವೈದ್ಯರು ಬಹಿರಂಗ ಪಡಿಸಿದರು. "ಅದನ್ನು ಸ್ವಚ್ಛಪಡಿಸಿ ಟೋಪಿ ತೊಡಿಸುವ" ಎಂದು ಸಲಹೆ ನೀಡಿದರು. ಹಲ್ಲಿನ ಟೋಪಿಯದೂ ಕಾಸಿಗೆ ತಕ್ಕ ಕಜ್ಜಾಯದ ವ್ಯವಹಾರ. &lt;br /&gt; ಉಳ್ಳವರು ಬಂಗಾರದ ಟೋಪಿ ತೊಡಿಸುವರು&lt;br /&gt; ಮುರುಕು ಹಲ್ಲಿಗೆ, ನಾನೇನ ಮಾಡಲಿ ಬಡವನಯ್ಯ ||&lt;br /&gt; ಎಂದು ಯೋಚಿಸಿದರೂ, ಬಾಳಿಕೆಯ ದೃಷ್ಟಿಯಿಂದ ಬೆಳ್ಳಿಯ ಟೋಪಿಯನ್ನೇ ಆಯ್ಕೆ ಮಾಡಿದೆ. ಇನ್ನು ಟೋಪಿ ತೊಡಿಸುವ ಕಾರ್ಯವಾದರೂ ಅತಿ ಸುಲಭವೇನಲ್ಲ. ಸರಿಯಾದ ಅಳತೆ ನೀಡಿ, ವಾರವೊಂದರ ನಂತರದ ದಿನವೊಂದನ್ನು ಗೊತ್ತುಪಡಿಸಿದರು. ಈ ಬಾಯಿಯೂ ಒಂದು ವಿಚಿತ್ರ ಅಂಗ. ದಂತವೈದ್ಯಾಲಯದಲ್ಲಿ ಕುರ್ಚಿಯ ಮೇಲೆ ಪವಡಿಸಿ, ಬಾಯಿ ಅಗಲಿಸುವ ಯಂತ್ರ ಧರಿಸಿದೊಡನೇ ಜೊಲ್ಲು ಹರಿಯಲು ಶುರುವಾಗುತ್ತದೆ. ವೈದ್ಯರ ಸಲಕರಣೆಗಳ ಪರಿಣಾಮವೋ ಅಥವಾ ಸಹಾಯಕ ನರ್ಸ್ ಕಾರಣವೋ ನಿರ್ಧರಿಸುವುದು ಕಷ್ಟ. ಸ್ವಚ್ಛಗೊಳಿಸುವ ನಳಿಕೆ, ಸಕಲ ಸಲಕರಣೆಗಳೊಂದಿಗೆ ಸನ್ನದ್ಧರಾದ ವೈದ್ಯರು ಹಲ್ಲಿಗೆ ಟೋಪಿ ಅಳವಡಿಸಿದರು. ಅದರ ಮುಂದಿನ ಹಂತ ದಂತಟೋಪಿಯನ್ನು ಅದರ ಸ್ಥಾನದಲ್ಲಿ ಪಲ್ಲಟಗೊಳ್ಳದಂತೆ ಕೂರಿಸುವುದು. ಇನ್ನೇನು ಸುತ್ತಿಗೆಯಲ್ಲಿ ಬಡಿಯಬಹುದು ಎಂದುಕೊಂಡಿದ್ದ ನನಗೆ ವೈದ್ಯರು ಮರದ ಆಯತಾಕಾರದ ಚೂರೊಂದನ್ನು ತಂದಾಗ ಆಶ್ಚರ್ಯ. ಅದನ್ನು ಬಾಯಲ್ಲಿರಿಸಿ "ಗಟ್ಟಿಯಾಗಿ ಅಗಿಯಿರಿ" ಎಂದರು. ಅಂದು ಅಳವಡಿಸಿದ ದಂತಟೋಪಿ ಐದು ವರುಷಗಳ ನಂತರವೂ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ. ವಿದೇಶೀ ಸಲಕರಣೆಗಳೊಂದಿಗೆ ದೇಶೀ ಮರದ ಚೂರನ್ನು ದಂತವೈದ್ಯಾಯುಧ ಬತ್ತಳಿಕೆಯಲ್ಲಿರಿಸಿಕೊಂಡ ವೈದ್ಯರು ನನ್ನ ಅಭಿಪ್ರಾಯವನ್ನು ಗಣನೀಯವಾಗಿ ಬದಲಿಸಿದ್ದರು.&lt;br /&gt;  ವೃತ್ತಿಸಂಬಂಧ ಅಮೇರಿಕಾಕ್ಕೆ ಬಂದ ಮೇಲೂ ದಂತವೈದ್ಯರ ಭೇಟಿಯನ್ನು ಮುಂದುವರೆಸಿದ್ದೆ. ಕಳೆದ ತಿಂಗಳು ಬಲಭಾಗದ ಜ್ಞಾನದಂತ ನೋವಲು ಆರಂಭಿಸಿತು. ಮೇಲಿನ ಪಂಕ್ತಿಯೋ, ಕೆಳಗಿನ ಪಂಕ್ತಿಯೋ ಎಂದು ನಿರ್ಧರಿಸಲಾಗದಷ್ಟು ನೋವು. ಈ ಬಾರಿ ಬಿಳಿಹಲ್ಲಿನ ಬಿಳಿವೈದ್ಯರು ನನ್ನ ದಂತ ಪರೀಕ್ಷೆ ಮಾಡಿ "ನೋಡಿ, ಈ ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನ ಕೀಳುವ" ಎಂದು ಅಭಿಪ್ರಾಯಪಟ್ಟರು. ಇದೇ ಅಭಿಪ್ರಾಯವನ್ನು ಹಿಂದೆ ಧಿಕ್ಕರಿಸಿದ್ದರೂ ಇಂದಿನ ಪರಿಸ್ಥಿತಿ ಭಿನ್ನವಾಗಿತ್ತು. ಜೀವ ಕೀಳುವ ನೋವಿನಿಂದ ದಂತವೈದ್ಯೋ ನಾರಾಯಣೋ ಹರಿ: ಎಂದು ನಮಿಸಿದೆ. &lt;br /&gt;&lt;br /&gt; - ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-3115143750850353813?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/3115143750850353813/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=3115143750850353813' title='12 Comments'/><link rel='edit' type='application/atom+xml' href='http://www.blogger.com/feeds/20227321/posts/default/3115143750850353813'/><link rel='self' type='application/atom+xml' href='http://www.blogger.com/feeds/20227321/posts/default/3115143750850353813'/><link rel='alternate' type='text/html' href='http://kannadablogs.blogspot.com/2007/05/blog-post.html' title='ದಂತವೈದ್ಯೋ ನಾರಾಯಣೋ ಹರಿ:'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>12</thr:total></entry><entry><id>tag:blogger.com,1999:blog-20227321.post-896872806272104892</id><published>2007-04-09T18:59:00.000-07:00</published><updated>2007-04-09T19:00:05.407-07:00</updated><title type='text'>ಇರದವರ ನಡುವೆ ಉಳ್ಳವನಾಗಬೇಡ..!</title><content type='html'>ಬೆಳಿಗ್ಗೆ ಒಂಬತ್ತೂವರೆಗೆ ಆಫ಼ೀಸಿಗೆ ತಡವಾಗಿ ಮೆಜೆಸ್ಟಿಕ್‍ನಲ್ಲಿ ಬಸ್ಸಿಗೆ ಕಾಯ್ತಾ ಇರೋರನ್ನ, ಎಮರ್ಜೆನ್ಸಿಲ್ಲಿರೋ ರೋಗಿಗಳನ್ನ ಕರ್ಕೊಂಡು ಹೋಗ್ತಾ ಟ್ರಾಫ಼ಿಕ್‍ನಲ್ಲಿ ಸಿಕ್ಕಾಕ್ಕೊಂಡು ಅಂಬುಲೆನ್ಸಲ್ಲಿ ಕೂತಿರೋ ಪೇಶಂಟ್ ಕಡೆಯವರ್ನಾ ಒಮ್ಮೆ ಕೇಳಿ ನೋಡಿ "ಈ ಕಾವೇರಿ ಚಳುವಳಿಗೆ ಒಳ್ಳೇ ಸಹಕಾರ ಕೊಡ್ತಾ ಇದೀರಾ" ಅಂತ. ಕನ್ನಡದಲ್ಲಿ ಇರೋ ಕೆಟ್ಟ ಶಬ್ದಾನೆಲ್ಲಾ ಉಪಯೋಗಿಸಿ ಉಗೀತಾರೆ. ಯಾವುದೇ ಚಳುವಳಿ ಜನ ಬೆಂಬಲ ಇಲ್ದೇ ಮಹತ್ವ ಕಳಕೊಳ್ಳೋದೆ ಹೀಗೆ. &lt;br /&gt;ಬಸ್ಸು ಸುಟ್ಟು, ಲೂಟಿ ಮಾಡಿದ್ರೆ ಸರ್ಕಾರ ಕಾವೇರಿ ನೀರು ಕೊಡತ್ತಾ, ಲಾಠಿ ಚಾರ್ಜ್ ಮಾಡತ್ತಾ? ಜನತಾದಳ ಇರಲಿ, ಸಮ್ಮಿಶ್ರ ಇರಲಿ ಅಥವಾ ಕಾಂಗ್ರೆಸ್ ಇರಲಿ, ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡೋ ಜವಾಬ್ದಾರಿ ಇದೆ. ಅದರ ಇತಿಮಿತಿಯಲ್ಲಿ ಕಾರ್ಯ ನಡೆಸುವುದು ಅನಿವಾರ್ಯ ಕೂಡಾ. &lt;br /&gt; ಇದೇ ಮಾತನ್ನ ಐದುವರೆ ಕೋಟಿ ಕನ್ನಡಿಗರು ಹೇಳಿದರೆ ಅದಕ್ಕೆ ಬೇರೇ ಅರ್ಥ; ಇನ್ಫ಼ೊಸಿಸ್ ನಾರಾಯಣಮೂರ್ತಿ ಹೇಳಿದ್ರೆ ಇನ್ನೊಂದು ಅರ್ಥ. ಕನ್ನಡ ಮಾಧ್ಯಮ ವರದಿಗಾರರಿಗೆ ಮೂರ್ತಿಯವರನ್ನ ಕೆಣಕೋದು, ಏನಾದ್ರೂ ವಿವಾದಾತ್ಮಕ ಘಟನೆ ಬಗ್ಗೆ ಮಾತಾಡಿದ್ರೆ ಅದನ್ನ ತಿರುಚೋದು, ಇವೆರಡೇ ಕೆಲಸ ಅಂತ ಅನಿಸ್ತದೆ.  ರವಿ ಬೆಳಗೆರೆಯಂತೂ ಪ್ರತಿ ವಾರ ಕೆಲ ಪುಟಗಳನ್ನ ನಾರಯಣಮೂರ್ತಿಯವರಿಗೇ ಮೀಸಲಿಟ್ಟ ಹಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ನಾವ್ಯಾರೂ ಅಥವಾ ಇನ್ಯಾರೂ ರವಿ ಬೆಳಗೆರೆ ಬೆಂಜ಼್ ಕಾರಲ್ಲಿ ತಿರುಗಾಡುವುದರ ಬಗ್ಗೆ, ಅಥವಾ ಅವರ ಪತ್ರಿಕೆ ತೆರಿಗೆ ಸವಲತ್ತು ಉಪಯೋಗಿಸಿಕೊಂಡಿದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ರವಿ ಬೆಳಗೆರೆ ಅಂತಲ್ಲ, ಇದು ಇತರೆ ತೆಗಳುವ ಪತ್ರಿಕೋದ್ಯಮಿಗಳ ಸಂಕುಲಕ್ಕೂ ಅನ್ವಯವಾಗುತ್ತದೆ. ಅವರಿಗೆ ತೆಗಳಲು ಅವಕಾಶ ಮಾಡಿಕೊಟ್ಟು ಪತ್ರಿಕೆ ಪ್ರಸಾರಕ್ಕೆ ಸಹಕರಿಸಿದ್ದಕ್ಕಾದರೂ ಮೂರ್ತಿಗಳಿಗೆ ಇವರು ಕೃತಜ್ನರಾಗಿರಬೇಡವೆ ಅಂತ ಕೇಳುವುದು ಕುಚೋದ್ಯವಾಗಬಹುದು. &lt;br /&gt; ಮೂರ್ತಿಗಳು ಏನು ಮಾಡಿದಾರೆ ಅಥವಾ ಏನು ಮಾಡಿಲ್ಲ ಅನ್ನೋ ಮಾತು ಬಿಡಿ, ಅದು ಅವರ ವೈಯಕ್ತಿಕ ವಿಷಯ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸಮಾಜಕ್ಕೆ ಹೋರಾಟ ನಡೆಸುವುದು ಇವೆಲ್ಲಾ ಶ್ರೀಮಂತರಿಂದ ಮಾತ್ರ ಸಾಧ್ಯ ಅನ್ನುವುದೂ ಸುಳ್ಳು. ಅದು ವ್ಯಕ್ತಿಯ ಇಷ್ಟಾನಿಷ್ಟಕ್ಕೆ ಬಿಟ್ಟಿದ್ದು; ಆದರೆ ಅದೇ ಕಾರಣಕ್ಕೆ ಆ ವ್ಯಕ್ತಿಯನ್ನು ಪ್ರತಿದಿನ ಕೆಣಕಿ, ಮಾಧ್ಯಮದ ಮೂಲಕ ಉಸಿರುಕಟ್ಟಿಸುವುದು ಖಂಡಿತಾ ಸರಿಯಲ್ಲ. ಪ್ರಚೋದನಾತ್ಮಕ ಬರಹಗಳು ಅರಿಯದ ಮನವನ್ನು ಕೆಡಿಸುವುದು ಸುಳ್ಳಲ್ಲ. ರಾಜ್ಯಕ್ಕಾಗುವ ಲಾಭ ನಷ್ಟದ ಮಾತು ಹಾಗಿರಲಿ, ನಮ್ಮೆಲ್ಲರ ನಡುವೆ ನಿತ್ಯ ನಡೆದಾಡುವ ನಾರಾಯಣಮೂರ್ತಿ, ಪ್ರೇಂಜೀ ಮುಂತಾದವರನ್ನ ಸಮಾಜದ ಅನಾಗ್ರಹಕ್ಕೆ ತುತ್ತಾಗುವಂತೆ ಮಾಡುವುದು ಖಂಡಿತಾ ಸರಿಯಲ್ಲ. &lt;br /&gt; ಐಟಿ ಉದ್ಯಮಿಗಳು ಬಂಡವಾಳಶಾಹಿಗಳು, ಸಮಾಜ ಕಂಟಕರು ಎಂದೆಲ್ಲಾ ಬಿಂಬಿಸುವ ಮಾಧ್ಯಮಗಳು ನಮ್ಮದೇ ಟಾಟಾ, ಬಿರ್ಲಾ, ಅಂಬಾನಿ ಉದ್ಯಮ ಸಮೂಹ ಹೊರದೇಶಗಳಲ್ಲಿ ಕಂಪೆನಿಗಳನ್ನು ಖರೀದಿಸಿದರೆ ಹೊಗಳುತ್ತವೆ. ಬಂಡವಾಳವಿಲ್ಲದೇ ಖರೀದಿ ಹೇಗೆ ಸಾಧ್ಯವಾಯಿತು ಎಂದು ಯೋಚಿಸುವುದಿಲ್ಲವೇ? ನಮ್ಮಲ್ಲಿ ವರ್ಣಬೇಧವಿಲ್ಲದಿದ್ದರೂ, ವರ್ಗಬೇಧವಿದೆ ಎನ್ನಬಹುದೇ? ಇಂದಿನ ಐಟಿ ಉದ್ಯಮಿಗಳಲ್ಲಿ ಹೆಚ್ಚಿನವರು ಮಧ್ಯಮವರ್ಗ ಮೂಲದಿಂದ ಬಂದು, ಉನ್ನತವರ್ಗಕ್ಕೆ ಜಿಗಿದವರು. ಯಾವುದೇ ಜಿಗಿತಕ್ಕೆ ಶಕ್ತಿಯ ಅವಶ್ಯಕತೆಯಿದೆ; ತೊಂಬತ್ತರ ದಶಕದಲ್ಲಿ ಉತ್ಪನ್ನವಾದ ಆರ್ಥಿಕ ನೀತಿಯನ್ನೇ ಚಿಮ್ಮು ಹಲಗೆಯಾಗಿ ಉಪಯೋಗಿಸಿ ಮಧ್ಯಮವರ್ಗದಿಂದ ಉನ್ನತವರ್ಗಕ್ಕೆ ಜಿಗಿದವರು ಇವರು. ಸರಿ, ನಮಗೆ ಅವರಂತೆ ಜಿಗಿಯಲು ಸಾಧ್ಯವಿದ್ದರೆ ಜಿಗಿಯಬೇಕು, ಇಲ್ಲವಾದರೆ, ಆರಾಮಾಗಿರಬೇಕು. ಅದನ್ನ ಬಿಟ್ಟು ಅವರ ಪ್ರತಿ ಚಲನವಲನಗಳನ್ನು ಮಾಧ್ಯಮದ ಮೂಲಕ ತೆಗಳಿ ಈರ್ಶ್ಯೆ ತೀರಿಸಿಕೊಳ್ಳುವವರನ್ನು ಯಾವುದರಲ್ಲಿ ಹೊಡೆಯಬೇಕು? &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-896872806272104892?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/896872806272104892/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=896872806272104892' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/896872806272104892'/><link rel='self' type='application/atom+xml' href='http://www.blogger.com/feeds/20227321/posts/default/896872806272104892'/><link rel='alternate' type='text/html' href='http://kannadablogs.blogspot.com/2007/04/blog-post.html' title='ಇರದವರ ನಡುವೆ ಉಳ್ಳವನಾಗಬೇಡ..!'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-1305000842201491693</id><published>2007-03-17T16:03:00.000-07:00</published><updated>2007-03-17T16:06:25.803-07:00</updated><title type='text'>ವಿದ್ಯಾರಣ್ಯಪುರಂನಲ್ಲಿನ ಆಪೋಲೋ ಜಿಮ್</title><content type='html'>ಎಲ್ಲಾ ಊರಲ್ಲೂ "ವಿದ್ಯಾರಣ್ಯಪುರ" ಅಂತ ಗಲ್ಲಿ ಇರತ್ತೆ, ಆದ್ರೆ ಮೈಸೂರಲ್ಲಿರೋ ವಿದ್ಯಾರಣ್ಯಪುರ ನನ್ನ ಮಟ್ಟಿಗೆ ಒಂಥರಾ ಸ್ಪೆಷಲ್. ನಾನು ಕಾಲೇಜ್ ಓದುವಾಗ ನಾಲ್ಕು ವರ್ಷ ಅಲ್ಲೇ ಇದ್ದೆ. ವಿದ್ಯಾರಣ್ಯಪುರಕ್ಕೆ ಒಂದು ಐತಿಹಾಸಿಕ ಖದರ್ರು ಬಂದಿದ್ದು ನಾಲ್ಕನೇ ಮೇನ್, ನಾಲ್ಕನೇ ಕ್ರಾಸಲ್ಲಿ ಇರೋ "ಅಪೋಲೊ ಜಿಮ್"ನಿಂದ ಅನ್ನಬಹುದು. ಒಂಥರಾ ಗರಡಿಮನೆ ಇದ್ದಂಗೆ ಇದ್ದ ಆ ಜಿಮ್ ಈಗಿನ ಕಾಲದ ಜಿಮ್‍ಗಳಂತೆ ಮಲ್ಟಿಜಿಮ್ ಆಗಿರಲಿಲ್ಲ. ಅದೇ ರೋಡಲ್ಲಿ ಇದ್ದ, ಚಿಲುಮೆಯ ಉದ್ಯಾನವನದ ಒಂದು ಮೂಲೆಯಲ್ಲಿ ಕಾರ್ನರ್ ಸೈಟಲ್ಲಿ ಹಳೇ ಮನೆಗೆ ತಗಡಿನ ಬೋರ್‍ಡ್ ತೂಗಿ ಅದರ ಮೇಲೆ "ಅಪೊಲೊ ಜಿಮ್" ಅಂತ ಬರೆದಿದ್ದರು. ಜಿಮ್ಮು ಹಳೇದಿರಬಹುದು ಆದ್ರೆ ಅದು ಮುದುಕರ ಜಿಮ್ ಅಂತೂ ಆಗಿರಲಿಲ್ಲ. ತಿಂಗಳಿನ ಸದಸ್ಯತ್ವಕ್ಕೆ ಬರೀ ಇಪ್ಪತ್ತು ರುಪಾಯಿ, ಊರಿಂದ ಅಪ್ಪ ಕಳಿಸಿದ ದುಡ್ಡಲ್ಲಿ ಈ ಜಿಮ್ಮಿಗೆ ಬರೋಕಂತು ಕಷ್ಟ ಆಗ್ತಿರಲಿಲ್ಲ. ಹತ್ರದ ಮಾಧ್ವ ಹಾಸ್ಟೆಲು, ಸಂಕೇತಿ ಹಾಸ್ಟೆಲು ಹುಡುಗರಲ್ಲದೇ, ಚಾಮುಂಡಿಪುರಮ್, ಜೆ ಪಿ ನಗರದ ಹುಡುಗರೂ ಬರ್ತಾ ಇದ್ರು. ಎಲ್ಲಾ ಚಿಗುರು ಮೀಸೆ ಹುಡುಗ್ರೆ. ಅಷ್ಟೇ ಅಲ್ಲ, ಜಾತಿ ಪಾಡೂ ಈ ಜಿಮ್ಮಿಗೆ ಇರಲಿಲ್ಲ, ಜನಿವಾರದೋರು, ನಾಮದೋರು, ಎಲ್ಲಾ ಜಾತಿ ಹುಡುಗ್ರು ಬರ್ತಾ ಇದ್ರು. &lt;br /&gt; ಜೀರ್ಣಾವಸ್ಥೆಯಲ್ಲಿದ್ದ ಬಾಗಿಲು ದಾಟಿ ಒಳಗೆ ಕಾಲಿಟ್ಟರೆ, ಒಂದು ದೊಡ್ಡ ಹಾಲ್. ಅಲ್ಲಿ ಗೋಡೆಗೆ ಆನಿಸಿದಂತೆ ಸುತ್ತಲೂ ಶೆಲ್ಫ್ ಇಟ್ಟಿದ್ದರು. ಶೆಲ್ಫ್ ತುಂಬಾ ಏರಿಕೆ ಕ್ರಮದಲ್ಲಿ ಹಳೇ ಕಾಲದ ಡಂಬೆಲ್ಸ್ ಇಟ್ಟಿದ್ರು. ಹಾಗೇ ಒಂದು ಮೂಲೇಲಿ ನಿಲುವು ಕನ್ನಡಿ ಕೂಡಾ ಇತ್ತು. ಹಾಲಲ್ಲಿ ಹಾಗೇ ಮುಂದೆ ನಡೆದರೆ, ಎಡ ಭಾಗದ ಗೋಡೆಯ ಮಧ್ಯೆ ಒಂದು ಬಾಗಿಲು ಇತ್ತು. ಅದನ್ನ ದಾಟಿದ್ರೆ ಮಾಡಿಲ್ಲದ ಒಂದು ಕೋಣೆ ಇತ್ತು. ಆಗೆಲ್ಲಾ ಸುತ್ತಲೂ ಅಷ್ಟೊಂದು ಮಹಡಿ ಮನೆಗಳು ಇಲ್ಲದೇ ಇದ್ದಿದ್ರಿಂದ ಮೇಲೆ ಸೂರು ಇಲ್ಲದೇ ಇದ್ರೂ ತೊಂದರೆ ಇರಲಿಲ್ಲ. ಮೇಲೆ ಸೂರೇ ಇಲ್ದೇ ಇದ್ರೂ ಅದರ ಒಂದು ಪಾರ್ಶ್ವದ ಗೋಡೆಗೆ ಕಿಟಕಿ ಇತ್ತು. ಆ ಕಿಟಕಿ ನೋಡಿದಾಗಲೆಲ್ಲ, ನಂಗೆ ಅನಿಸ್ತ ಇತ್ತು. "ಮನೆಗೆ ಹಂಚೇ ಇಲ್ದೆ ಇದ್ರೆ, ಕಿಟಕಿ ಯಾಕೆ?" ನಾವು ಹುಡುಗ್ರು ಈ ಕಿಟಕಿ ಬಗ್ಗೆ ಮಾತಾಡಿಕೊಂಡ್ರೂ, ಜಿಮ್ ಗುರುಗಳ ಹತ್ರ ಕೇಳಿರ್ಲಿಲ್ಲ. ತುಂಬಾ ಸ್ಟ್ರಿಕ್ಟ್ ಟೀಚರ್ ಅವರು; "ಕರ್ನಾಟಕ ರತ್ನ", "ಮೈಸೂರು ಕೇಸರಿ" ಹೀಗೇ ಪ್ರಶಸ್ತಿ ಗೆದ್ದಿದ್ರಂತೆ. ನಂಗೆ ದೇಹದಾರ್ಢ್ಯದಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ತುಂಬಾ ಸೋಮಾರಿ ಬೇರೆ; ಆದ್ರೆ ನನ್ನ ಹಾಸ್ಟೆಲ್ ಮೇಟ್ಸ್ ಜೊತೆ ಜಿಮ್ಮಲ್ಲಿ ಒಳ್ಳೇ ಮಜಾ ಬರ್ತಾ ಇತ್ತು. ಪ್ರತಿದಿನಾನೂ ಒಂದೊಂದು ಸನ್ನಿವೇಶಗಳು, ದಿನಾನೂ ಒಬ್ರು ಬಕ್ರಾ ಆಗೇ ಆಗ್ತಾ ಇದ್ರು. ಇದಕ್ಕಿಂತಾ ಹೆಚ್ಚಾಗಿ, ಕಸರತ್ತು ಮುಗಿಸಿದ ಮೇಲೆ, ನಾವೆಲ್ಲಾ ಒಟ್ಟಿಗೆ ಹೋಗಿ ಜಿ ಟಿ ಆರ್ (ಗಾಯತ್ರಿ ಟಿಫನ್ ರೂಮ್) ಅಲ್ಲಿ ಕೂರ್ತಾ ಇದ್ವಿ. ಅದನ್ನಂತೂ ಮಿಸ್ ಮಾಡ್ಕೋತಾನೆ ಇರ್ಲಿಲ್ಲ. ಅದರ ಬಗ್ಗೆ ಮತ್ತೆ ಯಾವಗಲಾದ್ರೂ ಬರೀತಿನಿ. &lt;br /&gt; ಜಿಮ್ಮಿಗೆ ಬರೋ ಹುಡುಗ್ರಲ್ಲಿ ಹೆಚ್ಚಿನವರಿಗೆ ಎದೆ, ಭುಜ ಮಾಂಸಖಂಡದ ಮೇಲೆ ಖಯಾಲಿ ಜಾಸ್ತಿ ಇರತ್ತೆ. ಅದಕ್ಕೆ ಬಸ್ಕಿ ಹಾಕೋದು, ಹೆವಿ ಡಂಬೆಲ್ಸ್ ಎತ್ತೋದು ಜಾಸ್ತಿ. ಹೇಗಾದ್ರೂ ಮಾಡಿ ಭಾರ ಎತ್ತೋ ಹುಮ್ಮಸ್ಸು. ಅದಕ್ಕೇ ಹಲ್ಲುಮಿಡಿ ಕಚ್ಚಿ ಎತ್ತಾ ಇದ್ರು. ಮೂತಿ ಪೂರಾ ಉಬ್ಬಿಸಿ ಹನುಮಂತನ ಥರಾ ಆಗ್ತಾ ಇದ್ದ ಅವ್ರನ್ನ ನೋಡಿದ ಕೂಡ್ಲೇ ನಮ್ಮ ಗುರುಗಳು ಕೈಲಾಸಂ ಅವರ ಈ ಜೋಕ್ ಹೇಳ್ತಾ ಇದ್ರು. "ಅಲ್ಲ ಕಣ್ರೋ, ನಿಮ್ಮ ಬಾಡಿ ಹನುಮಂತನ ಬಾಡಿ ಥರಾ ಅಗ್ಬೇಕು, ಮೂತಿ ಅಲ್ಲಾ. ಅದ್ಯಾಕೆ ಹಾಗೆ ಮೂತಿ ಕಿವುಚ್ತೀರಾ?" ಅಂತ. &lt;br /&gt; ಆ ಜಿಮ್ ಈಗ್ಲೂ ಇದ್ಯೋ ಇಲ್ವೋ ಗೊತ್ತಿಲ್ಲ. ಚಾಮುಂಡಿ ಬೆಟ್ಟಕ್ಕೆ ಹತ್ರ ಇದ್ದ ವಿದ್ಯಾರಣ್ಯಪುರಂಗೆ ಒಂದು ಕಳೆ ಬಂದಿದ್ದೆ, ಈ ಜಿಮ್ಮಿಂದಾ ಅಂತಾ ನಂಗೆ ಅನಿಸ್ತಾ ಇತ್ತು.  &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-1305000842201491693?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/1305000842201491693/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=1305000842201491693' title='2 Comments'/><link rel='edit' type='application/atom+xml' href='http://www.blogger.com/feeds/20227321/posts/default/1305000842201491693'/><link rel='self' type='application/atom+xml' href='http://www.blogger.com/feeds/20227321/posts/default/1305000842201491693'/><link rel='alternate' type='text/html' href='http://kannadablogs.blogspot.com/2007/03/blog-post.html' title='ವಿದ್ಯಾರಣ್ಯಪುರಂನಲ್ಲಿನ ಆಪೋಲೋ ಜಿಮ್'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-20227321.post-5332039501997734838</id><published>2006-12-26T21:05:00.000-08:00</published><updated>2006-12-26T21:09:31.499-08:00</updated><title type='text'>ಭಾಷಾಧಾರಿತ ಮೀಸಲಾತಿ - ಒಂದು ಚಿಂತನೆ</title><content type='html'>ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು ಕನ್ನಡಿಗರು ಬೈದುಕೊಂಡರೆ ಅದಕ್ಕೆ ಕಾರಣವೊಂದಿದೆ - ಅವರು ಇನ್ಫೋಸಿಸ್‌ನಲ್ಲಿ ಕನ್ನಡಿಗರಿಗೆ ಮೀಸಲಾತಿ ಅಳವಡಿಸಲಿಲ್ಲ. ಇದರ ಬಗ್ಗೆ ಸಾಕಷ್ಟು ಕಟುಟೀಕೆ, ವಿಮರ್ಶೆ ಹಾಗೂ ಲೇಖನಗಳು ಈಗಾಗಲೆ ಸರ್ವ ಮಾಧ್ಯಮಗಳಲ್ಲೂ ಬಂದಿವೆ. ಇದರಲ್ಲಿ ನನಗೆ ಅರ್ಥವಾಗದ ವಿಷಯವೊಂದಿದೆ - ಮೀಸಲಿಗೆ ಅರ್ಹ ಕನ್ನಡಿಗರು ಎಂದರೆ ಯಾರು? &lt;br /&gt;&lt;br /&gt;೧. ಕನ್ನಡ ಮಾತೃಭಾಷೆಯಾಗಿದ್ದು ಅಂತೆಯೇ ಮಾತನಾಡಲು ಅರಿತವರು&lt;br /&gt;೨. ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಆಂಗ್ಲ ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಪಡೆದವರು. ಈ ಗುಂಪಿನಲ್ಲಿ ಕನ್ನಡ ಮಾತೃಭಾಷಿಕರಲ್ಲದವರನ್ನೂ ಸೇರಿಸಿದ್ದೇನೆ.  ಉದಾ: ತುಳು, ಕೊಡವ, ಕೊಂಕಣಿ ಭಾಷಿಕರು.&lt;br /&gt;೩. ಕನ್ನಡ ಭಾಷಿಕ ಪಾಲಕರಿದ್ದು, ಕನ್ನಡ ಗಂಧಗಾಳಿ ಇರದವರು. ಇವರನ್ನು ಕನ್ನಡವನ್ನು ಪಿತ್ರಾರ್ಜಿತವಾಗಿ ಪಡೆದವರ ಗುಂಪಿನಲ್ಲಿ ಸೇರಿಸೋಣ. &lt;br /&gt;&lt;br /&gt;ಸಮಸ್ಯೆ ಕ್ಲಿಷ್ಟವಾಗುವುದು ಇಲ್ಲೇ. ಮೊದಲನೇ ಗುಂಪಿನವರಿಗೆ ಮೀಸಲು ನೀಡೋಣವೆಂದರೆ, ಅವರಲ್ಲಿ ಹೆಚ್ಚಿನವರು ಕಾನ್ವೆಂಟ್‌ಗಳಲ್ಲಿ ಓದಿ, ಆಂಗ್ಲಮಾತೆಗೆ ಸೇವೆ ಸಲ್ಲಿಸಿದವರು. ಅವರಿಗಿಂತ ಎರಡನೇ ಗುಂಪಿನವರು ಖಂಡಿತವಾಗಿಯೂ ಮೀಸಲಿಗೆ ಅರ್ಹರು.&lt;br /&gt;&lt;br /&gt; ಇನ್ನು ಎರಡನೇ ಗುಂಪಿಗೆ ಬಂದರೆ, ವೃತ್ತಿಸಂಬಂಧ ಊರಿಂದೂರಿಗೆ ಸಾಗುತ್ತ, ಹೊರರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತ ಕನ್ನಡದ ಬಗ್ಗೆ ಅಭಿಮಾನವಿದ್ದರೂ ಮಕ್ಕಳನ್ನು ಕನ್ನಡ ಭಾಷೆಯಲ್ಲಿ ಓದಿಸಲಾಗದ ಪಾಲಕರು ಏನು ಮಾಡಬೇಕು? ಅವರಿಗೆ ಅನ್ಯಾಯವಾದಂತಾಗಲಿಲ್ಲವೇ? ಅಲ್ಲದೇ ಇವರ ಅರ್ಹತೆಯನ್ನು ಸೂಕ್ಷ್ಮವಾಗಿ ಗಮನಿಸಿ. ಇವರಲ್ಲಿ ಹೆಚ್ಚಿನವರು ನಗರೇತರ ಶಾಲೆಗಳಲ್ಲಿ ಓದಿ, ಅನಿವಾರ್ಯತೆಯಿಂದಲೋ ಅಥವಾ ಆಂಗ್ಲ ಶಿಕ್ಷಣದ ಅಭಾವದಿಂದಲೋ ಕನ್ನಡ ಮಾಧ್ಯಮದಲ್ಲಿ ಓದಿರುತ್ತಾರೆ. ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ, ಇನ್ಫೋಸಿಸ್‌ನ ಇನ್ನೊಂದು ಶಾಖೆ ಚೆನ್ನೈಯಲ್ಲಿದೆ. ಇದೇ ಪದ್ಧತಿಯ ಅನುಸಾರ ಅಲ್ಲಿರುವ ಶಾಖೆಯಲ್ಲಿ ತಮಿಳು ಭಾಷಿಕರಿಗೆ ಒಳ ಮೀಸಲಾತಿ ನೀಡಬೇಕು. ಹಾಗಾದರೆ ಕೋಲಕತ್ತಾ, ಪೂನಾ, ಮುಂಬೈ, ಗುಡಗಾಂವ್ ಶಾಖೆಗಳ ಕಥೆ ಏನು? ಒಟ್ಟಿನಲ್ಲಿ, ಈ ಗುಂಪಿನ ಕನ್ನಡಿಗರು ಮೀಸಲಿಗೆ ಹೆಚ್ಚಿನ ಅರ್ಹತೆ ಹೊಂದಿದ್ದಾರೆ ಎಂದುಕೊಂಡರೂ, ಅದಕ್ಕೆ ಪಾಲಕರ ಭಾಷಾಭಿಮಾನ ಕಾರಣವೋ ಅಥವಾ ಅನಿವಾರ್ಯತೆಯೋ ಎಂದು ಪತ್ತೆ ಹಚ್ಚಲು ಯಾವುದೇ ಮಾನದಂಡವಿಲ್ಲ.&lt;br /&gt;&lt;br /&gt; ಮೇಲಿನ ಎರಡು ಚರ್ಚೆಯ ಅನುಸಾರ, ಮೂರನೇ ಗುಂಪಿನ ಕನ್ನಡಿಗರನ್ನು ಸಹಜವಾಗಿ ಮೀಸಲಿನಿಂದ ಹೊರತು ಪಡಿಸಬಹುದು.  &lt;br /&gt;&lt;br /&gt; ಇದೆಲ್ಲಕ್ಕಿಂತ ಹೊರತಾಗಿ ಅವಲೋಕಿಸಿದರೆ, ಇಂಥ ಮೀಸಲಾತಿಯ ಬೇಡಿಕೆಗಳು ಕೊನೆ ಮೊದಲಿಲ್ಲದವು; ಮೊಗೆದಷ್ಟೂ ಮುಗಿಯದ ಸೆಲೆ ಎಂದು ಅನಿಸುತ್ತದೆ. ಇನ್ಫೋಸಿಸ್ ಒಂದೇ ಅಲ್ಲ, ಯಾವುದೇ ಖಾಸಗಿ ಕಂಪೆನಿ ಇಂಥ ಸಾಮಾಜಿಕ ವಿಷಯಗಳಲ್ಲಿ ಗಮನ ಹರಿಸುವಷ್ಟು ಅನುಕೂಲತೆಯಾದರೂ ಎಲ್ಲಿರುತ್ತದೆ. ನನಗೆ ಗೊತ್ತಿರುವ ಒಂದು ಉದಾಹರಣೆ - ಕೇಂದ್ರ ಸರ್ಕಾರ ಪ್ರಾಯೋಜಿತ ಕಾರಖಾನೆಗಳಲ್ಲಿ ಕೆಲವನ್ನು ಹೊರತುಪಡಿಸಿ, ಉತ್ಪಾದಿತ ಮೌಲ್ಯವನ್ನು ಗಮನಿಸಿ. ಒಂದು ಹಂತದಲ್ಲಿ, ಅವುಗಳ ಮೂಲ ಉತ್ಪನ್ನಕ್ಕಿಂತ ಸುಲಭ ದರದ ಕ್ಯಾಂಟೀನ್ ಸೇವೆ, ಬಸ್ ಸೌಕರ್ಯ, ಕಾರ್ಮಿಕ ಸಂಘಟನೆಗಳ ಚುನಾವಣೆ ಇವುಗಳೇ ಪ್ರಮುಖ ವಿಷಯಗಳಾಗಿ ಕಾರ್ಮಿಕರ ಪ್ರತಿ ತಿಂಗಳ ಸಂಬಳಕ್ಕೆ ತೆರಿಗೆದಾರರು ಕಷ್ಟಪಟ್ಟು ಪಾವತಿಸಿದ ಹಣವನ್ನು ಅನುದಾನ ರೂಪದಲ್ಲಿ ಈ ಬಿಳಿಯಾನೆಗಳಿಗೆ ನೀಡಬೇಕಾದ ಪರಿಸ್ಥಿತಿಯಿತ್ತು ಇಂದಿಗೂ ಇದೆ. ಇಂಥ ಲಕ್ಷುರಿ ಖಾಸಗೀ ಕಂಪೆನಿಗಳಿಗೆಲ್ಲಿ?          &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-5332039501997734838?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/5332039501997734838/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=5332039501997734838' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/5332039501997734838'/><link rel='self' type='application/atom+xml' href='http://www.blogger.com/feeds/20227321/posts/default/5332039501997734838'/><link rel='alternate' type='text/html' href='http://kannadablogs.blogspot.com/2006/12/blog-post_26.html' title='&lt;strong&gt;&lt;strong&gt;ಭಾಷಾಧಾರಿತ ಮೀಸಲಾತಿ - ಒಂದು ಚಿಂತನೆ&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-6974626755925768836</id><published>2006-12-19T21:11:00.000-08:00</published><updated>2006-12-19T21:14:41.774-08:00</updated><title type='text'>ಕನ್ನಡ ಬಳಕೆಗಿಂತ ಇನ್ನೇನು ಬೇಕು?</title><content type='html'>ಕವಿ ನಿಸಾರ್ ಅಹಮದ್‌ರ ಅಧ್ಯಕ್ಷತೆಯಲ್ಲಿ ಶಿವಮೊಗ್ಗೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಂದರ್ಭದಲ್ಲೇ ಸಹಜವಾಗೇ ಕನ್ನಡ ಭಾಷೆಯ ಅಳಿವು, ಉಳಿವು, ಉನ್ನತಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಜನಜಾಗೃತಿಯ ದೃಷ್ಟಿಯಿಂದ ಸಮ್ಮೇಳನಗಳು ನಿಜಕ್ಕೂ ಸಹಕಾರಿ. ನಮ್ಮ ಸಮ್ಮೇಳನಗಳು ಗಡಿಯಾಚೆಯೂ ಪ್ರಸರಿಸಬೇಕು. ಕಾಸರಗೋಡು, ಬೆಳಗಾವಿ, ಬಳ್ಳಾರಿಗಳಲ್ಲಿ ಕನ್ನಡ ಧ್ವನಿ ಮೊಳಗಬೇಕು. ಆದರೆ, ನಮ್ಮ ಭಾಷೆಯನ್ನು ಉಳಿಸಲು "ಭಾಷಾ ಪೋಲೀಸರು" ಅವಶ್ಯಕವೇ? ಇತ್ತೀಚಿನ ಬೆಳವಣಿಗೆಯನ್ನು ಗಮನಿಸಿದರೆ, ಭಾಷಾ ಚಳುವಳಿಕಾರರು ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಹೊರತಾಗಿ ಭಾಷಾ ಅಭಿವೃದ್ಧಿ ಸಚಿವಾಲಯ ಹಾಗೂ ಭಾಷಾ ಪೋಲೀಸ್ ಇಲಾಖೆಗಳನ್ನು ಆಗ್ರಹಿಸಿದರೂ ಆಶ್ಚರ್ಯವಿಲ್ಲ. ಅಷ್ಟೇ ಅಲ್ಲ, ಜನರ ತಾಳ್ಮೆಯ ಮಿತಿ ಕೂಡಾ ಮುಂಚಿನಂತಿಲ್ಲವೆನಿಸುತ್ತದೆ, ಒಂದು ಕಿರು ಘಟನೆ ಕೂಡಾ ಗಲಭೆಕಾರಕವಾಗಿ ಮಾರ್ಪಡುತ್ತಿದೆ. &lt;br /&gt;&lt;br /&gt;                        ಇಂಥ ಸಂದರ್ಭದಲ್ಲಿ ನಾವು ಸಂಸ್ಕೃತ ಭಾಷೆಯನ್ನು ಗಮನಿಸಬೇಕು. ವ್ಯಾಕರಣ ಮತ್ತು ರಚನಾತ್ಮಕವಾಗಿ ಜಗತ್ತಿನ ಅತ್ಯಂತ ಉತ್ಕೃಷ್ಟ ಭಾಷೆಯಾಗಿದ್ದರೂ ಜನಸಾಮಾನ್ಯರಿಂದ ಬಳಕೆಯಾಗದೇ ಸಂಸ್ಕೃತ ಅವನತಿ ಹೊಂದಿತು. ಅದರೊಂದಿಗೆ, ಆ ಭಾಷೆಯಲ್ಲಿ ರಚಿತವಾದ ಎಷ್ಟೊಂದು ಕೃತಿಗಳು ಜನರಿಂದ ದೂರವಾಗಿವೆ. ನಾನು ಬಲ್ಲಂತೆ ಆಯುರ್ವೇದ, ಜ್ಯೋತಿಷ್ಯ, ವೇದಗಣಿತ, ಪುರಾತನ ಲೋಹಶಾಸ್ತ್ರ ಮುಂತಾದ ಪ್ರೌಢ ವಿಷಯಗಳ ಬಗ್ಗೆ ಸಂಸ್ಕೃತದಲ್ಲಿ ಸಾಕಷ್ಟು ಅಧ್ಯಯನವಸ್ತು ಮತ್ತು ಆಕರ ಗ್ರಂಥಗಳಿವೆ. ಆದರೆ ಅದನ್ನು ಅಧ್ಯಯಿಸುವ ಹಾಗೂ ಜನಸಾಮಾನ್ಯರಿಗೆ ತಿಳಿಯುವಂತೆ ಅರ್ಥೈಸುವ ಯಾವ ಕೆಲಸಗಳೂ ಗಣನೀಯ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ನಡೆಸುತ್ತಿವೆ; ಉದಾಹರಣೆಗೆ, ಮೇಲುಕೋಟೆಯಲ್ಲಿನ "ಅಕಾಡೆಮಿ ಆಫ಼್ ಸಂಸ್ಕ್ರತ್ ರಿಸರ್ಚ್". ಅದರ &lt;a href="http://www.vedavid.org/ASR/"&gt;ಲಿಂಕ್ &lt;/a&gt;ಇಲ್ಲಿದೆ.&lt;br /&gt;&lt;br /&gt;               ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಮಧ್ಯವರ್ತಿಗಳಿಲ್ಲದೆ  ಸಂಸ್ಕೃತ ಅರ್ಥವಾಗುವುದು ಕಷ್ಟ. ಇಲ್ಲಿ ಸಂಸ್ಕೃತ ಬಲ್ಲವರನ್ನು ಮಧ್ಯವರ್ತಿಗಳು ಎಂಬ ಅರ್ಥದಲ್ಲಿ ಬಳಸಿದ್ದೇನೆ, ಉದಾಹರಣೆಗೆ, ಸರಳವಾಗಿ ದೇವರನ್ನು ಹೊಗಳುವ ಶ್ಲೋಕಗಳು ಕೂಡಾ ಗೂಡಾರ್ಥವುಳ್ಳ ಮಂತ್ರಗಳಾಗಿ ಮಾರ್ಪಟ್ಟು ಅರ್ಥವಾಗದೇ ಇದ್ದರೂ ನಾವು ಪೂಜಾರಿ ಪಠಿಸಿದ್ದಕ್ಕೆಲ್ಲಾ ತಲೆಯಾಡಿಸುತ್ತೇವೆ. ನಮ್ಮ ಹಾಗೂ ದೇವರ ನಡುವೆ ಭಾಷಾಂತರಕಾರರಾಗಿ ಕಾರ್ಯ ನಿರ್ವಹಿಸುವ ಪೂಜಾರಿಗಳು ಮಧ್ಯವರ್ತಿಗಳಲ್ಲವೇ? ಒಟ್ಟಿನಲ್ಲಿ ಸಂಸ್ಕೃತದಂಥ ಸರಳ ಸುಂದರ ಭಾಷೆ ಸಮರ್ಪಕ ಬಳಕೆಯಾಗದೇ ಜನರಿಂದ ದೂರವಾಯಿತಲ್ಲವೇ?&lt;br /&gt;&lt;br /&gt;ಕನ್ನಡ ನುಡಿಯಲು ಬಿಗುಮಾನ ಬೇಡ, &lt;br /&gt;ಕನ್ನಡ ಉಳಿಸಲು ಪೋಲೀಸರೂ ಬೇಡ&lt;br /&gt;ಕನ್ನಡ ಬಳಸಿ, ಕನ್ನಡ ಉಳಿಸಿ ||&lt;br /&gt;&lt;br /&gt;ಇದೊಂದೇ ನಮ್ಮ ಮಂತ್ರವಾದರೆ ಸಾಕು, ಭಾಷೆ ನೂರುಕಾಲ ಬಾಳುತ್ತದೆ. &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-6974626755925768836?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/6974626755925768836/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=6974626755925768836' title='6 Comments'/><link rel='edit' type='application/atom+xml' href='http://www.blogger.com/feeds/20227321/posts/default/6974626755925768836'/><link rel='self' type='application/atom+xml' href='http://www.blogger.com/feeds/20227321/posts/default/6974626755925768836'/><link rel='alternate' type='text/html' href='http://kannadablogs.blogspot.com/2006/12/blog-post_19.html' title='&lt;strong&gt;&lt;strong&gt;ಕನ್ನಡ ಬಳಕೆಗಿಂತ ಇನ್ನೇನು ಬೇಕು?&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry><entry><id>tag:blogger.com,1999:blog-20227321.post-2449485843835050491</id><published>2006-12-06T22:29:00.000-08:00</published><updated>2006-12-06T22:30:36.083-08:00</updated><title type='text'>ನಾನೇಕೆ ಅನಾಮಧೇಯ?</title><content type='html'>ನಿನ್ನೆ ದಟ್ಸ್‌ಕನ್ನಡ ದಲ್ಲಿ ತ್ರಿವೇಣಿಯವರ ಅಂಕಣ ಓದಿದೆ. ಮೊದಲಿಗೆ ನನಗೆ ನೆನಪಾಗಿದ್ದು ದಾಸರ ಪದ "ನೀನ್ಯಾಕೋ ನಿನ್ನ ಹಂಗ್ಯಾಕೋ ನಾಮದ ಬಲವೊಂದಿದ್ದರೆ ಸಾಕೋ". ಹೆಸರಿನಲ್ಲೇ ಎಲ್ಲಾ ಇದೆ, ನಿನ್ನ ನಾಮದ ಬಲ ಒಂದಿದ್ದರೆ ಸಕಲವೂ ಇದ್ದಂತೆ ಎಂಬರ್ಥದ ಪದ್ಯ ಅದು. ಅದನ್ನೇ ತ್ರಿವೇಣಿಯವರೂ ಸಮರ್ಥಿಸುತ್ತಾರೆ. &lt;br /&gt;       ನನ್ನ ಸಮಸ್ಯೆ ಪ್ರಾರಂಭವಾಗುವುದು ಇಲ್ಲೇ; ಉದಾಹರಣೆಗೆ ಹರಿಹರ ಎಂಬ ಹೆಸರಿನಲ್ಲೇ ದೈವವನ್ನು ಕಾಣುವ ನಾವು ಹರಿಹರಾಸುರ ಎಂಬ ಹೆಸರಿದ್ದರೆ ಆತ ದಾನವ ಎನ್ನುತ್ತೇವೆ. ದಾನವನಲ್ಲಿರಬಹುದಾದ ಗರಿಮೆ, ಉತ್ತಮ ಗುಣಗಳು ಅವನ ಹೆಸರಿನಿಂದಾಗಿ ಅನ್ವಯವಾಗುವುದಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ, ವ್ಯಕ್ತಿಯ ಹೆಸರು ಅವನ ಜಾತಿ ಅಥವಾ ಕುಟುಂಬದ ಹಿನ್ನೆಲೆ ನೀಡುವುದರಿಂದ ಕೇಳುಗನಲ್ಲಿ ಪೂರ್ವಾಗ್ರಹ ಭಾವನೆಗಳನ್ನು ಮೂಡಿಸುತ್ತವೆ. ಲೇಖಕನೊಬ್ಬ ಭಟ್ಟ, ಜೋಶಿ ಆಗಿದ್ದರೆ ಅವನು ಬ್ರಾಹ್ಮಣನಾಗಿರಬೇಕು; ಆತ ದಲಿತರ/ಹರಿಜನರ ಬಗೆಗೆ ಬರೆದ ವಾಕ್ಯಗಳಲ್ಲೆಲ್ಲಾ ನಮಗೆ ಅನರ್ಥವೇ ದೊರಕುತ್ತದೆ. ಅದೇರೀತಿ ದಲಿತ ಲೇಖಕನ ಬರವಣಿಗೆಯಲ್ಲೆಲ್ಲಾ ಬ್ರಾಹ್ಮಣ ವಿರೋಧೀ ಅಭಿಪ್ರಾಯಗಳನ್ನು ಹುಡುಕುತ್ತೇವೆ. ಇದರಲ್ಲಿ ತಪ್ಪೇನಿಲ್ಲ ಬಿಡಿ; ಮಾನವನ ಸಹಜಗುಣವೇ ಹಾಗೆ ಎಂದು ನಾವು ಸುಮ್ಮನಿರಬಹುದು. ಇಲ್ಲವಾದರೆ ನಮ್ಮನ್ನು "ಅತಿ ಬುದ್ಧಿವಂತರು"  ಎಂದು ಸಮಾಜ ಪಟ್ಟ ಕಟ್ಟುತ್ತದೆ. &lt;br /&gt; ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ, ಎಷ್ಟೋ ಬಾರಿ ನಾವು ನಮ್ಮ ನಿಜ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮುಜುಗರ ಪಡುತ್ತೇವೆ. "ಅವರೇನೆಂದುಕೊಳ್ಳುತ್ತಾರೋ", "ನೊಂದುಕೊಳ್ಳಬಹುದು" ಎಂದು ನಮ್ಮನ್ನು ಇಬ್ಬಂದಿತನಕ್ಕೆ ಒಳಗಾಗಿ ನಮ್ಮ ಅಭಿಪ್ರಾಯಗಳನ್ನು ನೇರವಾಗಿ ನುಡಿಯುವುದರ ಬದಲು ಮಿಥ್ಯಾ ಪ್ರಶಂಸೆಗೆ ತೊಡಗುತ್ತೇವೆ. ಅತ್ಯಂತ ಕೆಟ್ಟ ಲೇಖಕ/ಕಿಯನ್ನೂ ಹೊಗಳಿ ಅಟ್ಟಕ್ಕೇರಿಸುವುದನ್ನು ದಿನ ನಿತ್ಯ ನೋಡಬಹುದು. ಇಷ್ಟೆಲ್ಲಾ ಅಧ್ವಾನಕ್ಕೆ ಕಾರಣವೇನೆಂದರೆ, ನಾವು ವ್ಯಕ್ತಿಯ ಅಭಿಪ್ರಾಯವನ್ನು ಗಮನಿಸದೇ, ವ್ಯಕ್ತಿಯನ್ನೇ ವಿಮರ್ಶಿಸುತ್ತೇವೆ. ಎಂಥ ಒಳ್ಳೆಯ ನಟನೋ, ಕವಿಯೋ, ಆಟಗಾರನೋ ಇರಬಹುದು; ಆದರೆ ಅವರು ನಟಿಸಿದ್ದೆಲ್ಲಾ, ಬರೆದಿದ್ದೆಲ್ಲಾ, ಆಡಿದ್ದೆಲ್ಲಾ ಚಿನ್ನ ಎಂದು ಹೇಳಲಾಗದು. ಉನ್ನತ ಸ್ಥಾನಕ್ಕೇರಿರುವರ ತಪ್ಪನ್ನು ತಿಳಿಸಿ ತಿದ್ದುವುದರ ಬದಲು ಹೊಗಳಿ ಹೊನ್ನಶೂಲಕ್ಕೇರಿಸುತ್ತೇವೆ. &lt;br /&gt;  ಈ ಬ್ಲಾಗ್ ಬರೆಯಲು ಆರಂಭಿಸಿದಾಗ ನಾನೂ ಕೂಡಾ ಇದೇ ಥರದ ಒತ್ತಡಕ್ಕೆ ಒಳಗಾಗಿದ್ದೆ. ನಾನು ಬರೆಯುವುದರ ಮೂಲ ಉದ್ದೇಶ ನನ್ನ ಬರವಣಿಗೆಯ ಶೈಲಿಯನ್ನು ಉತ್ತಮಗೊಳಿಸಿಕೊಳ್ಳುವುದು, ಅಭಿಪ್ರಾಯವನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದು ಹಾಗೂ ಇತರರಿಗೆ ಕಟು ವಿಮರ್ಶೆಗೆ ಅವಕಾಶ ಕಲ್ಪಿಸುವುದು. ಅನಾಮಧೇಯ ಕನ್ನಡಿಗನಾಗಿ ನನಗೆ ಇದೆಲ್ಲಾ ಸಾಧ್ಯ ಅನಿಸಿತು. ಹೆಸರಿನಲ್ಲೇ ಎಲ್ಲಾ ಇದೆ ಎಂದು ತಿಳಿಯದೇ ಪೂರ್ವಾಗ್ರಹ ಪೀಡಿತವಲ್ಲದೇ ಬದುಕುವುದು ಕೆಲವರಿಗಷ್ಟೇ ಸಾಧ್ಯ; ಇಲ್ಲದೇ ಹೋದರೆ ಬೇಗಡೆಯ ಬದುಕೇ ಗತಿ. &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-2449485843835050491?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/2449485843835050491/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=2449485843835050491' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/2449485843835050491'/><link rel='self' type='application/atom+xml' href='http://www.blogger.com/feeds/20227321/posts/default/2449485843835050491'/><link rel='alternate' type='text/html' href='http://kannadablogs.blogspot.com/2006/12/blog-post.html' title='&lt;strong&gt;&lt;strong&gt;ನಾನೇಕೆ ಅನಾಮಧೇಯ?&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-7293843965814247204</id><published>2006-11-23T05:55:00.001-08:00</published><updated>2006-11-23T05:56:47.823-08:00</updated><title type='text'>ಬೆಂಗಳೂರು - ಬ್ಯಾಂಗಲೋರ್ ಆದರೇನು ಬೆಂದಕಾಳೂರಾದರೇನು?</title><content type='html'>ಎಲ್ಲೋ ಓದಿದ ನೆನಪು; ಡಾ ರಾಜಕುಮಾರ್ ಅವರನ್ನು ಸಂದರ್ಶಿಸುತ್ತಾ ಆಂಗ್ಲ ಪತ್ರಿಕೆಯ ವರದಿಗಾರರೊಬ್ಬರು "ನೀವೇಕೆ ಬೇರೆ ಭಾಷೆಯಲ್ಲಿ ಉತ್ತರಿಸುವುದಿಲ್ಲ, ನಟಿಸುವುದಿಲ್ಲ" ಎಂದು ಕೇಳಿದಾಗ ಡಾ. ರಾ. ಉತ್ತರಿಸಿದರಂತೆ "ಇಲ್ಲಪ್ಪಾ ನನಗೆ ಬೇರೆ ಭಾಷೆಗಳಾವುದೂ ಬರುವುದಿಲ್ಲ ಕನ್ನಡ ಮಾತ್ರ ಗೊತ್ತು". &lt;br /&gt; ಈ ಮಾತು ಡಾ. ರಾ ಅವರಿಗೆ ಮಾತ್ರವಲ್ಲ ನಮ್ಮಂಥ ಕೆಲ ಕೋಟಿ ಕನ್ನಡಿಗರಿಗೂ ಅನ್ವಯವಾಗುತ್ತದೆ. ಕನ್ನಡ ಮಾಧ್ಯಮದಲ್ಲಿ, ಹಳ್ಳಿಯ ಪರಿಸರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನನಗಂತೂ ಇಂಜಿನೀಯರಿಂಗ್ ಪದವಿ ಮುಗಿಯುವವರೆಗೂ ಇಂಗ್ಲಿಷ್ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಇವತ್ತಿಗೂ ನನ್ನ ವಿಚಾರ, ಲೆಕ್ಕಗಳು ಮನದಾಳದಲ್ಲಿ ಕನ್ನಡದಲ್ಲೇ ನಡೆದು ನಾಲಿಗೆಯಿಂದ ಹೊರಬರುವಾಗ ತುರ್ಜುಮೆಗೊಳ್ಳಬೇಕಷ್ಟೆ. ಪರಿಸ್ಥಿತಿ ಹೀಗಿರುವಾಗ ಹಲವು ಬಾರಿ ನನ್ನ ಬೆಂಗಳೂರು ಮಿತ್ರರೊಡನೆ ಮಾತನಾಡುವಾಗ ಕನ್ನಡ ಗ್ರಾಮ್ಯ ಭಾಷೆಯ ಕೆಲ ಶಬ್ದಗಳು ಬಂದೇ ಬರುತ್ತವೆ. ನಾನು ಗಮನಿಸಿದಂತೆ ಬೆಂಗಳೂರಲ್ಲಿ ಹುಟ್ಟಿ ಬೆಳೆದ ಕನ್ನಡಿಗರಿಗಷ್ಟೇ ಶುದ್ಧ ಕನ್ನಡ ಶಬ್ದಗಳಿಂದ ತೊಂದರೆಯಾಗುವುದು; ಉಳಿದವರಿಗೆ ಅರ್ಥವಾಗದ ಪರಿಸ್ಥಿತಿಯೇನಿಲ್ಲ. ವಾಸ್ತವವಾಗಿ ನೋಡಿದರೆ ಈ ಪರಿಸ್ಥಿತಿ ಕರ್ನಾಟಕದಲ್ಲಿ ಮುಂಚಿನಿಂದಲೂ ಇದೆ; ಇದು ಐಟಿ, ಬಿಟಿಗಳಿಂದಾದ ಬದಲಾವಣೆಯೇನಲ್ಲ.  ಐಟಿ, ಬಿಟಿಗಳಿಂದ ಇದು ಸರ್ವರಿಗೂ ಗೋಚರಿಸತೊಡಗಿದೆ; ಮಾಧ್ಯಮಗಳಲ್ಲಿ ಮೊದಲಿಗಿಂತಲೂ ಹೆಚ್ಚು ಚರ್ಚೆಯಾಗುತ್ತಿದೆ. ಸಹಜವಾಗಿಯೇ ಮಾಧ್ಯಮಗಳ ಚರ್ಚೆ ಸರ್ಕಾರದ ಮೇಲೆ ಒತ್ತಡ ಹೇರುವುದಲ್ಲದೆ, ಸರ್ಕಾರದ ಗಮನವನ್ನು ಹೆಸರು ಬದಲಾವಣೆಯಂಥ ಕ್ಷುಲ್ಲಕ ಕಾರ್ಯಗಳೆಡೆಗೆ ಸೆಳೆಯುತ್ತದೆ. ಇದರ ಪರಿಣಾಮವಿಷ್ಟೇ; ಮೂಲಭೂತ ಸೌಕರ್ಯಗಳ ಅವಶ್ಯಕತೆ ಹಾಗೂ ಅಭಿವೃದ್ಧಿಯೆಡೆಗೆ ಗಮನ ಹರಿಸದೇ ನಮ್ಮ ಚುನಾಯಿತ ಸದಸ್ಯರು ಅವಧಿ ಕಳೆದು ಮುಂದಿನ ಚುನಾವಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ದಿನವೂ ಕುಡಿಯುವ ನೀರಿಗೆ ಸರತಿ ನಿಲ್ಲುವ ಬೊಮ್ಮನಹಳ್ಳಿಯ ಜನರ ಸಾಲು ಉದ್ದವಾಗುತ್ತದೆ. &lt;br /&gt; ಸ್ಥಳನಾಮ ಬದಲಾವಣೆಯ ಮೂಲ ಉದ್ದೇಶ ಜನಜಾಗೃತಿ ಮೂಡಿಸುವುದು ಹಾಗೂ ಅಪಭೃಂಶಗೊಂಡ ಮೂಲನಾಮವನ್ನು ತಿದ್ದುವುದು ಎಂದು ಒಪ್ಪಬಹುದಾದರೂ, ನಾವಿರುವ ಪರಿಸ್ಥಿತಿಯಲ್ಲಿ ಪ್ರತಿ ಕಾರ್ಯದ ಆದ್ಯತೆ ನೋಡುವುದು ಅವಶ್ಯಕ. ಒಂದು ಸರಳ ಲೆಖ್ಖ: ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಐಟಿ ನೌಕರರಿದ್ದರೆ, ದಿನದ ಟ್ರಾಫಿಕ್ ಜಾಮಿನಿಂದ ಆಗುವ ನಷ್ಟದಲ್ಲಿ ಬರೀ ಹತ್ತು ನಿಮಿಷಗಳ ಉಳಿತಾಯವಾದರೂ ೧೦೦೦೦೦ * ೧೦ = ೧೦೦೦೦೦೦ / ೬೦ = ೧೬೬೬೬.೬೬ ಘಂಟೆಗಳು ಅಂದರೆ ಸುಮಾರು ೬೯೫ ದಿನಗಳು ಅಥವಾ ಸುಮಾರು ಎರಡು ವರುಷಗಳ ಉಳಿತಾಯ. ಜೀವನದ ಉನ್ನತಿಯ ಹಂತದಲ್ಲಿರುವ ನಮ್ಮ ಪ್ರಜೆಗಳ ಎರಡು ವರುಷಗಳನ್ನು ಪ್ರತೀದಿನ ಬರೀ ಹತ್ತು ನಿಮಿಷಗಳ ಟ್ರಾಫಿಕ್ ಜಾಮಿನಲ್ಲಿ ಉಳಿಸಬಹುದಾದರೆ, ಇತರೆ ಎಲ್ಲಾ ಉದ್ಯಮಗಳು, ಇಂಧನ, ಮಾಲಿನ್ಯಗಳ ಉಳಿತಾಯವನ್ನು ನೀವೇ ಊಹಿಸಿ. ಇಂಥ ಸಂದರ್ಭದಲ್ಲಿ ನಮ್ಮ ಸರ್ಕಾರ ಮತ್ತು ಅದರ ಅಧಿಕಾರವರ್ಗ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕೋ ಅಥವಾ ಕಡ್ಲೆಕಾಯಿ ಪರಿಷೆಯ ಉದ್ಘಾಟನೆ, ಮೈಸೂರಿನಲ್ಲಿ ಚುನಾವಣೆ, ಬೆಂಗಳೂರಿನ ಸ್ಥಳನಾಮ ಬದಲಾವಣೆ ಮುಖ್ಯವೋ? ನಮ್ಮನ್ನು ನೂರಾರು ವರುಷ ಆಳಿದ ಆಂಗ್ಲರು ಸಾಕಷ್ಟು ಬದಲಾವಣೆಗಳನ್ನು ಮಾಡಿದ್ದಾರೆ. ಈಗ ನಾವು ಅವುಗಳನ್ನು ಹುಡುಕಿ ಚರ್ಚಿಸುವುದು ಅನವಶ್ಯಕ. ಮುಂದೊಂದು ಕಾಲದಲ್ಲಿ ನಾವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಚರ್ಚಿಸಲು ಬೇರೇನೂ ಇಲ್ಲವಾದರೆ ಈ ಕೆಲಸಗಳನ್ನು ಮಾಡಬಹುದು.&lt;br /&gt; ಪ್ರಜಾಪ್ರಭುತ್ವದಲ್ಲಿ ಚುನಾಯಿತ ಸರ್ಕಾರವನ್ನು ನಮ್ಮ ಅನುಕೂಲಕ್ಕನುಗುಣವಾಗಿ ದುಡಿಸಿಕೊಳ್ಳುವುದೂ ಒಂದು ಕಲೆ. ಅದು ಪ್ರಜಾಪ್ರಭುತ್ವದ ಆಶಯ ಕೂಡಾ; ಅದಿಲ್ಲದೇ ಸರ್ಕಾರ ತನಗಿಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತಾ, ಮನಬಂದಂತೇ ಆಡಳಿತ ನಡೆಸಿದರೆ ಕಮ್ಯೂನಿಸಂಗೂ ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸವೇನು? ಅದೇ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳೂ ಕಾರ್ಯಪ್ರವೃತ್ತವಾದರೆ ಅನುಕೂಲ. ಜನ ಸಮಸ್ಯೆಗಳೆಡೆಗೆ ಸರ್ಕಾರದ ಗಮನ ಸೆಳೆಯಿರಿ, ಕುಂದುಕೊರತೆಗಳನ್ನು ಪ್ರಚಾರ ಪಡಿಸಿ, ಪ್ರಜೆಗಳ ಅಮೂಲ್ಯ ಕಾಲವನ್ನು ಉಳಿಸಿ. ಇದೇ ನನ್ನ ಆಶಯ.     &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-7293843965814247204?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/7293843965814247204/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=7293843965814247204' title='7 Comments'/><link rel='edit' type='application/atom+xml' href='http://www.blogger.com/feeds/20227321/posts/default/7293843965814247204'/><link rel='self' type='application/atom+xml' href='http://www.blogger.com/feeds/20227321/posts/default/7293843965814247204'/><link rel='alternate' type='text/html' href='http://kannadablogs.blogspot.com/2006/11/blog-post_23.html' title='&lt;b&gt;&lt;b&gt;ಬೆಂಗಳೂರು - ಬ್ಯಾಂಗಲೋರ್ ಆದರೇನು ಬೆಂದಕಾಳೂರಾದರೇನು?&lt;/b&gt;&lt;/b&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>7</thr:total></entry><entry><id>tag:blogger.com,1999:blog-20227321.post-116199607645295941</id><published>2006-10-27T17:35:00.000-07:00</published><updated>2006-11-12T19:50:38.569-08:00</updated><title type='text'>ನ್ಯೂಜೆರ್ಸಿಯಲ್ಲಿ "ಕೌರವ ವಧೆ"</title><content type='html'>&lt;a href="http://photos1.blogger.com/blogger/6585/530/1600/IMGP0613.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/6585/530/320/IMGP0613.jpg" border="0" /&gt;&lt;/a&gt;&lt;br /&gt;"ಅಕ್ಕ"ಳ ಆಹ್ವಾನ ಸ್ವೀಕರಿಸಿ ಬಾಲ್ಟಿಮೋರ್ ಅಧಿವೇಶನಕ್ಕೆ ಆಗಮಿಸಿದ್ದ ಕೆರೆಮನೆ ಯಕ್ಷಗಾನ ತಂಡವು ಅಭಿಮಾನಿಗಳ ಕೋರಿಕೆಯ ಮೇರೆಗೆ ತಿರುಗಾಟ ಪ್ರದರ್ಶನ ಆರಂಭಿಸಿ ಅಮೇರಿಕೆಯ ಪೂರ್ವ ತೀರದ ಉದ್ದಗಲಕ್ಕೂ ಹದಿನೈದಕ್ಕೂ ಮಿಕ್ಕಿದ ಪ್ರದರ್ಶನ ನೀಡಿ, ಅಂತಿಮ ಪ್ರಸಂಗವನ್ನು ನ್ಯೂಜೆರ್ಸಿಯಲ್ಲಿ ಅಕ್ಟೋಬರ್ ಇಪ್ಪತ್ತೆರಡರಂದು ನಡೆಸಿತು. ಹಿಂದಿನ ದಿನವಷ್ಟೇ ನ್ಯೂಯಾರ್ಕನಲ್ಲಿ ತುಂಬಿದ ಸಭಾಂಗಣದಲ್ಲಿ "ಜರಾಸಂಧ ವಧೆ"ಯ ಪ್ರಸಂಗದಲ್ಲಿ ಮನ ಸೆಳೆದಿದ್ದ ಶಂಭು ಹೆಗಡೆ ಹಾಗೂ ಶಿವಾನಂದ ಹೆಗಡೆಯವರು ಜನಪ್ರಿಯ "ಗದಾಯುದ್ಧ"ಯ ಮೂಲಕ ಯಶಸ್ವೀ ತಿರುಗಾಟಕ್ಕೆ ಅಂತಿಮ ತೆರೆ ಎಳೆದರು.  &lt;br /&gt;&lt;br /&gt;ರಾಷ್ಟ್ರ ಪ್ರಶಸ್ತಿ ವಿಜೇತ ಶಂಭು ಹೆಗಡೆಯವರ ಕೌರವನ ಪಾತ್ರ ಪ್ರತಿಯೊಬ್ಬ ಯಕ್ಷಗಾನಾಸಕ್ತ ವಿದ್ಯಾರ್ಥಿಗೆ ರಸಾಭಿವ್ಯಕ್ತಿಯ ಪಾಠದಂತೆ. ಕುರುಕ್ಷೇತ್ರ ಯುದ್ಧದ ಅಂತ್ಯದಲ್ಲಿ ಸಂಪತ್ತು, ಬಂಧುಗಳು, ರಾಜ್ಯ, ಅಧಿಕಾರ ಭೃಷ್ಠನಾಗಿ ಪರಿತಪಿಸುತ್ತಾ ಅಲೆಯುವ ಕೌರವನ ಪಾತ್ರದ ಚಿತ್ರಣ ಎಂಥ ಕಲಾವಿದನಿಗೂ ಸವಾಲೇ ಸರಿ. ಶೋಕರಸಕ್ಕೆ ತನ್ನದೇ ಆದ ಭಾಷ್ಯ ಬರೆದಿರುವ ಶಂಭು ಹೆಗಡೆಯವರು, ಯುದ್ಧಭೂಮಿಯಲ್ಲಿ ರಾಶಿ ಬಿದ್ದಿದ್ದ ತನ್ನವರ ಕಳೇಬರವನ್ನು ನೋಡಿ ವಿಲಾಪಿಸುತ್ತ "ಕುರುರಾಯನಿದನೆಲ್ಲ ಕಂಡು.." ಪದ್ಯಕ್ಕೆ ನರ್ತಿಸಿದಾಗ ಅದನ್ನು ಸ್ವತ: ಅನುಭವಿಸಿದಂತೆ ಸಭೆಯಲ್ಲೆಲ್ಲ ಮೌನ ಆವರಿಸಿತ್ತು. ನೆಬ್ಬೂರರ ಕಂಚಿನ ಕಂಠದಿಂದ ಝಂಪೆ ತಾಳದಲ್ಲಿ ಬಂದ ಆ ಪದ್ಯ, ಪ್ರಸಂಗ ಮುಗಿದ ಎಷ್ಟೋ ಘಂಟೆಗಳ ಬಳಿಕವೂ ನನ್ನನ್ನು ಕಾಡುತ್ತಿತ್ತು. ರಂಗದ ಮೇಲೆ ಮಾತುಗಾರಿಕೆಗೆ ಹೆಸರುವಾಸಿಯಾಗಿರುವ ಶಂಭು ಹೆಗಡೆಯವರ ವಾಕ್ಪಟುತ್ವದ ಒಂದು ಉದಾಹರಣೆ ನೋಡಿ:&lt;br /&gt;&lt;br /&gt;ಜರಾಸಂಧ ವಧೆಯಲ್ಲಿ ಮಾಗಧನಾಗಿ ಹಾಗೂ ಗದಾಯುದ್ಧದಲ್ಲಿ ಕೌರವನಾಗಿ ಪಾಂಡವರನ್ನು ಜರಿಯುವ ಸಂದರ್ಭ; ಅರ್ಜುನನನ್ನು "ಮೂರು ಲೋಕದ ಗಂಡ" ಎಂದು ಮುರಾರಿ ಕೊಂಡಾಡಿದಾಗ ಶಂಭು ಹೆಗಡೆಯವರ ಉತ್ತರ ಜರಾಸಂಧ ವಧೆಯಲ್ಲಿ - &lt;br /&gt;      "ಅರ್ಜುನ ನಿಮ್ಮ ಪಾಲಿಗೆ ಮೂರು ಲೋಕದ ಗಂಡನೇ ಇರಬಹುದು ಆದರೆ ನಮ್ಮ ಪಾಲಿಗೆ ಬರೀ ದಂಡ"&lt;br /&gt;ಅಂಥದೇ ಸನ್ನಿವೇಶ ಗದಾಯುದ್ಧದಲ್ಲಿ; ಕ್ಷತ್ರಿಯ ನಿಯಮದಂತೆ ಕೌರವನೊಡನೆ ಹೋರಾಡಲು ಅರ್ಜುನನನ್ನು ಆಯ್ಕೆ ಮಾಡುವಂತೆ ಪ್ರೇರೇಪಿಸುತ್ತ ಕೃಷ್ಣನು ಪಾರ್ಥನನ್ನು ಹೊಗಳಿದಾಗ ಕೌರವನಾದ ಶಂಭು ಹೆಗಡೆಯವರ ಉತ್ತರ -&lt;br /&gt;     "ಹೊಗಳುವ ತಂಡ ಇದ್ದರೆ ಯಾರು ಬೇಕಾದರೂ ಎಷ್ಟು ಲೋಕಕ್ಕೂ ಗಂಡ ಆಗಬಹುದು".&lt;br /&gt;ಎರಡೂ ಪ್ರದರ್ಶನಗಳಲ್ಲಿ ಪುನರಾವರ್ತನೆಗೆ ಅವಕಾಶವೇ ಇಲ್ಲದಂತೆ ಅಭಿಮಾನಿಗಳನ್ನು ರಂಜಿಸಿದ ಶಂಭು ಹೆಗಡೆಯವರು ಇಪ್ಪತ್ತರ ಹರೆಯವನ್ನು ನಾಚಿಸುವಂತೆ ನರ್ತಿಸಿದರು. ಭಾವ ಹಾಗೂ ಭಾಷೆಯ ಶ್ರ್‍ಏಷ್ಠ ಮಿಶ್ರಣವನ್ನು ಶಂಭು ಹೆಗಡೆಯವರ ಪ್ರದರ್ಶನದಲ್ಲಿ ಕಾಣಬಹುದು. &lt;br /&gt;&lt;br /&gt;ಭೀಮನ ಪಾತ್ರದಲ್ಲಿ ಶಿವಾನಂದ ಹೆಗಡೆಯವರದು ಹದವರಿತ ಅಭಿನಯ. ರಂಗದ ಹೊರಗಿನ ಅಪ್ಪ-ಮಗನ ಸಂಬಂಧದ ಕುರುಹು ಇಲ್ಲದಂತೇ ನಟಿಸುವ ಶಂಭು ಹಾಗೂ ಶಿವಾನಂದ ಹೆಗಡೆಯವರದು ಒಳ್ಳೆಯ ಕಲಾವಿದ ಜೋಡಿ. ಗದಾಯುದ್ಧದ ಭೀಮನನ್ನು ಅಭಿನಯಿಸುವಲ್ಲಿ ಸೃಜನಶೀಲತೆ ತೋರುವ ಶಿವಾನಂದ ಹೆಗಡೆಯವರು ಮುಂಚಿನಿಂದಲೂ ಪ್ರಚಲಿತದಲ್ಲಿರುವ ಎದುರು ಸಿಟ್ಟಿನ ಭೀಮನನ್ನು ಚಿತ್ರಿಸದೇ, ತುಸು ತಾಳ್ಮೆಯ ವ್ಯಕ್ತಿತ್ವವಾಗಿ ಅಭಿನಯಿಸುತ್ತಾರೆ. ಕೌರವನನ್ನು ಹುಡುಕಿ ಯುದ್ಧಕ್ಕೆ ಆಹ್ವಾನಿಸಲು ಹೊರಡುವಾಗ ಕೄಷ್ಣನೂಂದಿಗೆ ಭೀಮ ನಡೆಸಿದ ಚುರುಕು ಸಂಭಾಷಣೆ ಪ್ರೇಕ್ಷಕರ ಮನ ಗೆದ್ದಿತು. ಕೃಷ್ಣನ ಪಾತ್ರದಲ್ಲಿ ಡಾ. ರಾಜೇಂದ್ರ ಕೆದಿಲಾಯ ಅವರದು ಯಾವುದೇ ವೃತ್ತಿಪರ ಮೇಳದ ಕಲಾವಿದರಿಗೆ ಸವಾಲೊಡ್ಡುವ ಅಭಿನಯ. ಅವರ ಆಕರ್ಷಕ ನೃತ್ಯ ಭಂಗಿ, ಕುಣಿತದ ರಭಸಕ್ಕೆ ಪ್ರೇಕ್ಷಕರಿಂದ ಸಭೆಯಲ್ಲೆಲ್ಲಾ ಕರತಾಡನ ಮೊಳಗಿತು. ಕೃಷ್ಣನ ಪಾತ್ರ ಪೋಷಣೆಗೆ ಹೆಸರುವಾಸಿಯಾಗಿರುವ ಬಳ್ಕೂರು ಕೃಷ್ಣಯಾಜಿಯವರ ಶೈಲಿಯಲ್ಲಿ ನರ್ತಿಸಿದ ರಾಜೇಂದ್ರ ಕೆದಿಲಾಯ ಅವರನ್ನು ನ್ಯೂಜೆರ್ಸಿಯ ಅಭಿಮಾನಿಗಳು ಮೆಚ್ಚಿದರು.&lt;br /&gt;&lt;br /&gt;ಗದಾಯುದ್ಧ ಯಕ್ಷಗಾನ ಪ್ರಸಂಗದಲ್ಲಿ ಸಂಜಯನದು ಒಂದು ಪ್ರಮುಖ ಪಾತ್ರ; ಶಂಭು ಹೆಗಡೆಯವರಂಥ ಕಲಾವಿದರಿಗೆ ಶೋಕರಸ ಪ್ರದರ್ಶನಕ್ಕೆ ಇಂಬು ಕೊಡುವ ಸಂಜಯನ ಪಾತ್ರವನ್ನು ಹವ್ಯಾಸೀ ಕಲಾವಿದ ಶಶಿಧರ ಸೋಮಯಾಜಿಯವರು ಸಮರ್ಥವಾಗಿ ನಿರ್ವಹಿಸಿ ಕೌರವನ ಪಾತ್ರಪೋಷಣೆಗೆ ಸಹಕರಿಸಿದರು. ನೆಬ್ಬೂರರ ಭಾವಪೂರಿತ ಭಾಗವತಿಕೆ ಹಾಗೂ ಕೃಷ್ಣಮೂರ್ತಿಯವರ ಚಂಡೆ ಹಾಗೂ ಮದ್ದಳೆಯ ಹಿಮ್ಮೇಳ ಪ್ರಸಂಗಕ್ಕೆ ರಂಗು ತಂದಿತ್ತು. ಅಭಿಮಾನಿಗಳನ್ನು ರಂಜಿಸಿ, ಅನಿವಾಸಿ ಭಾರತೀಯರಿಗೆ ಯಕ್ಷಕಲೆಯನ್ನು ಪರಿಚಯಿಸಿ ಯಶಸ್ವೀ ತಿರುಗಾಟ ನಡೆಸಿದ ಕೆರೆಮನೆ ತಂಡದ ಪ್ರದರ್ಶನ ಬಹುಕಾಲ ನೆನಪಿನಲ್ಲಿರುತ್ತದೆ.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-116199607645295941?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/116199607645295941/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=116199607645295941' title='2 Comments'/><link rel='edit' type='application/atom+xml' href='http://www.blogger.com/feeds/20227321/posts/default/116199607645295941'/><link rel='self' type='application/atom+xml' href='http://www.blogger.com/feeds/20227321/posts/default/116199607645295941'/><link rel='alternate' type='text/html' href='http://kannadablogs.blogspot.com/2006/10/blog-post.html' title='ನ್ಯೂಜೆರ್ಸಿಯಲ್ಲಿ &quot;ಕೌರವ ವಧೆ&quot;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-20227321.post-115846466232128262</id><published>2006-09-16T20:42:00.000-07:00</published><updated>2006-11-12T19:50:38.369-08:00</updated><title type='text'>ಆನೇಕಲ್ ರಿಜಿಸ್ಟ್ರಾರ್ ಆಫ಼ೀಸಿನಲ್ಲೊಂದು ದಿನ..</title><content type='html'>ಕರ್ನಾಟಕದ ಅದರಲ್ಲೂ ಬೆಂಗಳೂರಿನ ರಿಜಿಸ್ಟ್ರಾರ್ ಕಛೇರಿಯನ್ನೂ, ಅದರ ಕಾರ್ಯವೈಖರಿಯನ್ನು ನೋಡುವ ಕಾಲವೊಂದು ಬರುತ್ತದೆ ಎಂದು ನಾನೆಣಿಸಿರಲಿಲ್ಲ. ಸಿಲ್ಕ್ ಬೋರ್ಡ್ ಸಿಗ್ನಲ್ಲಿನ, ಹೊಸೂರು ರಸ್ತೆಯ ಟ್ರಾಫ಼ಿಕ್ ಜಾಮ್‌ನಲ್ಲಿ ಅರ್ಧ ಜೀವನ ಕಳೆದು ಮೂರ್ತಿ, ಪ್ರೇಮ್‌ಜೀಗಳಾದಿಯಾಗಿ ಐ ಟಿ ದಿಗ್ಗಜರೆಲ್ಲರೂ ಸಿಲ್ಕ್ ಬೋರ್ಡ್ ಚರಂಡಿಯ ದುರ್ನಾತ ಮೂಸುತ್ತ ಸಿಗ್ನಲ್ ಕಾಯುವ ದುರ್ಗತಿಗೆ ಮರುಗುತ್ತ, ಅಮೇರಿಕೆಗೆ ಕಾಲಿಟ್ಟವನು ಅಲ್ಲಿಗೆ ತಿರುಗಿ ನೋಡುವ ವಿಚಾರ ಮಾಡದೇ ಹಾಯಾಗಿದ್ದೆ. ನಿಜವಾಗಲೂ ಹೇಳುತ್ತೇನೆ, ಬೆಂಗಳೂರಿನ ಟ್ರಾಫ಼ಿಕ್ ದುರವಸ್ತೆಯನ್ನು ನೋಡಿಯೂ "ನಮ್ಮ ಬೆಂಗಳೂರು" ಎಂದು ಹೇಳಿಕೊಂಡು ಮೆಚ್ಚಿ ನುಡಿಯಲು ದುರಭಿಮಾನಿಯಿಂದ ಮಾತ್ರ ಸಾಧ್ಯ; ಅಭಿಮಾನಿಯಿಂದಲ್ಲ. &lt;br /&gt; ಇನ್ನು ಮೂಲ ವಿಷಯಕ್ಕೆ ಬರುತ್ತೇನೆ, ಊರಿನ ಚಿಂತೆ ಮಾಡದೇ ಹಾಯಾಗಿದ್ದವನಿಗೆ ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲೊಂದು ಸೈಟು ಮಾಡುವ ಹುಕ್ಕಿ ಬಂತು. ಕಾರಣವಿಷ್ಟೇ, ತೀರಾ ಫೋನು ಮಾಡುವ ಆತ್ಮೀಯ ಸ್ನೇಹಿತರೂ ಕೂಡಾ "ಬೆಂಗಳೂರಿನಲ್ಲಿ ಸೈಟು ಇಲ್ಲದವ" ಎಂದು ನನ್ನನ್ನು ಕನಿಕರದ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರು. ಅಲ್ಲದೇ ನನ್ನ ಮನದಲ್ಲಿ ಕೂಡಾ, "ತಾಯಿ ಬಡಕಲಾದರೇನು, ಸೀರೆ ಹರಕಲಾದರೇನು ಅವಳು ಮಮತೆಯ ಖನಿಯೇ ಅಲ್ಲವೇ?, ಇಂದಲ್ಲ ನಾಳೆ ಬೆಂಗಳೂರೇ ಅಲ್ಲವೇ ನಮ್ಮ ಊರು" ಎಂಬಂಥ ಭಾವನೆಗಳು ಮುತ್ತಿಕ್ಕಿ, ಒಂದು ಸೈಟು ಖರೀದಿಸಿಯೇ ತೀರುವುದು ಎಂದು ನಿರ್ಧರಿಸಿದೆ. ಕೈಲಿ ಹಣದ ಥೈಲಿ ಹೊರಟು ಬೆಂಗಳೂರು ತಲುಪಿದರೆ ದಿನವೆರಡರಲ್ಲಿ ಸೈಟು ಹುಡುಕುವುದು ಕಷ್ಟವೇನಲ್ಲ. ಸದ್ಯಕ್ಕಂತೂ ಬೆಂಗಳೂರಿನ ರಸ್ತೆಯಲ್ಲಿ ಸಿಗುವ ಪ್ರತಿ ಮೂರನೇ ವ್ಯಕ್ತಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುತ್ತಾನೆ. &lt;br /&gt; ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಲೇಔಟ್ ಒಂದರಲ್ಲಿ ಸೈಟು ಖರೀದಿಸುವ ನಿರ್ಧಾರಕ್ಕೆ ಬಂದೆ. ಜಾಗದ ಪಹಣಿ ಪತ್ರಿಕೆ, ದಸ್ತಾವೇಜು, ಮೂಲ ಗೇಣಿ ಇತ್ಯಾದಿಯಾಗಿ ಸಾವಿರ ದಾಖಲೆಗಳನ್ನು ತೆಗೆದು ಪರಿಶೀಲನೆ ನಡೆಸಿದ್ದಾಯಿತು. ಇದು ಬರೀ ಮೊದಲನೆಯ ಹಂತ. ಇನ್ನು ರಿಜಿಸ್ಟರ್ ಹೂವೆತ್ತಿದಂತೆ ಆಗುತ್ತದೆ ಸಾರ್ ಎಂದು ಬೆಣ್ಣೆಯಲ್ಲಿ ಕೂದಲೆಳೆದಂತೆ ಹೇಳಿದ ಬಿಲ್ಡರ್. ಅದಲ್ಲದೇ ಹೋಗಲು ಕಾರಿನ ವ್ಯವಸ್ಥೆ, ಮುಂಗಡವಾಗೇ ಲಂಚ ಕೊಟ್ಟು ಕಾದಿರಿಸಿದ್ದೇವೆ ಎಂಬ ಭರವಸೆಯೂ ಬಂತು. ಲಂಚ ವ್ಯವಸ್ಥೆ ಸಾಮಾನ್ಯವಾಗಿರುವಾಗ "ಮುಂಗಡ ಲಂಚ ವ್ಯವಸ್ಥೆ" ಇದೆ ಎಂದು ತಿಳಿದು ಆಶ್ಚರ್ಯವೇನಾಗಲಿಲ್ಲ. ತಿರುಪತಿಯಲ್ಲೂ ಅದೇ ವ್ಯವಸ್ಥೆ ಇದೆಯಲ್ಲವೇ?. &lt;br /&gt; ವ್ಯವಸ್ಥಿತ ದಿನ ಮುಂಜಾನೆ ಹೊರಟು ತಲುಪಿದರೆ, ಕಛೇರಿಯಲ್ಲೊಂದು ಜನಜಾತ್ರೆ. ಆಗ ತಿಳಿಯಿತು ಸರ್ಕಾರ ಅಕ್ರಮ ಜಮೀನನ್ನು ಸಕ್ರಮಗೊಳಿಸುವ ವ್ಯವಸ್ಥೆ ಕಲ್ಪಿಸಿದೆ, ಹೇಳಿಕೇಳಿ ಸಮ್ಮಿಶ್ರ ಸರಕಾರ, ಅದೇನಾದರೂ ಉರುಳಿ ತಿರುಗಿ ಹಳೇ ಕಾಯಿದೆ ಬಂದರೆ? ಎಂಬ ಆತಂಕದಿಂದ ಜನ ಮುಗಿಬಿದ್ದು ಕರಾರು ಪತ್ರ ಪಡೆಯುತ್ತಿದ್ದಾರೆ ಎಂದು. ನಾನು ಮುಂಗಡ ಲಂಚ ಕೊಟ್ಟ ಗಿರಾಕಿಯಾದ್ದರಿಂದ ನನಗೇನೂ ತೊಂದರೆಯಿಲ್ಲ ಎಂದು ನಾನೆಣಿಸಿದ್ದು ತಪ್ಪಾಯಿತು. ಎಲ್ಲರೂ ನನ್ನಂತೇ ಮುಂಗಡ ಕಾದಿರಿಸಿದ ಗಿರಾಕಿಗಳೇ ಆಗಿದ್ದರು. ಅಪಾರ ಜನಜಂಗುಳಿಯನ್ನು ನಿಯಂತ್ರಿಸಲು ಕಛೇರಿಯವರು "ಮೊದಲು ಬಂದವರಿಗೆ ಆದ್ಯತೆ" ಪದ್ಧತಿಯಲ್ಲಿ ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದರು. ಅದನ್ನು ವಿಫಲಗೊಳಿಸುವುದು ಕಷ್ಟವೇನಲ್ಲ, ವ್ಯವಸ್ಥೆಯ ಮೂಲದಿಂದ ಬೇರುಬಿಟ್ಟಿರುವ ಭ್ರಷ್ಟಾಚಾರದಿಂದಾಗಿ ಆ ಟೋಕನ್‌ಗಳನ್ನೂ ಕಾದಿರಿಸಬಹುದು ಎಂದು ನನ್ನೊಂದಿಗೆ ತಲುಪಿದ್ದ ಏಜೆಂಟ್ ಹೇಳಿದ. ಆ ಟೋಕನ್ ಹಂಚುವ ಹುಡುಗರು ಈ ಕಾರ್ಯದಲ್ಲಿ ಪಾಲುದಾರರಾಗಿದ್ದರು.   &lt;br /&gt; ನನ್ನನ್ನು ಹೊರಗೇ ಬಿಟ್ಟು "ಹತ್ತು ನಿಮಿಷದಲ್ಲಿ ಬರುತ್ತೇನೆ" ಎಂದು ಏಜೆಂಟ್ ಮಾಯವಾದ. ರಿಜಿಸ್ಟ್ರಾರ್ ಕಛೇರಿಯಲ್ಲಿ ಈಗ ಸಾಕಷ್ಟು ಸುಧಾರಣೆಗಳಾಗಿವೆ, ಕರಾರು ಪತ್ರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತಾರೆ. ಅಲ್ಲದೇ ಕೋಡಂಗಿಯ ಹಾಗೂ ವೀರಭದ್ರನ (ಜಾಗ ಕೊಟ್ಟವ ಕೋಡಂಗಿ ಇಸಗೊಂಡವ ವೀರಭದ್ರ ಆದರೆ) ಮುಖಚಿತ್ರವನ್ನು ಡಿಜಿಟಲ್ ಕ್ಯಾಮೆರಾದ ಮೂಲಕ ತೆಗೆದು ಕರಾರಿನಲ್ಲಿ ಮುದ್ರಿಸುತ್ತಾರೆ. ಆದರೇನು ಸಕ್ರಮವನ್ನು ಅಕ್ರಮಗೊಳಿಸುವ ಕಾರ್ಯ ನಮ್ಮವರಿಗೆ ಸುಲಭಸಾಧ್ಯ. ಸುಮಾರು ಅರ್ಧ ಘಂಟೆಯ ಬಳಿಕ ನನ್ನ ಏಜೆಂಟ್ ಪ್ರತ್ಯಕ್ಷವಾದ, "ಸಾರ್, ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಅದಕ್ಕೇ ಒಳಗೆ ನೂಕುನುಗ್ಗುಲಾಗಿ ರೂಮಿನ ಬಾಗಿಲು ಅರ್ಧ ಮುರಿದಿದೆ. ಆದರೂ ತೊಂದರೆಯೇನಿಲ್ಲ, ಕ್ಯಾಮೆರಾ ಸರಿಯಾದ ನಂತರ ಮೂರನೇ ಫ಼ೈಲು ನಮ್ಮದು" ಎಂದು ಭರವಸೆಯಿತ್ತ. ಅದಾಗಲೇ ನಾವು ತಲುಪಿ ಎರಡು ಘಂಟೆ ಕಳೆದಿತ್ತು. ಸುಮಾರು ಒಂದು ಸಾವಿರ ಜನ ಒಳಗೆ ಜಮಾಯಿಸಿದ್ದರೆ, ಅದರ ಎರಡರಷ್ಟು ಜನ ಹೊರಗೆ ಸೇರಿದ್ದರು. ಹೆಂಗಸರು, ಮಕ್ಕಳು, ಅಂಗವಿಕಲರನ್ನಂತೂ ಕೇಳುವವರೇ ಇರಲಿಲ್ಲ. ಅಷ್ಟೊಂದು ಹಣ ಚಲಾವಣೆಯ ನಡುವೆ ಅವರಿಗೆ ಅವಕಾಶವಾದರೂ ಎಲ್ಲಿದೆ?&lt;br /&gt; ಕೊನೆಗೂ ನನ್ನ ಸರದಿ ಬಂತೆಂದು ಏಜೆಂಟ್ ಒಳಗೆ ಕರೆದ. ಒಳಗೆ ಹೋಗಲು ಜಾಗವಾದರೂ ಎಲ್ಲಿದೆ? ಬಾಗಿಲು, ಕಿಟಕಿ, ಗವಾಕ್ಷಿ ಸಾಧ್ಯವಿದ್ದ ಎಲ್ಲ ರಂಧ್ರಗಳಲ್ಲೂ ಜನ ನುಸುಳಿದ್ದರು. ಅದು ಹೇಗೆ ಒಳ ಸೇರಿದೆನೋ ನನಗೆ ಗೊತ್ತಿಲ್ಲ. ಖಂಡಿತವಾಗಿಯೂ ಸಶಕ್ತರ ಹೊರತಾಗಿ ಬೇರಾರಿಗೂ ಒಳ ಹೋಗಲು ಸಾಧ್ಯವೇ ಇರಲಿಲ್ಲ. ಉಸಿರುಗಟ್ಟಿಸುವ ಸನ್ನಿವೇಶ; ದೇಹದ ಸಕಲ ನರನಾಡಿಗಳಿಂದಲೂ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು. ತಿರುಗಿ ಇನ್ನೊಂದು ದಿನ ಬರೋಣವೆಂದರೆ, ನನ್ನ ರಜೆ ಮುಗಿದು ಆ ದಿನ ಸಾಯಂಕಾಲ ವಿಮಾನ ಹತ್ತಲೇ ಬೇಕಾಗಿತ್ತು. ಅಂತೂ ಅರ್ಧ ಘಂಟೆಯ ತಿಕ್ಕಾಟ, ಜಗ್ಗಾಟದ ನಂತರ ಗುಮಾಸ್ತನ ಟೇಬಲ್ ತಲುಪಿದರೆ ಕರೆಂಟ ಸರಬರಾಜು ನಿಂತಿತು. ಅದುವರೆಗೂ ಮೇಲೆ ಫ಼್ಯಾನ್ ತಿರುಗುತ್ತಿತ್ತೆಂದು ಆಗ ತಿಳಿಯಿತು. ಈಗಂತೂ ಎಲ್ಲೆಲ್ಲೂ ಬೆವರಿನ ಪ್ರವಾಹದೊಂದಿಗೆ, ಮೈಸೂರು ರಸ್ತೆಯ ವೃಷಭಾವತಿ ನದಿಯ ನೆನಪಾಯಿತು. ಇನ್ನೇನು ಸಾಧ್ಯವೇ ಇಲ್ಲ, ಸತ್ತರೆ ಸಾಯಲಿ ಯಾರಿಗೆ ಬೇಕು ಈ ಸೈಟು, ಮುಂಗಡ ಹಣ ನಾಯಿ ಪಾಲಾದರೂ ಚಿಂತೆಯಿಲ್ಲ ಎಂದೆನಿಸಿ ಹೊರಡಲು ಅನುವಾದೆ, ಆಗ ನನ್ನ ಭುಜ ತಟ್ಟಿದ ಏಜೆಂಟ್ ಹೇಳಿದ "ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್ ಇನ್ನೇನು ಪವರ್ ಬಂದೇ ಬಿಡುತ್ತದೆ". ಅವನನ್ನು ದಬಾಯಿಸುವ ಶಕ್ತಿಯೂ ಇಲ್ಲವಾಗೆ ನನ್ನ ಸ್ವರ ಗಂಟಲಲ್ಲೇ "ಬೆಬ್ಬೆಬ್ಬೆ" ಎಂದು ಉಳಿಯಿತು. ಅಷ್ಟೇ ಅಲ್ಲ ಅಲ್ಲೇ ಮೈಗೆ ಅಂಟಿಕೊಂಡಂತಿದ್ದ ಜನರಿಗೆ ಕೂಡ ನನ್ನ ಪರಿಚಯ ಮಾಡಿಕೊಟ್ಟ. ಕೆಲವರು ತೆಲುಗಿನಲ್ಲಿ "ಅಮೇರಿಕಾವಾಡು" ಎಂದೋ ಏನೋ ಹೇಳಿಕೊಂಡರು. ಹೆಚ್ಚಿನವರೆಲ್ಲಾ ತೆಲುಗಿನಲ್ಲೇ ಸಂಭಾಷಣೆ ನಡೆಸುತ್ತಿದ್ದರಿಂದ ನನಗೆ ಹೈದರಾಬಾದಿನಲ್ಲಿ ಸೈಟು ಖರೀದಿಸುತ್ತೆದ್ದೇನೋ ಎಂದು ಅನಿಸತೊಡಗಿತು.  &lt;br /&gt; ಹೀಗೆ ಸುಮಾರು ಅರ್ಧ ಘಂಟೆ ಕಳೆದಿರಬಹುದು, ಕರೆಂಟ್ ಬಂತು. ಎಲ್ಲೆಲ್ಲೂ ಹರ್ಷದ ಉದ್ಗಾರ, ಏನೋ ಗಳಿಸಿದಂತೆ ಸಂತಸ. ಟೇಬಲ್ಲಿನ ಆಚೆ ಕುಳಿತಿದ್ದವನನ್ನು ನೋಡಿ ಹಳೇ ಕನ್ನಡ ಚಿತ್ರಗಳ ವಜ್ರಮುನಿಯ ಚಿತ್ರ ನೆನಪಿಗೆ ಬಂತು. ಅದೇ ಖಳನಾಯಕನ ಮುಖಚಹರೆ, ಟೇಬಲ್ಲಿನ ಆಚೆಯ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದಂಥ ಮುಖಭಾವ; ಅಲ್ಲದೇ ಅವನ ಎಡಕ್ಕೊಬ್ಬ, ಬಲಕ್ಕೊಬ್ಬ ಏಜೆಂಟ್‌ಗಳು. ಫ಼ೈಲನ್ನು ತಮಗೆ ಬೇಕಾದಂತೆ ಹೊಂದಿಸಿ ಇಡುವುದು, ಜನರ ರುಜು ಪಡೆಯುವುದು, ಕ್ಯಾಮೆರಾದಲ್ಲಿ ಮುಖಚಿತ್ರ ತೆಗೆಯುವುದು ಇತ್ಯಾದಿಯಾಗಿ ಸಕಲ ಕೆಲಸಗಳನ್ನೂ ಅವರೇ ಮಾಡುತ್ತಿದ್ದರು. ಎಡಕ್ಕಿದ್ದವನೊಂದಿಗೆ ನನ್ನ ಏಜೆಂಟ್‌ನ ವ್ಯವಹಾರ ಕುದುರಿದ್ದರಿಂದ ಕರಾರು ಪತ್ರದ ಕೆಲಸ ಹೂವೆತ್ತಿದಂತೆ ಆಯಿತು. ಕೆಲಸದ ಮನೆ ಹಾಳಾಗಲಿ, ನನ್ನ ಗತಿಯೇನಾಗುತ್ತದೆಯೆಂದು ನಾನು ಕೇಳಿರಲಿಲ್ಲವಲ್ಲ ಅದು ನನ್ನ ತಪ್ಪು. ಅಂತೂ ಹೊರಗೆ ಬಂದಾಗ ಮದ್ಯಾಹ್ನ ಮೂರು ಘಂಟೆ. ಬೆಳಗಿಂದ ಅಲ್ಲಿವರೆಗೆ ಹೆಚ್ಚೆಂದರೆ ಇಪ್ಪತ್ತು ಕರಾರು ಪತ್ರ ಮಾಡಿಸಿರಬಹುದು ಅಷ್ಟೇ. ಕಂಪ್ಯೂಟರ್ ಇದ್ದರೇನು, ನಡೆಸುವ ಜನರೇ ಹೀಗಿರುವಾಗ?&lt;br /&gt; ಆಣೆ ಮಾಡಿ ಹೇಳುತ್ತೇನೆ, ಇದು ಕಾಲ್ಪನಿಕ ಕಥೆಯಲ್ಲ ನಾನು ಕಣ್ಣಾರೆ ಕಂಡ, ಅನುಭವಿಸಿದ ಸಂಗತಿ. ಇದು ಯಾವುದೇ ದೇಶದಲ್ಲಿ ನಡೆದಿರಲಿ, ಅಲ್ಲಿನ ವ್ಯವಸ್ಥೆ ಎಕ್ಕುಟ್ಟು ಹೋಗಿದೆ ಎಂಬುದಕ್ಕೆ ಅದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ. ವೆಂಕಟಾಚಲ ಅಲ್ಲ, ಆ ತಿರುಪತಿಯವನೇ ಬಂದರೂ ಇದು ಸುಧಾರಿಸುವುದು ಕಷ್ಟ ಎಂದು ನನಗೆ ಅನಿಸಿದ್ದು ಸುಳ್ಳಲ್ಲ. ನಿತ್ಯ ನರಕದ ಆ ಕಛೇರಿಯಲ್ಲಿ ಸುಧಾರಣೆಯಾಗಿದ್ದರೆ ತಿಳಿಸಿ.   &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-115846466232128262?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/115846466232128262/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=115846466232128262' title='4 Comments'/><link rel='edit' type='application/atom+xml' href='http://www.blogger.com/feeds/20227321/posts/default/115846466232128262'/><link rel='self' type='application/atom+xml' href='http://www.blogger.com/feeds/20227321/posts/default/115846466232128262'/><link rel='alternate' type='text/html' href='http://kannadablogs.blogspot.com/2006/09/blog-post_16.html' title='&lt;strong&gt;&lt;strong&gt;ಆನೇಕಲ್ ರಿಜಿಸ್ಟ್ರಾರ್ ಆಫ಼ೀಸಿನಲ್ಲೊಂದು ದಿನ..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-20227321.post-115841716726710500</id><published>2006-09-16T07:27:00.000-07:00</published><updated>2006-11-12T19:50:38.155-08:00</updated><title type='text'>Captivating Performance by Chittani at New Jersey</title><content type='html'>Yakshagana is an art form popular along the refreshing coastal line of Karnataka, India. Every year, soon after the lashing rains on coastal Karnataka calm down bringing in a cool breeze with a humid air, millions of fans of Yakshagana look forward to spending evenings and sometimes-sleepless nights watching their favorite stars shine as “Yakshas”. Soon after a season you will realize that it is no more the mythological stories of Ramayana and Mahabharata that keep the audience enthralled but an enchanting performance by their stars and their reviving styles.&lt;br /&gt; Gundabala, a small village near Honnavar, a town on the costal Karnataka is like Broadway of New York to Yakshagana. This is the place where stars prove their mettle and emerge from the streets. Chittani Ramachandra Hegde, popularly known as “Chittani” among his fans, is an idol revered by thousands of fans of Yakshagana. I still remember, as a kid I would walk miles of distance in the darkness of woods to watch him perform on a clear moon laden night. For those thousands of fans like me, who miss Chittani in a far away American subcontinent, it was a great opportunity to watch him perform at Unitarian Church, Princeton, New Jersey on 10th September 2006.&lt;br /&gt; “Peacock Dance”, the way a peacock would welcome fresh rainy season after a colorful spring, had Chittani style written all over it. In his own mesmerizing style the septuagenarian danced like a peacock, painting every colorful eye of feathers of peacock. This was a clear indication of the arriving main course of the feast. &lt;br /&gt; Be it Duryodhana of “Gadhayuddha”, Dushtabuddhi of “Chandrahasa Charitre”, Bhasmasura of “Bhasmasura Mohini”, characters come alive, when performed by Chittani. His performance as “Karthaveerya” of “Karthaveeryarjuna Vijaya” was typical to Chittani with the same styles as a proud mythological King. When a mean Ravana approaches him begging for a war he tries to avoid it by ignoring him, convincing him with some persuasion. The confrontation begins with a war of words between the kings each one trying to over-power the other. Chittani’s performance received a thunderous applause when he teased Ravana for his feminine antics rather than being a valiant hero.  &lt;br /&gt;All efforts of Karthaveerya go in vain when adamant Ravana doesn’t heed his advice thanks to his ever-swollen ego. Obviously, super natural powers of Shiva bestowed to Ravana do not come handy on a war front (apparently because Ravana had ignored to perform his ritual duties), an indication that world needs more peace lovers not war monger. &lt;br /&gt;The entire auditorium at Princeton was spellbound by the fantastic performance of the idol. It was a reminiscent of the old days at Gundabala, when true genius would arrive with every passing season. The team of Yakshagana enthusiasts at New Jersey deserves a special mention on the occasion for making a special weekend of Yakshagana fans around New Jersey.      &lt;br /&gt;&lt;br /&gt;- Kannadiga&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-115841716726710500?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/115841716726710500/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=115841716726710500' title='2 Comments'/><link rel='edit' type='application/atom+xml' href='http://www.blogger.com/feeds/20227321/posts/default/115841716726710500'/><link rel='self' type='application/atom+xml' href='http://www.blogger.com/feeds/20227321/posts/default/115841716726710500'/><link rel='alternate' type='text/html' href='http://kannadablogs.blogspot.com/2006/09/captivating-performance-by-chittani-at.html' title='Captivating Performance by Chittani at New Jersey'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-20227321.post-115811435433845794</id><published>2006-09-12T19:25:00.000-07:00</published><updated>2006-11-12T19:50:37.927-08:00</updated><title type='text'>ನ್ಯೂಜೆರ್ಸಿಯಲ್ಲಿ "ಚಿಟ್ಟಾಣಿಯ ಯಕ್ಷವೈಭವ"</title><content type='html'>ಚಿಟ್ಟಾಣಿಯವರನ್ನು ಬಲ್ಲದ ಯಕ್ಷಗಾನ ಅಭಿಮಾನಿಗಳಿರಲಿಕ್ಕಿಲ್ಲ. ಕನ್ನಡ ಚಲನಚಿತ್ರಕ್ಕೆ ಅಣ್ಣಾವ್ರು ಹೇಗೋ, ಕನ್ನಡ ಸಾಹಿತ್ಯಕ್ಕೆ ಕಾರಂತರು ಹೇಗೋ, ಚಿಟ್ಟಾಣಿಯವರು ಯಕ್ಷಗಾನಕ್ಕೆ ಅಂದರೆ ಅತಿಶಯೋಕ್ತಿಯೇನಲ್ಲ. ಸುತ್ತಲಿನ ಹತ್ತು ಮೈಲಿನ ಫಾಸಲೆಯಲ್ಲಿ ಚಿಟ್ಟಾಣಿಯ ಆಟವಿದ್ದರೆ ತಪ್ಪಿಸಿಕೊಳ್ಳದವರಾಗಿದ್ದು, ಸದ್ಯಕ್ಕೆ ಅಮೇರಿಕಾದಲ್ಲಿ ಅನಿವಾಸಿ ಭಾರತೀಯರಾಗಿರುವ ನನ್ನಂಥ ಅಭಿಮಾನಿಗಳಿಗೆ ಚಿಟ್ಟಾಣಿಯ ಕಾರ್ತವೀರ್ಯನನ್ನು ಪುನ: ನೋಡುವ ಅವಕಾಶ ಸಿಕ್ಕಿದ್ದು ಹಸಿದವನಿಗೆ ಮೃಷ್ಟಾನ್ನ ಭೋಜನ ದೊರೆತಂತಾಗಿತ್ತು.  &lt;br /&gt; ಸದ್ಯಕ್ಕೆ ಅಮೇರಿಕಾ ಪ್ರವಾಸದಲ್ಲಿರುವ ಚಿಟ್ಟಾಣಿಯವರನ್ನು ಆಮಂತ್ರಿಸಿ, ಲಭ್ಯವಿದ್ದ ಚಿಕ್ಕ ಕಾಲಾವಕಾಶದಲ್ಲಿ ನ್ಯೂಜೆರ್ಸಿಯ ಚರ್ಚ್ ಒಂದರ ಸಭಾಂಗಣದಲ್ಲಿ ರಂಗ ಸಜ್ಜುಗೊಳಿಸಿ, ಸುತ್ತಲಿನ ಕನ್ನಡಿಗರಿಗೆ ಈ-ಆಮಂತ್ರಣ ಕಳಿಸಿ ನಿರ್ವಾಹಿಸಿದ ನ್ಯೂಜೆರ್ಸಿಯ ಯಕ್ಷಗಾನ ಅಭಿಮಾನಿಗಳು ಒಂದು ಕಳೆಗಟ್ಟಿದ ಆಟಕ್ಕೆ ಪೀಠಿಕೆ ಹಾಕಿದ್ದರು. ಕಥಾಪ್ರಸಂಗ ಯಾವುದೇ ಇದ್ದರೂ ಸರಿ, ಚಿಟ್ಟಾಣಿಯವರ ನವಿಲು ಕುಣಿತವಿಲ್ಲದೇ ಆಟ ಪೂರ್ಣವಾಗುವುದಿಲ್ಲ. ವನವಿಹಾರಕ್ಕೆ ಹೊರಟ ಕಾರ್ತವೀರ್ಯನ "ನವಿಲು ಕುಣಿಯುತಿದೆ ನೋಡಾ.. " ಕುಣಿತಕ್ಕೆ ಬಿದ್ದ ಚಪ್ಪಾಳೆ, ಶಿಳ್ಳೆಗಳು ಗುಂಡಬಾಳದ ಆಟವನ್ನು ನೆನಪಿಸುತ್ತಿದ್ದವು. &lt;br /&gt; ಚಿಟ್ಟಾಣಿಯ ಕಾರ್ತವೀರ್ಯನನ್ನು ನೋಡಿ ಸುಮಾರು ಹದಿನೈದು ವರುಷಗಳೇ ಕಳೆದಿದ್ದವು. ಮೊನ್ನೆಯ ಪ್ರಸಂಗದಲ್ಲಿ, ರಾವಣ-ಕಾರ್ತವೀರ್ಯನ ಸಂಭಾಷಣೆಯ ಸನ್ನಿವೇಶ; ರಾವಣನನ್ನು ಸ್ತ್ರೀಲೋಲ ಎಂದು ಮೂದಲಿಸುತ್ತಾ ಕಾರ್ತವೀರ್ಯನು ಕುಣಿಯುವ ಸನ್ನಿವೇಶವು ಎಪ್ಪತ್ತರ ಹರೆಯದಲ್ಲೂ ಚಿಟ್ಟಾಣಿಯ ಕುಣಿತದ ಉತ್ಸಾಹ ಕುಂದಿಲ್ಲವೆಂಬುದನ್ನು ಸ್ಪಷ್ಟಪಡಿಸಿತ್ತು. ಹರೆಯದ ಹೆಣ್ಣಿನ ನಡಿಗೆ, ಲಾಲಿತ್ಯವನ್ನು ವಿವಿಧ ಭಂಗಿಗಳಲ್ಲಿ ಚಿಟ್ಟಾಣಿಯವರು ತೋರಿಸುತ್ತಿದ್ದರೆ, ರಂಗಮಂದಿರದ ತುಂಬೆಲ್ಲಾ ಚಪ್ಪಾಳೆಯ ಮೊರೆತ. ಯಕ್ಷಗಾನದ ಪ್ರತಿಯೊಂದು ತಾಳಕ್ಕೂ ತನ್ನದೇ ಭಾಷ್ಯ ಬರೆದ ಚಿಟ್ಟಾಣಿಯವರ ಕುಣಿತಕ್ಕೆ ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ನ ರಂಗಮಂದಿರ ಸಾಕ್ಷಿಯಾಗಿತ್ತು. ತ್ರಿವುಡೆ ತಾಳವೇ ಇರಲಿ ಅಥವಾ ಝಂಪೆ ತಾಳವೇ ಇರಲಿ, ಅದಕ್ಕೆ ಚಿಟ್ಟಾಣಿಯ ಕುಣಿತ, ರಭಸದ ಛಾಪು ಇದ್ದೇ ಇರುತ್ತದೆ. ಮೊನ್ನೆಯ ಚಿಕ್ಕ ಕಾರ್ಯಕ್ರಮದಲ್ಲೂ ಚಿಟ್ಟಾಣಿಯ ಕಲಾ ಬಿಂದಿಗೆಯ ಕೆಲ ಹನಿಗಳನ್ನು ಸವಿಯುವ ಭಾಗ್ಯ ನಮ್ಮದಾಗಿತ್ತು. &lt;br /&gt; ರುಚಿಕಟ್ಟಾದ ಊಟ ತಯಾರಾಗಬೇಕಾದರೆ ಹೇಗೆ ಸಕಲ ಪದಾರ್ಥಗಳು ಅವಶ್ಯಕವೋ ಹಾಗೇ, ಒಂದು ಆಟ ಕಳೆಗಟ್ಟಬೇಕಾದರೆ ಅನುಕೂಲಕರ ವ್ಯವಸ್ಥೆ ಬೇಕು. ಅದಕ್ಕೇ ಮೇಳದ ವ್ಯವಸ್ಥಾಪಕರು ಸಕಲ ಸಿದ್ಧತೆಗಳೊಂದಿಗೆ ಹೊರಡುತ್ತಾರೆ. ದೀಪದ ಬೆಳಕಿನಿಂದ ಜಗಮಗಿಸುವ ಅರ್ಧ ಚಂದ್ರಾಕೃತಿಯ ರಂಗಮಂಟಪದಲ್ಲಿ ಹೊಳೆಯುವ ವೇಷಗಳೊಂದಿಗೆ ಕಲಾವಿದರು ಕಂಗೊಳಿಸುತ್ತಾರೆ; ಆಟವೂ ಕಳೆಗಟ್ಟುತ್ತದೆ. ಆದರೆ ಇಲ್ಲಿ ನಡೆದ ಆಟದಲ್ಲಿ ಆ ಕುಂದುಕೊರತೆ ಬರದಂತೆ ನಿರ್ವಹಿಸಿದ ಕಾರ್ಯಕರ್ತರ ತಂಡವನ್ನು ಅಭಿನಂದಿಸಲೇಬೇಕು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-115811435433845794?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/115811435433845794/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=115811435433845794' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/115811435433845794'/><link rel='self' type='application/atom+xml' href='http://www.blogger.com/feeds/20227321/posts/default/115811435433845794'/><link rel='alternate' type='text/html' href='http://kannadablogs.blogspot.com/2006/09/blog-post.html' title='ನ್ಯೂಜೆರ್ಸಿಯಲ್ಲಿ &quot;ಚಿಟ್ಟಾಣಿಯ ಯಕ್ಷವೈಭವ&quot;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-115058235430504187</id><published>2006-06-17T15:09:00.000-07:00</published><updated>2006-11-12T19:50:37.627-08:00</updated><title type='text'>ಆನಂದ ಆಚಾರಿ ಮತ್ತು ನಾನು</title><content type='html'>ನಮ್ಮೂರಲ್ಲಿ ಮರಕೆಲಸದವನನ್ನು ಆಚಾರಿ ಅಂತಾರೆ. ನಮ್ಮ ಮನೆ ಹತ್ತಿರ ಆನಂದ ಆಚಾರಿ ಅಂತ ಒಬ್ಬ ಬಡಗಿ ಇದ್ದ. ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದ. ಅವನ ಕೆತ್ತನೆ, ಕುಶಲತೆ ಬಗ್ಗೆ ದೂಸರಾ ಮಾತೆತ್ತುವ ಹಾಗಿರಲಿಲ್ಲ. ಆದರೆ ಅವನಲ್ಲೂ ಒಂದು ಐಬು ಇತ್ತು. ಅವನು ಯಾವುದೇ ಕೆಲಸವನ್ನೂ ಸಮಯಕ್ಕೆ ಸರಿಯಾಗಿ ಮಾಡಿದ ದಾಖಲೆಯೇ ಇರಲಿಲ್ಲ. ನಮ್ಮ ಮನೆಯ ಮರಮುಟ್ಟುಗಳನ್ನು ಆನಂದ ಆಚಾರಿಯ ಹತ್ತಿರ ಕೆತ್ತಿಸುವ ಹಾಗಿದ್ದರೆ, ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆಯೇ ಬೇಕಾಗುತ್ತಿತ್ತು. ಕನಿಷ್ಟ ನಾಲ್ಕು ತಿಂಗಳಾದರೂ ಮುಂಚಿತವಾಗಿ ದಿನ ಗೊತ್ತು ಪಡಿಸಿದರೆ ಮನೆ ಗೃಹಪ್ರವೇಶಕ್ಕೆ ಬಾಗಿಲು ಸಿಗುವ ಸಾಧ್ಯತೆ ಇತ್ತು. ಇಲ್ಲವಾದರೆ ಬಾಗಿಲಿಲ್ಲದೆಯೇ ಗೃಹಪ್ರವೇಶಕ್ಕೆ ತಯಾರಿರಬೇಕು! ಇದನ್ನು ನಂಬದೇ ರಿಸ್ಕ್ ತೆಗೆದುಕೊಂಡ ಕೆಲ ಮನೆ ಮಾಲೀಕರು ಗೃಹಪ್ರವೇಶವಾಗಿ ಎಷ್ಟೋ ದಿನಗಳ ಬಳಿಕ ಬಾಗಿಲು ನಿಲ್ಲಿಸಿದ್ದರು. ಗೊತ್ತುಪಡಿಸಿದ ಹಿಂದಿನ ದಿನದವರೆಗೂ ಧೈರ್ಯವಾಗಿ ಹುಸಿ ಭರವಸೆ ನೀಡುವ ಆತನ ಮನೋಬಲ(!) ನನಗೆ ಯಾವಾಗಲೂ ಅಚ್ಚರಿಯ ಸಂಗತಿಯಾಗಿತ್ತು. ಮುಂದೊಂದು ದಿನ ನಾಡಿನ ಹೆಮ್ಮೆಯ ರಾಜಕಾರಣಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಅಂದುಕೊಳ್ಳುತ್ತಿದ್ದೆ. ಅಂತೂ ಕೊನೆಗೊಂದು ದಿನ ಅವನ ಧೈರ್ಯದ ಹಿಂದಿನ ರಹಸ್ಯ ಸರಕಾರೀ ಸರಬರಾಜಿನ ಪಾಕೀಟು ಎಂದು ತಿಳಿದಾಗ ಅಬಕಾರಿ ಇಲಾಖೆಗೆ ಮನದೊಳಗೆ ಮೆಚ್ಚುಗೆ ಸಂದಾಯಿಸಿದ್ದೆ. &lt;br /&gt;  ಮೊನ್ನೆ ಪ್ರಾಜೆಕ್ಟ್ ಮೀಟಿಂಗ್ ಮುಗಿಸಿ ಹೊರಬಂದು ಕಂಪ್ಯೂಟರ್ ಮುಂದೆ ಕುಳಿತಾಗ ನನ್ನನ್ನು ಆನಂದ ಆಚಾರಿ ಬಲವಾಗಿ ಕಾಡಿದ್ದ. ಪೂರೈಸಲು ಸಾಧ್ಯವೇ ಇರದಿದ್ದ ಗಡುವನ್ನು ಅದಾವ ಧೈರ್ಯದ ಮೇಲೆ ಒಪ್ಪಿ ಪಿರಂಗಿ ಮ್ಯಾನೇಜರ್ (ನಮ್ಮ ಬಿಳಿಯ ಮ್ಯಾನೇಜರ್ ನನ್ನು ದೇಸೀ ಭಾಷೆಯಲ್ಲಿ ಪಿರಂಗಿ ಅಂತೇವೆ) ಮುಂದೆ ತಲೆ ಅಲ್ಲಾಡಿಸಿದ್ದೆನೋ ಗೊತ್ತಿರಲಿಲ್ಲ. ನಾನೇನಾದರೂ ಒಂದು ಪ್ಯಾಕೆಟ್ ಒಳಗೆ ಸೇರಿಸಿದ್ದೆನಾ ಎಂದು ನನಗೇ ಅನಿಸುವಂಥ ಪರಿಸ್ಥಿತಿ ಇತ್ತು. ಸದ್ಯ ನ್ಯೂಯಾರ್ಕ್ ನಲ್ಲಿ ಪ್ಯಾಕೇಟ್ ಸರಬರಾಜು ಇರದಿದ್ದರಿಂದ ಆ ಸಾಧ್ಯತೆ ಇರಲಿಲ್ಲ. ಏನೇ ಇರಲಿ ಸಾಧ್ಯವಾದಷ್ಟು ಮುಗಿಸೋದು, ಹೆಚ್ಚಿಗೆ ಉಳಿದರೆ ಅದನ್ನ ಲೋಪದೋಷಗಳ ಪಟ್ಟಿ (bugs list)ಗೆ ಸೇರಿಸಿ ಸಂಭಾಳಿಸಿದರಾಯಿತು ಅಂತ ಅಂದುಕೊಂಡು ನನ್ನನ್ನೇ ಸಮಾಧಾನಿಸಿಕೊಂಡೆ. ಇದನ್ನು ಆನಂದ ಆಚಾರಿ ತನ್ನ ಕೆತ್ತನೆ ಭಾಷೆಯಲ್ಲಿ ಹೇಗೆ ಸಂಭಾಳಿಸಿದ್ದನೋ ಗೊತ್ತಿಲ್ಲ. ಸದ್ಯ ಸಾಫ಼್ಟ್‌ವೇರ್ ಕಣ್ಣಿಗೆ ಕಾಣಿಸುವುದಿಲ್ಲ ಬಾಗಿಲ ಚೌಕಟ್ಟಿನ ಥರಾ! ದಿನದ ಇಪ್ಪತ್ನಾಲ್ಕೂ ಗಂಟೆ ಕೆಲಸ ಮಾಡಿದರೂ ಸಾಧ್ಯವೇ ಇರದಿದ್ದ ಗಡುವು ಅದು. ಕೊನೆ ದಿನದವರೆಗೂ ನಾವು ಸರಿದಾರಿಯಲ್ಲಿದ್ದೇವೆ ಎಂದು ಸುಳ್ಳು ಹೇಳಿ ಪಿರಂಗಿ ಮ್ಯಾನೇಜರ್‌ನ ದಾರಿ ತಪ್ಪಿಸಿದ್ದೆ. ಯಾವುದೋ ಮಾಯಾಶಕ್ತಿ ನನ್ನನ್ನು ಈ ಪರಿಸ್ಥಿತಿಯಿಂದ ಪಾರು ಮಾಡಬಹುದು ಎಂಬ ನಂಬಿಕೆ ನನ್ನಲ್ಲಿತ್ತು. ಮನದಲ್ಲೇ ಕರಿಕಾನ ಪರಮೇಶ್ವರಿ ದೇವಿಗೆ ಸಣ್ಣ ಹರಕೆ ಕೂಡಾ ಸಲ್ಲಿಸಿದ್ದೆ. &lt;br /&gt;  ಅದಾವ ಶಕ್ತಿಯೂ ಪ್ರಯೋಗವಾದಂತೆ ತೋರಲಿಲ್ಲ. ಮ್ಯಾನೇಜರ್ ಎದುರು ನೋಡುತ್ತಿದ್ದ ದಿನ, ನನಗೆ ಬೇಡವಾಗಿದ್ದ ಆ ದಿನ ಬಂದೇ ಬಂತು. ಅಂತೂ ಕರಿಕಾನ ಪರಮೇಶ್ವರಿ ಈ ಭಕ್ತನ ಹರಕೆ ಪೂರೈಸಲಿಲ್ಲವೇ; ಅದಕ್ಕೆ ನಾನು ನಾಸ್ತಿಕನಾದದ್ದು, ಈ ದೇವರು, ದಿಂಡಿರು ಎಲ್ಲಾ ಸುಳ್ಳು ಎಂದು ಮನೆಯಲ್ಲಿ ಪತ್ನಿಯ ಎದುರು ವಾದ ಮಂಡಿಸಿ ಹರಕೆಯ ಕುರಿಯಂತೆ ತಯಾರಾಗಿ ಆಫೀಸು ತಲುಪಿದೆ. ಸರಿಯಾಗಿ ಒಂಬತ್ತು ಘಂಟೆಗೆ ಮೀಟಿಂಗ್ ರೂಮಿನಲ್ಲಿ ದುಂಡು ಮೇಜಿನ ಸುತ್ತ ಕುಳಿತೆವು. ಒಂದು ಹತ್ತು ನಿಮಿಷ ಎಲ್ಲರ ವಾರಾಂತ್ಯದ ಘಟನೆಗಳ ಸುಖದುಖ: ವಿಚಾರಿಸಿ, ಹಿಂದಿನ ದಿನದ ಬೇಸ್‌ಬಾಲ್ ಮ್ಯಾಚಿನ ಬಗ್ಗೆ ಚರ್ಚೆ ನಡೆಯಿತು. ಢವಢವಿಸುವ ಎದೆಯೊಂದಿಗೆ ನಾನೂ ಆ ಚರ್ಚೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದೆ. ಕೊನೆಗೆ ಏನನ್ನೋ ನೆನಪಿಸಿಕೊಂಡವನಂತೆ ನನ್ನ ಮ್ಯಾನೇಜರ್ ಹೇಳಿದ: "ನೋಡಿ ಆ ಪ್ರಾಜೆಕ್ಟ್ ನಾವು ಕೈ ಬಿಡುವುದೇ ಲೇಸು, ಅದನ್ನು ಪ್ರಾಯೋಜಿಸಿದ್ದ ಗುಂಪು ಹೊರಗುತ್ತಿಗೆ ನಡೆದು ಕೆಲಸವೆಲ್ಲಾ ಭಾರತಕ್ಕೆ ರವಾನೆಯಾಗಿದೆ. ಇನ್ನು ಅವರನ್ನು ನಾವು ಬೆಂಬಲಿಸುವ ಅಗತ್ಯವಿಲ್ಲ". ಮನದಲ್ಲೇ "ಯೆಸ್ ಯೆಸ್" ಎನ್ನುತ್ತಾ ನಾನು ಅರಳಿದ ಮುಖದೊಂದಿಗೆ ಬೇಸ್‌ಬಾಲ್ ಚರ್ಚೆಗೆ ಸಂಭಾಷಣೆ ತಿರುಗಿಸಿದೆ. ಪಾಪ ಆನಂದ ಆಚಾರಿಗೆ ಮಾತ್ರ ಈ ಅವಕಾಶವಿರಲಿಲ್ಲ; ಕಾಲಾಯ ತಸ್ಮೈ ನಮ:.  &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-115058235430504187?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/115058235430504187/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=115058235430504187' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/115058235430504187'/><link rel='self' type='application/atom+xml' href='http://www.blogger.com/feeds/20227321/posts/default/115058235430504187'/><link rel='alternate' type='text/html' href='http://kannadablogs.blogspot.com/2006/06/blog-post.html' title='&lt;strong&gt;&lt;strong&gt;ಆನಂದ ಆಚಾರಿ ಮತ್ತು ನಾನು&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-114764152656128736</id><published>2006-05-14T14:15:00.000-07:00</published><updated>2006-11-12T19:50:37.509-08:00</updated><title type='text'>ದೇಶಕಾಲಗಳ ನಡುವೆ..</title><content type='html'>ಚೆಸ್ ಆಟದ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನೀಡುವ ಕಿವಿಮಾತು : "ಉತ್ತಮ ಚೆಸ್ ಪಟುವಾಗಲು ಆಟದ ಎಲ್ಲ ಸೂಕ್ಷ್ಮ ನಡೆಗಳನ್ನು ಕಲಿಯಬೇಕು. ಆದರೆ ಪಂದ್ಯ ಗೆಲ್ಲುವ ಆಟಗಾರನಾಗಬೇಕಾದರೆ ಎದುರಾಳಿಗಳ ಆಟದ ನಡೆಗಳನ್ನು ಕೂಡಾ ಅರಿಯಬೇಕು". ನನ್ನ ಅಭಿಪ್ರಾಯದಲ್ಲಿ ಈ ಮಾತು ಯಾವುದೇ ರಂಗದ ವಿದ್ಯಾರ್ಥಿಗೆ ಅನ್ವಯವಾಗುತ್ತದೆ. ಉತ್ತಮ ಲೇಖಕನಾಗಬೇಕಾದರೆ ಮೊದಲು ಸಾಹಿತ್ಯವನ್ನು ಅಭ್ಯಸಿಸುವುದು ಮುಖ್ಯ. ವಾಸ್ತವವಾಗಿ ಗಮನಿಸಿದರೆ, ಒಬ್ಬ ಲೇಖಕನ ಸೃಜನಶೀಲತೆ ಕೂಡಾ ಆತನ ಓದು ಮತ್ತು ಒಡನಾಟವನ್ನವಲಂಬಿಸಿರುತ್ತದೆ. ಹೀಗೆ ಅಧ್ಯಯನಶೀಲತೆ ಪ್ರತಿಯೊಬ್ಬ ಬರಹಗಾರನ ಕರ್ತವ್ಯವಾದರೂ ಗತ ಹಾಗೂ ವರ್ತಮಾನದ ಪ್ರತಿ ಸಾಹಿತ್ಯ ಕೃತಿಗಳ ಅಧ್ಯಯನ ಪ್ರಾಯೋಗಿಕವಾಗಿ ಅಸಾಧ್ಯ. ಈ ನಿಟ್ಟಿನಲ್ಲಿ, ಚಿಂತಕರ ಚಾವಡಿ, ಸಾಹಿತ್ಯ ಕೂಟಗಳು ಬರಹಗಾರನನ್ನು ಪ್ರಸ್ತುತದಲ್ಲಿರಿಸಲು ಸಹಕಾರಿ.&lt;br /&gt;                             ಆದರೆ, "ಪರದೇಶಿ"ಗಳಾಗಿರುವ ನನ್ನಂತವರಿಗೆ, ಆಗಾಗ ನಡೆಯುವ ಕೂಟ, ಚಿಕ್ಕ ಪುಟ್ಟ ಸಮ್ಮೇಳನಗಳು ಮಾಹಿತಿ ಆಕರಿಸಲು ಸಹಾಯ ನೀಡಿದರೂ, ಹೆಚ್ಚಿನ ಸಂದರ್ಭಗಳಲ್ಲಿ ಇವು ಹರಟೆ ಕೂಟಗಳಾಗುವ ಅಪಾಯ ಜಾಸ್ತಿ. ಸದ್ಯದ ಮಟ್ಟಿಗೆ ಹಲವಾರು ಅಂತರ್ಜಾಲ ತಾಣಗಳು ಉಪಲಬ್ಧವಿದ್ದರೂ ಗಂಭೀರ ಸಾಹಿತ್ಯ ಚಿಂತನೆಗೆ ಅಥವಾ ಅಧ್ಯಯನಕ್ಕೆ ದೊರಕುವ ತಾಣಗಳು ತುಂಬಾ ಕಮ್ಮಿ. ಅದರಲ್ಲೂ ಕನ್ನಡ ಸಾಹಿತ್ಯವಂತೂ ಅಂತರ್ಜಾಲ ತಾಣಗಳಲ್ಲಿ ದೊರೆಯುವ ಸಂಭವನೀಯತೆ ಇಲ್ಲವೇ ಇಲ್ಲವೆನ್ನಬಹುದು. ಜಾಗತೀಕರಣದ ಈ ದಿನಗಳಲ್ಲಿ ಕರ್ನಾಟಕದ ಹೊರ ನಿಲ್ಲುವ ಅನಿವಾರ್ಯತೆಯಿರುವಾಗ, ಸಾಹಿತ್ಯಾಸಕ್ತಿ ಇದ್ದರೂ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ ಎಂಬ ದೂರನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಇಂಥ ಸಂದರ್ಭದಲ್ಲಿ, ಕನಿಷ್ಟ ಪಕ್ಷ ಹಲವು ಲೇಖಕರ ಕೃತಿಗಳು ವಿಮರ್ಶೆಯೊಂದಿಗೆ ಓದಲು ಲಭ್ಯವಾದರೆ ಅದೇ ಪುಣ್ಯ. ಇದೇ ಕಾರಣಕ್ಕಾಗಿ ನಾನು "ದೇಶಕಾಲ" ಪತ್ರಿಕೆಯನ್ನು ಮೆಚ್ಚುತ್ತೇನೆ.&lt;br /&gt;                            "&lt;a href="http://kannada-kathe.blogspot.com" target="_new"&gt;ಕನ್ನಡವೇ ನಿತ್ಯ&lt;/a&gt;"ದ ಶ್ರೀರಾಮ್ "ದೇಶಕಾಲ"ದ ಬಗೆಗೆ &lt;a href="http://kannada-kathe.blogspot.com/2006/02/blog-post_17.html" target="_new"&gt;ಬ್ಲಾಗೊಂದರಲ್ಲಿ&lt;/a&gt; ಬರೆದಿದ್ದಾರೆ. ಓದುಗರ ಸಂಖ್ಯಾಕೊರತೆಯಿಂದ ಬಳಲುತ್ತಿರುವ ಮುದ್ರಣ ಮಾದ್ಯಮದಲ್ಲಿ ಗಂಭೀರ ಸಾಹಿತ್ಯದ ಪತ್ರಿಕೆಯೊಂದನ್ನು ಕೈಸುಟ್ಟುಕೊಳ್ಳದೇ ಪ್ರಕಟಿಸಿ, ಸಕಾಲಕ್ಕೆ ತಲುಪಿಸುವ ಜವಾಬ್ದಾರಿ ಅಸೀಮ ಸಾಧನೆಯೇ ಸರಿ. ಪತ್ರಿಕೆಯ ಚಂದಾದಾರರನ್ನು ಹೆಚ್ಚಿಸುವುದು ಅಂದರೆ "ಮೊಟ್ಟೆ ಮೊದಲೋ ಕೋಳಿ ಮೊದಲೋ" ಎಂಬ ಸಮಸ್ಯೆಯಷ್ಟೇ ಸುಲಭ. ಚಂದಾದಾರರಿಲ್ಲದೇ ಜಾಹೀರಾತು ವೆಚ್ಚ ಭರಿಸುವುದು ಕಷ್ಟ, ಜಾಹೀರಾತಿಲ್ಲದೇ ಚಂದಾದಾರರಿಲ್ಲ. "ದೇಶಕಾಲ"ದ ಪ್ರತಿ ಸಂಚಿಕೆಯಲ್ಲೂ ಹೊಸತನವನ್ನು ನಾನಂತೂ ಗಮನಿಸಿದ್ದೇನೆ. ಕವನ ಹಾಗೂ ಕಥಾ ಪ್ರಕಾರಗಳಿಗೆ ಸಮಾನ ಅವಕಾಶ ಕಲ್ಪಿಸಿ, ಉತ್ತಮ ಲೇಖಕರ ನೂತನ ಪ್ರಕಟಣೆಗಳ ತುಂತುರು ದರ್ಶಿಸಿ, ಒಟ್ಟಾರೆ ಸಾಹಿತ್ಯ ಉಣಬಡಿಸುವ "ದೇಶಕಾಲ" ಉಪಯುಕ್ತ ಹೊತ್ತಿಗೆ ಎಂದು ನನ್ನ ಅನಿಸಿಕೆ.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114764152656128736?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114764152656128736/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114764152656128736' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/114764152656128736'/><link rel='self' type='application/atom+xml' href='http://www.blogger.com/feeds/20227321/posts/default/114764152656128736'/><link rel='alternate' type='text/html' href='http://kannadablogs.blogspot.com/2006/05/blog-post_14.html' title='&lt;strong&gt;&lt;strong&gt;ದೇಶಕಾಲಗಳ ನಡುವೆ..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-114763532942265357</id><published>2006-05-14T12:32:00.000-07:00</published><updated>2006-11-12T19:50:37.262-08:00</updated><title type='text'>"ಅವಲೋಕನ"ವನ್ನು ಗಮನಿಸಿದ "ಸುಧಾ"..</title><content type='html'>&lt;a href="http://photos1.blogger.com/blogger/6585/530/1600/blah1.jpg"&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/6585/530/320/blah1.jpg" border="0" alt="" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114763532942265357?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114763532942265357/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114763532942265357' title='1 Comments'/><link rel='edit' type='application/atom+xml' href='http://www.blogger.com/feeds/20227321/posts/default/114763532942265357'/><link rel='self' type='application/atom+xml' href='http://www.blogger.com/feeds/20227321/posts/default/114763532942265357'/><link rel='alternate' type='text/html' href='http://kannadablogs.blogspot.com/2006/05/blog-post.html' title='&lt;strong&gt;&lt;strong&gt;&quot;ಅವಲೋಕನ&quot;ವನ್ನು ಗಮನಿಸಿದ &quot;ಸುಧಾ&quot;..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-20227321.post-114602189240268065</id><published>2006-04-25T20:18:00.000-07:00</published><updated>2006-11-12T19:50:36.964-08:00</updated><title type='text'>ಒಂದು ಚಿತ್ರರಂಗದ ಕಥೆ..</title><content type='html'>ನಾನು ಇದುವರೆಗೂ ಹಲವು ನೂರು ಸಿನಿಮಾಗಳನ್ನು ನೋಡಿರಬಹುದು. ಆರಂಭದಲ್ಲಿ ನ್ಯೂಸ್ ರೀಲಿಂದ ಹಿಡಿದು ಶುಭಂ ಎನ್ನುವವರೆಗೆ ನೋಡಿರುತ್ತೇನೆ. ಒಂದು ಸಿನಿಮಾ ಮುಕ್ತಾಯದ ನಂತರದ ಜಗತ್ತು ನನ್ನನ್ನು ಸದಾ ಕಾಡುವ ವಿಷಯ. ಪ್ರೇಮ ಚಿತ್ರವಾದರೆ ಸಾಮಾನ್ಯವಾಗಿ ಹೀರೋ ಮತ್ತು ಹೀರೋಯಿನ್ ಒಂದಾಗುತ್ತಾರೆ ಇಲ್ಲವೇ ಬೇರೆಯಾಗುತ್ತಾರೆ (ಅದು ಟ್ರೆಂಡ್ ಹಾಗೂ ನಿರ್ದೇಶಕನ ಅಭಿರುಚಿಯನ್ನು ಅವಲಂಬಿಸಿದ ವಿಚಾರ). ಸುಖಾಂತ್ಯ ಅಥವಾ ದು:ಖಾಂತವನ್ನವಲಂಬಿಸಿ ಕೊನೆ ಕೆಲ ರೀಲುಗಳಲ್ಲಿ ಹೊಡೆದಾಟಗಳಿರಬಹುದು ಅಥವಾ ತ್ಯಾಗವಿರಬಹುದು. ಆದರೆ ಅದರ ನಂತರ ಏನಾಯಿತು? ವಿಜ್ರಂಭಿಸಿದ ಹೀರೋ ತನ್ನ ಜೀವನವಿಡೀ ಅದೇ ಥರಾ ಬದುಕಿದನಾ ಅಥವಾ ಬದಲಾಗಿ ಸಾಮಾನ್ಯ ಪ್ರಜೆಯಾದನಾ? ಕಥೆಯ ಅಂತ್ಯದೊಂದಿಗೆ ಪಾತ್ರದ ಆದರ್ಶ, ತ್ಯಾಗ ಮುಂತಾದ ಸದ್ಗುಣಗಳು ಮಾಯವಾದವೇ? ನನ್ನ ಅನುಭವದಲ್ಲಿ ಕೇವಲ ಬೆರಳೆಣಿಕೆಯಷ್ಟು ನಿರ್ದೇಶಕರು ಮುಂದಿನ ಮಾರ್ಗವನ್ನು ಸೂಚಿಸುವ ಅಂತ್ಯವನ್ನು ಒಂದು ಚಿತ್ರಕ್ಕೆ ದೊರಕಿಸಿಕೊಟ್ಟಿರುತ್ತಾರೆ. ಉದಾಹರಣೆಗೆ, ಉಪೇಂದ್ರ ನಿರ್ದೇಶಿಸಿದ್ದ ಓಂ ಚಿತ್ರದಲ್ಲಿ ರೌಡಿಯಾಗಿ ಮೆರೆದಿದ್ದ ಹೀರೋ ಕೊನೆಯಲ್ಲಿ ಅಂಗವಿಕಲನಾಗಿ ಬೀಡಾ/ಟೀ ಅಂಗಡಿಯಿಟ್ಟು ಜೀವನ ನಡೆಸಿದ ಎಂಬಂಥ ಸಂದೇಶವಿದೆ. ಎಷ್ಟೋ ಬಾರಿ ಒಂದು ಚಿತ್ರದ ಅಂತ್ಯವೇ ಇನ್ನೊಂದು ಚಿತ್ರದ ಆರಂಭವಾಗಬಹುದು. &lt;br /&gt;  ಇತ್ತೀಚೆಗಂತೂ ನಮ್ಮ ಕನ್ನಡ ಚಿತ್ರರಂಗದಲ್ಲಿ ರೌಡಿಸಮ್ ಕಥಾವಸ್ತುವೇ ಮಿನಿಮಮ್ ಗ್ಯಾರಂಟಿ ಚಿತ್ರಗಳಾಗಿವೆ. ಸಹಜವಾಗಿ ಪ್ರೇಕ್ಷಕ ಪ್ರಭುವಿಗೆ, ಕೊಚ್ಚಿ ಕಡಿಯುವ ಮೃಷ್ಟಾನ್ನ ಭೋಜನವಿರುತ್ತದೆ. ಇಂಥ ಎಲ್ಲ ರೌಡಿ ಚಿತ್ರಗಳ ಸಂದೇಶ ಒಂದೇ; ಆದರೂ ಜನ ಅವುಗಳನ್ನು ನೋಡ್ತಾರಲ್ಲಾ ಎಂದು ಹಲವು ಬಾರಿ ನಾನೇ ಕುತೂಹಲಕ್ಕೆ ಒಳಗಾಗಿದ್ದೇನೆ. ನನ್ನ ಅನಿಸಿಕೆ ಇಷ್ಟೆ; ಬೆಂಗಳೂರಿನಂಥ ನಗರದಲ್ಲಿ ಒದ್ದಾಡಿ ಬೇಯುವ ಜೀವಕ್ಕೆ, ಉಕ್ಕಿ ಹರಿಯುವ ಕೋಪವನ್ನು ನಿಜ ಜೀವನದಲ್ಲಿ ತೋರಿಸುವ ಅವಕಾಶವಿದ್ದರೆ, ಅದೆಷ್ಟೋ ರಾಜಕಾರಣಿಗಳು ಸೌತೆಕಾಯಿ ಕೊಚ್ಚಿದಂತೆ ಕೊಚ್ಚಿ ಹೋಗುತ್ತಿದ್ದರು. ಅದನ್ನೇ ತೆರೆಯ ಮೇಲೆ ದರ್ಶನ್ ಮಾಡಿದಾಗ ಮುಂದಿನ ಬೆಂಚಿನಲ್ಲಿ ಕುಳಿತಿರುವ ಜೀವಕ್ಕೆ ನೆಮ್ಮದಿ ಅನಿಸಬಹುದು. ಹೀಗೇ ಟ್ರಾಫಿಕ್ ಜಾಮ್ ಇರುವವರೆಗೆ, ವ್ಯವಸ್ಥೆ ಮುಂದುವರೆಯುವವರೆಗೆ ಕೊಚ್ಚಿ ಕಡಿಯುವ ಕಥಾ ವಸ್ತುವಿಗೆ ಮೋಸವಿಲ್ಲ. &lt;br /&gt;  ಇನ್ನು ತೆರೆಯ ಮೇಲೆ ಮೆರೆಯುವ ಆಸೆ ಇರುವ ಅಧಿಕಾರಿಗಳು, ರಾಜಕಾರಣಿಗಳಿಗಂತೂ ನಮ್ಮಲ್ಲಿ ಬರವಿಲ್ಲ. ಅದರಲ್ಲಿ ಮುಖ್ಯವಾಗಿ ಕೆ ಶಿವರಾಮ್, ಬಿ ಸಿ ಪಾಟೀಲ್, ಸಿ ಪಿ ಯೋಗೇಶ್ವರ್ ಮುಂತಾದವರು ಪ್ರಮುಖರು. ಹಣವೊಂದೇ ಆಸ್ತಿಯಾಗಿರುವ ಇವರು ತೆರೆಯ ಮೇಲೇ ಕರುಣಾಮಯಿ ಅಣ್ಣ, ಉತ್ತಮ ಪ್ರಜೆ, ನ್ಯಾಯಕ್ಕಾಗಿ ಹೋರಾಡುವ ನಾಯಕ ಇತ್ಯಾದಿ ಪಾತ್ರ ವಹಿಸುವುದರ ಬಗ್ಗೆ ನನ್ನ ವಿರೋಧವಿದೆ. ಒಬ್ಬ ನಟ ಇಂಥ ಪಾತ್ರಗಳನ್ನು ತನ್ನ ಹೊಟ್ಟೆಪಾಡಿಗೆ ನಿರ್ವಹಿಸುವುದಕ್ಕೂ, ಈ ಖದೀಮರ ಚಿತ್ರಗಳ ಮೂಲಕ ಜನಮಾನಸದಲ್ಲಿ ಮೆರೆಯುವ ಹೊಂಚಿಕೆಗೂ ವ್ಯತ್ಯಾಸವುಂಟು. ತೀರಾ ಇತ್ತೀಚಿನ ಉದಾಹರಣೆಯೆಂದರೆ, ಕಳೆದ ವಾರ ಬಿಡುಗಡೆಯಾದ ನಾಗ ಚಿತ್ರ. ಅದರಲ್ಲಿ ನಮ್ಮ ಖದೀಮ ಅಧಿಕಾರಿ ಕೆ ಶಿವರಾಮ್ ನ್ಯಾಯಕ್ಕಾಗಿ ಹೋರಾಡುವ ಪಾತ್ರವಿದೆಯಂತೆ. ಕಿಂಚಿತ್ತಾದರೂ ಆತ್ಮಸಾಕ್ಷಿಯಿದ್ದರೆ ಬಡ ಜನರ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಇಟ್ಟು ಈ ವ್ಯಕ್ತಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹೆಗ್ಗಣವಾಗಿರುತ್ತಿರಲಿಲ್ಲ. ಮಾತೆತ್ತಿದರೆ ದಲಿತ ಸಂಘಟನೆಗಳ ಸೆರಗ ಹಿಂದೆ ಓಡುವ ಈತನ ಸಿನಿಮಾ ಹುಚ್ಚು ಅಸಹನೀಯ. &lt;br /&gt;  ಇಂಥ ವೇಸ್ಟ್ ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ಬರುವ ಒಳ್ಳೇ ಚಿತ್ರಗಳ ಬಗ್ಗೆ ನಮಗೆ ತಿಳಿಸಲು ಪ್ರತೀವಾರ ನೋಡಿ ವಿಮರ್ಶಿಸುವ ಪತ್ರಕರ್ತರು ನಿಜಕ್ಕೂ ಗ್ರೇಟ್ ಅಂತ ನನ್ನ ಅನಿಸಿಕೆ.   &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114602189240268065?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114602189240268065/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114602189240268065' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/114602189240268065'/><link rel='self' type='application/atom+xml' href='http://www.blogger.com/feeds/20227321/posts/default/114602189240268065'/><link rel='alternate' type='text/html' href='http://kannadablogs.blogspot.com/2006/04/blog-post_25.html' title='&lt;strong&gt;&lt;strong&gt;ಒಂದು ಚಿತ್ರರಂಗದ ಕಥೆ..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-114497608459893520</id><published>2006-04-13T17:53:00.000-07:00</published><updated>2006-11-12T19:50:36.715-08:00</updated><title type='text'>ಜರಿಯುವ ರೋಗ..</title><content type='html'>ನಮ್ಮ ಜನರಿಗೊಂದು ವಿಚಿತ್ರ ಖಯಾಲಿಯಿದೆ. ಅದೆಂದರೆ, ದಿವಂಗತ ನಾಯಕರ ಲೇವಡಿ ಮಾಡುವುದು. ನೀವು ಯಾರೇ ದಿವಂಗತ ನಾಯಕರ ಉದಾಹರಣೆ ತೆಗೆದುಕೊಳ್ಳಿ, ಹಳೆಯ ತಲೆಮಾರಿನ ಅಂಬೇಡ್ಕರ್, ಮಹಾತ್ಮಾ ಗಾಂಧಿ, ನೆಹರು ಇರಬಹುದು, ಅಥವಾ ಇತ್ತೀಚಿನವರೇ ಇರಬಹುದು. ಇವತ್ತು ಅಣ್ಣಾವ್ರು ನಮ್ಮನ್ನು ಬಿಟ್ಟು ಹೋದರು, ಕಾದು ನೋಡಿ ಸದ್ಯದಲ್ಲೇ ಶುರುವಾಗಲಿದೆ ಈ ನಮ್ಮ "ಬುದ್ಧಿಜೀವಿಗಳ" ಭಾಷಣ; ಅಣ್ಣಾವ್ರು ಮತ್ತು ಅವರ ಕುಟುಂಬದವರನ್ನು ಖಂಡಿತಾ ಬಿಡುವುದಿಲ್ಲ. &lt;br /&gt;          ಈ ಸ್ವಭಾವದ ಹಿಂದಿನ ಮನೋಭಾವನೆ ನನಗೆ ಇವತ್ತಿಗೂ ಅರ್ಥವಾಗಿಲ್ಲ. ಎಷ್ಟೋ ಬಾರಿ ಈ ವಿಷಯವಾಗಿ ಆಲೋಚಿಸಿದ್ದೇನೆ. ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದ್ದರೂ ಈ ಸಮಾಜದ ಒಂದು ಅಂಗವೇ ತಾನೆ. ಅವನ  ಕಾಲಾವಧಿಯಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸಮರ್ಪಕವಾಗಿರುತ್ತವೆ ಎಂದುಕೊಳ್ಳುವುದು ಮೂರ್ಖತನ. ಒಂದು ವ್ಯಕ್ತಿತ್ವವನ್ನು ಅಖಂಡತೆಯಲ್ಲಿ ಗ್ರಹಿಸಿದಾಗ ಆ ವ್ಯಕ್ತಿಯ ಔನ್ನತ್ಯ ಕಂಡುಬರುತ್ತದೆ. ಒಮ್ಮೆ ಊಹಿಸಿ ನೋಡಿ, ನಮ್ಮ ದೈನಂದಿನ ದಿನಚರಿಯಲ್ಲಿ ಎಷ್ಟು ಬಾರಿ ಸಮಾಜದ ಬಗ್ಗೆ, ಸುತ್ತಲ ಜಗತ್ತಿನ ಬಗ್ಗೆ ಸ್ಪಂದಿಸುತ್ತೇವೆ? ನಮ್ಮೆದುರಿಗೇ ಬಿದ್ದು ಸಾಯುತ್ತಿದ್ದರೂ ನಮ್ಮ ಮನಸ್ಸು ತಪ್ಪಿ ಹೋಗುವ ಬಿ ಟಿ ಎಸ್ ಬಸ್ಸಿನ ಮೇಲೇ ಇರುತ್ತದೆ. ಹೀಗಿರುವಾಗ ಒಬ್ಬ ಗಾಂಧಿಯನ್ನು, ನೆಹರೂವನ್ನು ಕಲ್ಪಿಸಿಕೊಳ್ಳಿ. ಸಾಧಾರಣ ಬಾಳು ಬದುಕದ ಅವರ ಮನೋಬಲದ ಗರಿಮೆ ಊಹಿಸಿ. &lt;br /&gt;        ಹೋಗಲಿ, ನಾವು ಆಯ್ದುಕೊಂಡ ಕ್ಷೇತ್ರದಲ್ಲಾದರೂ ನಮ್ಮ ಸಾಧನೆ ಏನು? ಹೆಚ್ಚಿನವರದು ಸಾಧಾರಣ ಸಾಧನೆ ಅಷ್ಟೆ. ಒಬ್ಬ ತೆಂಡೂಲ್ಕರ್ ಕ್ರಿಕೆಟ್ನಲ್ಲಿ,  ರಾಜಕುಮಾರ್ ಚಲನಚಿತ್ರದಲ್ಲಿ ಸಾಧಿಸಿದ್ದನ್ನು ನಾವು ನಮ್ಮ ರಂಗದಲ್ಲಿ ಸಾಧಿಸಿದ್ದೇವೆಯೆ? ಆದರೆ ಅವಕಾಶ ಸಿಕ್ಕರೆ ತೆಂಡೂಲ್ಕರ್ರನ್ನು, ರಾಜಕುಮಾರ ಅವರನ್ನು ಜರಿಯದೇ ಬಿಡೆವು. ಯಾವುದೋ ಮ್ಯಾಚಲ್ಲಿ ಹೊಡೆಯದ ಸೆಂಚುರಿ ನಮಗೆ ಮುಖ್ಯವಾಗಿಬಿಡುತ್ತದೆ.&lt;br /&gt;        ನಮ್ಮನ್ನು ಅಗಲಿದ ಡಾ. ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಂತೂ ಶಾಂತಿ ಕಾಪಾಡದ ಜನ ನಮ್ಮವರು ಎಂದು ಸಾಬೀತಾಗಿರುವಾಗ, ಕಾಲಾನಂತರ ಅವರ ಸಾಧನೆಗಳನ್ನು ಜರಿಯುವ ವಿತಂಡವಾದಿಗಳು ನಾವಲ್ಲ ಎಂದು ತಿಳಿಯುವುದು ತಪ್ಪಾಗುತ್ತದೆ.     &lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114497608459893520?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114497608459893520/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114497608459893520' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/114497608459893520'/><link rel='self' type='application/atom+xml' href='http://www.blogger.com/feeds/20227321/posts/default/114497608459893520'/><link rel='alternate' type='text/html' href='http://kannadablogs.blogspot.com/2006/04/blog-post_13.html' title='&lt;strong&gt;&lt;strong&gt;ಜರಿಯುವ ರೋಗ..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-114489816162232959</id><published>2006-04-12T20:10:00.000-07:00</published><updated>2006-11-12T19:50:36.504-08:00</updated><title type='text'>ಶ್ರದ್ಧಾಂಜಲಿ</title><content type='html'>ಬಹುಶ: ಡಾ. ರಾಜಕುಮಾರ್ ಅವರ ಚಿತ್ರಗಳನ್ನ ನೋಡದೇ ಇರುವ ಕನ್ನಡಿಗರು ಇರಲಿಕ್ಕಿಲ್ಲ. ನಾನೂ ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ನಾನು ಮೊದಲಿಂದಲೂ ಡಾ. ರಾಜಕುಮಾರ್ ಅಭಿಮಾನಿಯೇನಾಗಿರಲಿಲ್ಲ, ಢಿಶುಂ ಢಿಶುಂ ವಿಷ್ಣುನೇ ಇಷ್ಟ ಆಗ್ತಾ ಇತ್ತು. ಒಮ್ಮೆ ಹೀಗೆ ಪರಭಾಷಾ ಪ್ರೇಮಿ ಸ್ನೇಹಿತರೊಡನೆ ವಾದಕ್ಕೆ ಇಳಿದಾಗ ನಮ್ಮ ಡಾ. ರಾಜಕುಮಾರ್ ಅವರನ್ನ ಸಮರ್ಥಿಸುವ ಪರಿಸ್ಥಿತಿ ಬಂತು. ಕನ್ನಡಿಗನಾಗಿ ಅಷ್ಟೂ ಮಾಡದಿದ್ದರೆ ಹೇಗೆ ಅಂತಾ ವಾದಸರಣಿ ಮಂಡಿಸುವಾಗ, ಒಂದು ಗೆಲ್ಲೋ ಪಾಯಿಂಟ್ ಸಿಕ್ತು. ಇಡೀ ಭಾರತದ (ಬಹುಶ: ಜಗತ್ತಿನ) ಚಲನಚಿತ್ರದ ಇತಿಹಾಸದಲ್ಲಿ ತನ್ನ ನಟನೆಗೆ ಸ್ವತ: ಹಾಡಬಲ್ಲ ಸಾಮರ್ಥ್ಯವಿರುವ ನಟ ನಮ್ಮ ಅಣ್ಣಾವ್ರು ಮಾತ್ರ. ಇದೊಂದೇ ಪಾಯಿಂಟ್ ಸಾಕಾಯ್ತು ನನ್ನ ವಾದ ಗೆಲ್ಲಲು. &lt;br /&gt;  ಆವತ್ತಿಂದ ನಾನು ಅವರ ಚಿತ್ರಗಳನ್ನು ಸೀರಿಯಸ್ ಆಗೇ ನೋಡಕ್ಕೆ ಶುರು ಮಾಡಿದೆ. ಅವರ ಥರಾ ಪಾತ್ರಪೋಷಣೆ ಮಾಡುವ ನಟರು ತುಂಬಾ ಕಮ್ಮಿ. "ದಾರಿ ತಪ್ಪಿದ ಮಗ"ದ ಪ್ರೊಫ಼ೆಸರ್ ಪಾತ್ರ ನೋಡಿದವರು ಡಾ. ರಾಜಕುಮಾರ್ ಬರೀ ಮೂರನೇ ತರಗತಿಯವರೆಗೆ ಓದಿದವರು ಅಂತಾ ಊಹಿಸುವುದು ಕಷ್ಟ. ಇದು ಬರೀ ಒಂದು ಉದಾಹರಣೆ ಅಷ್ಟೇ. ಅಂಥ ದೈವದತ್ತವಾದ ಶಾರೀರ, ಅದಕ್ಕೆ ತಕ್ಕ ಕಂಠ, ಸಮನಾದ ಪ್ರತಿಭೆ ಹೀಗೆ ನಟನಿಗೆ ಅವಶ್ಯಕವಾದ ಎಲ್ಲ ಅಂಶಗಳನ್ನೂ ಮೇಳೈಸಿಕೊಂಡು ಜನಿಸಿದ ಪ್ರತಿಭೆ ಇಂದು ನಮ್ಮಿಂದ ದೂರವಾಗಿದೆ. ಇಂಥ ಒಬ್ಬ ನಟ ಕನ್ನಡ ಚಲನಚಿತ್ರರಂಗಕ್ಕೆ ಇನ್ನೊಮ್ಮೆ ಸಿಗುವರೋ ಇಲ್ಲವೋ ಗೊತ್ತಿಲ್ಲ. ಸದ್ಯದ ಪ್ರತಿಭೆಗಳನ್ನು ನೋಡಿದರೆ ಆ ಭರವಸೆ ಹುಟ್ಟುವುದು ಕಷ್ಟ. ಅಗಲಿದ ಮೇರುನಟನಿಗೆ ಭಾವಪೂರ್ವಕ ಶ್ರದ್ಧಾಂಜಲಿ.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114489816162232959?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114489816162232959/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114489816162232959' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/114489816162232959'/><link rel='self' type='application/atom+xml' href='http://www.blogger.com/feeds/20227321/posts/default/114489816162232959'/><link rel='alternate' type='text/html' href='http://kannadablogs.blogspot.com/2006/04/blog-post_12.html' title='&lt;strong&gt;&lt;strong&gt;ಶ್ರದ್ಧಾಂಜಲಿ&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-114463289624997459</id><published>2006-04-09T18:29:00.000-07:00</published><updated>2006-11-12T19:50:36.382-08:00</updated><title type='text'>ತರಗತಿಗೆ ಮರಳುವ ಮುನ್ನ..</title><content type='html'>ಮನಸ್ಸೇ ಹಾಗೆ, ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಿ, ಅದರ ಗಟ್ಟಿತನವನ್ನು ಪರೀಕ್ಷಿಸಲು ಸವಾಲು ಎಸೆಯತೊಡಗುತ್ತದೆ. ಕೆಲವು ಬಾರಿ ನೀವು ಗೆದ್ದರೂ ಹಲವು ಸನ್ನಿವೇಶಗಳಲ್ಲಿ ಶರಣಾಗುವುದು ಅನಿವಾರ್ಯ. ಈ ಥರ ಒಮ್ಮೆ ಸಮಜಾಯಿಸಿಕೊಂಡಿರೋ, ಅಷ್ಟೇ, ಹಳ್ಳಕ್ಕೆ ಬಿದ್ದಿರಿ ಎಂದೇ ಅರ್ಥ. ಇಂಥದೇ ಒಂದು ಪರಿಸ್ಥಿತಿಯಲ್ಲಿ ನಾನು ಹಳ್ಳಕ್ಕೆ ಬಿದ್ದಿದ್ದೆ. ಸುಲಲಿತವಾಗಿ ಹಲವಾರು ವಾರಗಳು ಬರೆದವನು, ಒಮ್ಮೆ ನಿಲ್ಲಿಸಿದೆ ಅಷ್ಟೇ, ಮೂರು ತಿಂಗಳು ಕಳೆಯಿತು. &lt;br /&gt;          ಈ ವಿಷಯದಲ್ಲಿ, ವಿಚಿತ್ರಾನ್ನದ ನಳಪಾಕಿ ಸ್ನೇಹಿತ ಜೋಶಿಯವರನ್ನು ಮೆಚ್ಚುತ್ತೇನೆ. ವರುಶಗಳಿಂದ ಬಾಣಸಿಗರಾಗಿ ಕನ್ನಡಿಗರಿಗೆ ಉಣಬಡಿಸುತ್ತಿದ್ದರೂ ಒಂದು ವಾರವೂ ತಪ್ಪದೇ ವಿಷಯ ಸಂಗ್ರಹಿಸಿ ಅಂಕಣ ಬರೆಯುವ ಅವರು ನಿಜಕ್ಕೂ ಗ್ರೇಟ್!&lt;br /&gt;         ಈ ಮಧ್ಯೆ ನನಗೆ ಬೆಂಗಳೂರನ್ನು ಭೇಟಿ ಮಾಡುವ ಅವಕಾಶವೂ ಸಿಕ್ಕಿತು. ವಿದ್ಯಾರ್ಥಿ ಭವನದ ದೋಸೆ,  MTR ಊಟದಿಂದ ಹಿಡಿದು ನಿತ್ಯ ನರಕದ traffic jam ಗಳನ್ನು ಖುದ್ದಾಗಿ ಅನುಭವಿಸಿ ಬಂದೆ. ಅಂಥ ಹಲವಾರು ಅನುಭವಗಳನ್ನು ಹಂಚಿಕೊಳ್ಳುವ ಆಸೆಯಿದೆ. ಶಾಲೆಗೆ ಚಕ್ಕರ್ ಹೊಡೆದು ಮರುದಿನ ಅಳುಕಿನಿಂದ ಪುನ: ಬ್ಯಾಗೇರಿಸಿ ಹೊರಡುವ ವಿದ್ಯಾರ್ಥಿಯ ಮನಸ್ಥಿತಿಯಿಂದ ಲೇಖನಿಯನ್ನು ಕೈಗೆತ್ತಿಕೊಂಡಿದ್ದೇನೆ.&lt;br /&gt;&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-114463289624997459?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/114463289624997459/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=114463289624997459' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/114463289624997459'/><link rel='self' type='application/atom+xml' href='http://www.blogger.com/feeds/20227321/posts/default/114463289624997459'/><link rel='alternate' type='text/html' href='http://kannadablogs.blogspot.com/2006/04/blog-post.html' title='&lt;strong&gt;&lt;strong&gt;ತರಗತಿಗೆ ಮರಳುವ ಮುನ್ನ..&lt;/strong&gt;&lt;/strong&gt;'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113908376072023954</id><published>2006-02-04T12:06:00.000-08:00</published><updated>2006-11-12T19:50:36.145-08:00</updated><title type='text'>Yaddi and Ambedkar</title><content type='html'>&lt;strong&gt;&lt;strong&gt;ಕಿಡಿಗೇಡಿ ಪತ್ರಿಕೋದ್ಯಮ&lt;/strong&gt;&lt;/strong&gt;&lt;br /&gt;&lt;br /&gt;ಮತಿಹೀನ ಸಮಾಜದಲ್ಲಿ ಕಿಡಿಗೇಡಿ ವರದಿಗಾರರಿದ್ದರೆ ಏನಾಗುತ್ತದೆ? ಮೈಸೂರು ರಸ್ತೆಯಲ್ಲಿ ಹರತಾಳ, ಪ್ರತಿಕೃತಿ ದಹನವಾಗುತ್ತದೆ. ನಮ್ಮಲ್ಲಿ ಯಜ್ಞ ಹವನಗಳು ವೇದ ಕಾಲದಿಂದಲೂ ನಡೆದುಬಂದ ಪದ್ಧತಿ. ಆದರೆ ಒಂದೇ ವ್ಯತ್ಯಾಸವೆಂದರೆ ಋಗ್ವೇದದಲ್ಲಿ ಪ್ರಾರ್ಥನೆಗಾಗಿ ದಹನ ನಡೆಸಿದರೆ ಕಲಿಯುಗದಲ್ಲಿ ಪ್ರತಿಭಟನೆಗಾಗಿ ನಡೆಸುತ್ತಾರೆ. ಪ್ರತಿವರ್ಷ ಅಗ್ನಿದೇವನಿಗೆ ಸಲ್ಲುವ ಮಾಮೂಲಿನಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಹೋಮ, ಹವನಗಳ ಪಾಲು ಹೆಚ್ಚೋ ಅಥವಾ ಪ್ರತಿಭಟನಾಕಾರರು ನಡೆಸುವ ಪ್ರತಿಕೃತಿ ದಹನದ ಪಾಲು ಹೆಚ್ಚೋ ಎಂಬುದು ಒಂದು ಸಂಶೋಧನಾ ವಿಷಯ ಎಂದು ನನ್ನ ಅನಿಸಿಕೆ. ನಮ್ಮ ಅಗಲಿದ ನಾಯಕರೇನಾದರೂ ಅಗ್ನಿದೇವನ ಬಳಿ ಅಕೌಂಟ್ ಇಟ್ಟಿದ್ದರೆ, ಹೆಚ್ಚಿನ ಜಮಾ ಇರುವುದು ಅಂಬೇಡ್ಕರ್ ಅವರ ಖಾತೆಯಲ್ಲಿ. ಅಂಬೇಡ್ಕರ್ ತೀರಿಹೋಗಿ ದಶಕಗಳೇ ಕಳೆದಿದ್ದರೂ ಅವರು ಇಂದಿಗೂ ಪ್ರಸ್ತುತರಾಗಿರುವುದು ಅವರ ಸಾಧನೆಗಳಿಗಿಂತ ಹೆಚ್ಚಾಗಿ ಅವರ ಅನುಯಾಯಿ ಪಡೆಗಳಿಂದ; ಅವರನ್ನು ಎದುರಿಸುವ ಶಕ್ತಿ ಯಾರಿಗಿದೆ. ಸ್ವಲ್ಪ ಯಾಮಾರಿಸಿದರೂ ಕಷ್ಟ; ಬೇಕಿದ್ದರೆ ನಮ್ಮ ಉಪಮುಖ್ಯಮಂತ್ರಿ ಯಡ್ಡಿಯನ್ನೇ ಕೇಳಿ.&lt;br /&gt;ಮೊನ್ನೆ ತಾನೆ ಅಧಿಕಾರದ ಪ್ರಮಾಣವಚನ ಪಡೆದು ಯಡ್ಡಿ ವಿಧಾನಸೌಧದೊಳಕ್ಕೆ ಕಾಲಿಟ್ಟರೋ ಇಲ್ಲವೋ, ವರದಿಗಾರನೊಬ್ಬನ ಕಿತಾಪತಿ ಬುದ್ಧಿಗೆ ಬಲಿಯಾಗಬೇಕಾಯಿತು. ಆದದ್ದಿಷ್ಟು; ನಮ್ಮ ಯಡ್ಡಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ವಾಸ್ತುಹೋಮ ನಡೆಸಿ ಕಛೇರಿ ಪ್ರವೇಶಿಸಿದಾಗ ಸಹಜವಾಗಿ ಪತ್ರಕರ್ತರ ಗುಂಪು ಹಿಂಬಾಲಿಸಿತು. ಅದು ಖರ್ಗೆ ಮಂತ್ರಿಮಂಡಲದಲ್ಲಿದ್ದಾಗ ಇರುತ್ತಿದ್ದ ರೂಮು; ಖರ್ಗೆಯ ವಾಸ್ತುವಿಗೆ ದೋಷವಿದ್ದರೂ ಯಡ್ಡಿಯ ವಾಸ್ತುವಿಗೆ ಸೂಕ್ತ ಎಂದು "ವಾಸ್ತು-ಶಾಸ್ತ್ರಜ್ಞಾನಿ"ಯೊಬ್ಬರು ಸಲಹೆ ನೀಡಿದ್ದರು. ಹಳೇ ರೂಮು; ಧೂಳು ಪಾಳು ಇರುವುದು ಸಹಜವೇ. ಅದನ್ನು ಸ್ವಲ್ಪ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಹೇಳಿದ್ದರು; ಮೂಲೆಯಲ್ಲಿ ಜೇಡರ ಬಲೆಯ ಹಿಂದೆ ಧೂಳು ಕುಡಿಯುತ್ತಾ ಬಿದ್ದಿದ್ದ ನಮ್ಮ ಅಂಬೇಡ್ಕರ್, ಇಂದಿರಾಗಾಂಧಿ ಇತ್ಯಾದಿ ನಾಯಕರ, ರಾಮ, ಗಣಪತಿ ಇತ್ಯಾದಿ ದೇವರುಗಳ ಫೊಟೊ ಇತ್ತು. ಅವನ್ನು ತಿಕ್ಕಿ ತೊಳೆಯಲು ಹೊರತೆಗೆಯುವಾಗ ಯಡ್ಡಿ ಕೂಡಾ ಅಲ್ಲಿ ಇರಲಿಲ್ಲ. ಕೆಲಸದವರು ತಮ್ಮ ಪಾಡಿಗೆ ಫೊಟೊಗಳನ್ನು ಹೊರತೆಗೆಯುವಾಗ ಅಲ್ಲೇ ಇದ್ದ ಕಿಡಿಗೇಡಿ ವರದಿಗಾರನ ಬುದ್ಧಿಗೆ ಬಂದದ್ದು ನೋಡಿ; ಆ ವಿಷಯವನ್ನೇ ಸ್ಕೂಪ್ ಮಾಡಿ, ಸ್ವಲ್ಪ ಸೆನ್ಸಾರ್ ಮಾಡಿ, ಅಂಬೇಡ್ಕರ್ ಫೋಟೊ ಹೊರಬಂದ ವಿಷಯವನ್ನು ಬರೆದ.&lt;br /&gt;ಇಷ್ಟೇ ಸಾಕಾಗಿತ್ತು ನಮ್ಮ ಬುದ್ಧಿಗೇಡಿ ಜನರಿಗೆ, ಹಿಂದಿಲ್ಲ ಮುಂದಿಲ್ಲ, ಅಗ್ನಿದೇವನಿಗೆ ಅಜೀರ್ಣವಾಗುವಷ್ಟು ಮಾಮೂಲು ಸಲ್ಲಿಸಿದರು. ಪಾಪ ಯಡ್ಡಿಯ ಪರಿಸ್ಥಿತಿ ಗಂಭೀರವಾಗಿ ಹೋಯ್ತು, ಮೊದಲೇ ಅಧಿಕಾರದಲ್ಲಿ ಅಂಬೆಗಾಲಿಕ್ಕುತ್ತಿರುವ ಯಡ್ಡಿ ಈ ವಿಪರೀತಕ್ಕೆ ಹೆದರಿ ಹೋಗಿ ಅರ್ಜೆಂಟಾಗಿ ಹೇಳಿಕೆ ಕೊಡಬೇಕಾಯಿತು; ಅಲ್ಲದೇ ಅಂಬೇಡ್ಕರ್ ಬಗ್ಗೆ ಮತ್ತೊಮ್ಮೆ ಓದಿ, ಅವರ ಸಾಧನೆಗಳನ್ನು ಬಣ್ಣಿಸಬೇಕಾಯಿತು. ಈ ಮಧ್ಯೆ ಯಡ್ಡಿಗೆ ವಾಸ್ತು ನೋಡಿ ಮುಹೂರ್ತ ಇಟ್ಟುಕೊಟ್ಟ ಪೂಜಾರಿ ಎಲ್ಲಿ ಎಂದು ತಿಳಿದುಬಂದಿಲ್ಲ, ಎಲ್ಲೋ ಲೆಕ್ಕ ತಪ್ಪಿರಬೇಕು ಎಂದು ನನಗೆ ಅನುಮಾನ. ನಮ್ಮ &lt;a href="http://majavani.blogspot.com" target="_new"&gt;ಮಜಾವಾಣಿ &lt;/a&gt;ಇದರ ಬಗ್ಗೆ ಪತ್ತೆ ಹಚ್ಚಿದರೆ, ಹೆಚ್ಚಿನ ಮಾಹಿತಿ ತಿಳಿಯಬಹುದು.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113908376072023954?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113908376072023954/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113908376072023954' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/113908376072023954'/><link rel='self' type='application/atom+xml' href='http://www.blogger.com/feeds/20227321/posts/default/113908376072023954'/><link rel='alternate' type='text/html' href='http://kannadablogs.blogspot.com/2006/02/yaddi-and-ambedkar.html' title='Yaddi and Ambedkar'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-113885572078693307</id><published>2006-02-01T20:46:00.000-08:00</published><updated>2006-11-12T19:50:35.909-08:00</updated><title type='text'>Quota and Infosys</title><content type='html'>&lt;strong&gt;&lt;strong&gt;ಊರುಗೋಲು ಕೊಟ್ಟು ಕಾಲು ಕಸಿದುಕೊಂಡರು..&lt;/strong&gt;&lt;/strong&gt;&lt;br /&gt;&lt;br /&gt;ಮೊನ್ನೆ ಚಾಮರಾಜನಗರದ ರಾಜಕಾರಣಿ ಶ್ರೀನಿವಾಸಪ್ರಸಾದ್ ಅವರು ಸಭೆಯೊಂದರಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತ ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು "ಕರಿಯ ಆಂಗ್ಲ" ಎಂದು ಕರೆದಿರುವುದಾಗಿ ವರದಿಯಾಗಿದೆ. ಇಲ್ಲಿ ನಾನು ಮೀಸಲಾತಿಯ ಅವಶ್ಯಕತೆ ಅಥವಾ ಅನುಕೂಲತೆಯ ಬಗ್ಗೆ ಹೇಳಲು ಹೊರಟಿಲ್ಲ. ಆದರೆ ನಾನು ಮೆಚ್ಚುವ ಸಮಕಾಲೀನ ರಾಜಕಾರಣಿಗಳಲ್ಲಿ ಒಬ್ಬರಾದ ಶ್ರೀನಿವಾಸಪ್ರಸಾದ್ ಅವರೂ ಕೂಡಾ ಈ ವಿಷಯದಲ್ಲಿ ಹೊಂದಿರುವ ಅಭಿಪ್ರಾಯ ನೋಡಿ ಸುಮ್ಮನಿರಲಾಗಲಿಲ್ಲ. ಅದಕ್ಕೆ ಈ ಅಂಕಣ.&lt;br /&gt;ನಾನು ಓದಿದ್ದು ಬಡ ವರ್ಗದ ಸರ್ಕಾರಿ ಶಾಲೆಯಲ್ಲಿ. ನನ್ನ ಸಹಪಾಠಿಗಳಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಅವರಲ್ಲಿ ಒಬ್ಬ ನಿಜಕ್ಕೂ ಪ್ರತಿಭಾವಂತನಾಗಿದ್ದ. ಜಾತಿಯಲ್ಲಿ ಪರಿಶಿಷ್ಟನಾಗಿದ್ದರೂ ಓದಿನಲ್ಲಿ ಯಾವುದೇ ಬ್ರಾಹ್ಮಣ ಅಥವಾ ಮೇಲ್ಜಾತಿಯವರಿಗಿಂತ ಕಮ್ಮಿಯಿರಲಿಲ್ಲ. ನಾವು ಇಬ್ಬರೂ ಪದವಿ ಮುಗಿಸಿದಾಗ ಅವನಿಗೆ ಜಾತಿಯ ಆಧಾರದ ಮೇಲೆ ಸರಕಾರಿ ಕಚೇರಿಯೊಂದರಲ್ಲಿ ಕಾರಕೂನಿಕೆಯ ಕೆಲಸ ಅನಾಯಾಸವಾಗಿ ದೊರಕಿತು. ವಾಸ್ತವವಾಗಿ ಅವನಿಗೆ ಆ ಕೆಲಸದ ಅವಶ್ಯಕತೆಯಿರಲಿಲ್ಲ, ಅಲ್ಲದೇ ಅವನು ಉನ್ನತ ಶಿಕ್ಷಣ ಪಡೆದು ಸಾಕಷ್ಟು ಮೇಲೇರುವ ಸಾಧ್ಯತೆಯೂ ಇತ್ತು. ಆದರೆ ಅದನ್ನು ನಿರಾಕರಿಸಿ ದೂರದ ಗುರಿಯನ್ನು ಆಯ್ಕೆ ಮಾಡಲು ಈ ಆಮಿಷ ತೊಡಕಾಗಿತ್ತು. ಸಹಜವಾಗೇ ಅವನು ಕಾರಕೂನಿಕೆ ಹಿಡಿದ; ನನ್ನ ಅಭಿಪ್ರಾಯದಲ್ಲಿ ಮೀಸಲಾತಿ ಅವನ ವಿವೇಚನೆಯನ್ನು ಕಿತ್ತುಕೊಂಡಿತ್ತು.&lt;br /&gt;ಇದರ ಅರ್ಥ ನಾನು ಮೀಸಲಾತಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತೇನೆ ಎಂದಲ್ಲ, ಹಲವಾರು ಸಂದರ್ಭಗಳಲ್ಲಿ ಮೀಸಲಾತಿಯಿಂದಾಗಿ ಎಷ್ಟೋ ಕುಟುಂಬಗಳು ಹೊತ್ತಿನ ತುತ್ತಿನ ಆಧಾರ ಕಂಡುಕೊಂಡಿವೆ; ಸಾಮಾಜಿಕ ನ್ಯಾಯ ವಿತರಣೆಯ ಪ್ರಮುಖ ಅಂಗವಾಗಿ ಮೀಸಲಾತಿಯ ಅವಶ್ಯಕತೆ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಅದನ್ನು ಪಡಿತರ ವ್ಯವಸ್ಥೆಯ ಥರ ವಿತರಣೆ ಮಾಡಿದಾಗ ಸಾಕಷ್ಟು ಅನಾಹುತಗಳೂ ಸಂಭವಿಸುತ್ತವೆ ಎಂದು ತಿಳಿಸಲು ಮೇಲಿನ ಉದಾಹರಣೆ ನೀಡಿದೆ ಅಷ್ಟೆ.&lt;br /&gt;ಇನ್ನು ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯ ಅಳವಡಿಕೆಯ ವಿಷಯ ಕೈಗೆತ್ತಿಕೊಂಡರೆ, ಹಲವಾರು ಪ್ರಶ್ನೆಗಳು ಮೂಡುತ್ತವೆ. ಮೀಸಲಾತಿ ಯಾವ ಪ್ರಮಾಣದಲ್ಲಿ ಇರಬೇಕು? ಬರೀ ಪರಿಶಿಷ್ಟ ವರ್ಗ, ಪಂಗಡಗಳು ಮಾತ್ರ ಅರ್ಹರೇ ಅಥವಾ ಪ್ರತಿ ಅಲ್ಪಸಂಖ್ಯಾತ ಗುಂಪಿನ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಮೀಸಲಾತಿ ಅಳವಡಿಸಬೇಕೆ? ಈ ನಿಟ್ಟಿನಲ್ಲಿ ಪ್ರಕಟವಾಗಿರುವ ಹಲವಾರು ಸರ್ಕಾರಿ ಆಯೋಗಗಳ ವರದಿ ಆಧಾರಿಸಿ ಮೀಸಲಾತಿ ನೀಡಬಹುದು ಎಂದುಕೊಂಡರೂ, ಕಾಲಕಾಲಕ್ಕೆ ಬದಲಾಗುವ ಜನಸಂಖ್ಯೆಯಿಂದಾಗಿ ವಿವಿಧ ವರ್ಗಗಳ ಪ್ರಾತಿನಿಧ್ಯದ ಅನುಪಾತ ಬದಲಾಗುವುದಿಲ್ಲವೇ? ಉದಾಹರಣೆಗೆ, ಐದು ವರುಷಗಳ ಅವಧಿಯಲ್ಲಿ ನಾಯಕ ಪಂಗಡದವರ ಜನಸಂಖ್ಯೆ ಒಕ್ಕಲಿಗರ ಜನಸಂಖ್ಯೆಗಿಂತ ಅಭಿವೃದ್ಧಿಯಾದರೆ, ಮೀಸಲಾತಿಯ ಪ್ರಮಾಣ ಕೂಡ ಬದಲಾಗಬೇಡವೇ? ಇತ್ಯಾದಿ. ಹೀಗೆ ಪ್ರಶ್ನಿಸುತ್ತ ಹೋದರೆ ಅಂತ್ಯವೇ ಇಲ್ಲದ ಪಟ್ಟಿಯನ್ನು ನಾವು ಊಹಿಸಬಹುದು. ಕಳೆದ ಐವತ್ತು ವರುಷಗಳಲ್ಲಿ ನಡೆದ ಸಾಮಾಜಿಕ ನ್ಯಾಯ ವಿತರಣೆಯನ್ನು ಅವಲೋಕಿಸಿದರೂ ಕೂಡಾ ಮನದಲ್ಲೇ ಒಂದು ಶಂಕೆ ಮೂಡುತ್ತದೆ; ನಾವು ಅಲ್ಪಸಂಖ್ಯಾತರಿಗೆ ಊರುಗೋಲು ನೀಡಿ ಅವರ ಕಾಲು ಕಸಿದೆವೇ? ಡಾರ್ವಿನ್ನನ ಪ್ರಕಾರ, ಪ್ರಕೃತಿಯಲ್ಲಿ ನಡೆದಂತೆ ಪ್ರಬಲತೆಯ ಆಯ್ಕೆ ನಡೆದರೆ ನಮ್ಮ ಅಲ್ಪಸಂಖ್ಯಾತ ಸೋದರರ ಅವನತಿಯಾಗುವುದು ಖಂಡಿತ. ಹೋರಾಟದ ಸ್ಥೈರ್ಯವನ್ನು ಕಳೆದುಕೊಂಡ ಅವರು ಕುಸಿದರೆ, ಅವರ ಸೋಲಿನಲ್ಲಿ ನಮ್ಮ ಪಾಲೂ ಇಲ್ಲವೇ?&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113885572078693307?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113885572078693307/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113885572078693307' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/113885572078693307'/><link rel='self' type='application/atom+xml' href='http://www.blogger.com/feeds/20227321/posts/default/113885572078693307'/><link rel='alternate' type='text/html' href='http://kannadablogs.blogspot.com/2006/02/quota-and-infosys.html' title='Quota and Infosys'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113850115854851378</id><published>2006-01-28T18:17:00.000-08:00</published><updated>2006-11-12T19:50:35.637-08:00</updated><title type='text'>History Repeats</title><content type='html'>&lt;strong&gt;&lt;strong&gt;ಪಂಚಶೀಲ ಹರಣ&lt;/strong&gt;&lt;/strong&gt;&lt;br /&gt;&lt;br /&gt;                       ಸರಿಯಾದ ಕಾರಣವಿಲ್ಲದೇ, ಕಣ್ಣಾರೆ ಕಾಣದೇ, ಯಾವುದನ್ನೂ ನಂಬದ ನಾನು ಸ್ವತ: ನೋಡದಿದ್ದರೂ, ನಮ್ಮ ಪ್ರಥಮ ಪ್ರಧಾನಿ ನೆಹರೂ ಅವರನ್ನು ಅಭಿಮಾನಿಸುತ್ತೇನೆ. ಕಾರಣವೇನೆಂದರೆ, ನನ್ನ ಸಂಬಂಧಿ ಹಿರಿಯರೊಬ್ಬರು ನೆಹರೂ ಅವರನ್ನು ಕಣ್ಣಾರೆ ಕಂಡವರು, ನೆಹರೂ ವ್ಯಕ್ತಿತ್ವ, ವಾಕ್ಪಟುತ್ವವನ್ನು ಮೆಚ್ಚಿದವರು, ನನ್ನನ್ನು ಸಮಜಾಯಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ಸ್ವತ: ಒರೆಗೆ ಹಚ್ಚುವುದು ಅಸಾಧ್ಯವಾದದ್ದರಿಂದ ಅವುಗಳನ್ನು ನಂಬಿ ನೆಹರೂ ಅವರ ಆದರ್ಶಗಳ ಅಭಿಮಾನಿಯಾಗಿದ್ದೇನೆ. ಆದರೆ ನೆಹರೂ ಅವರ ಕೆಲ ನೀತಿಗಳನ್ನು ನಾನು ಖಂಡಿತಾ ಒಪ್ಪುವುದಿಲ್ಲ, (ಅದಕ್ಕೆ generation gap ಕಾರಣವಿರಬಹುದು). ಅವುಗಳಲ್ಲಿ ಮುಖ್ಯವಾಗಿ "ಪಂಚಶೀಲ" ಒಂದು. ಪಂಚಶೀಲವನ್ನು ನೆಹರೂ ಅವರು ಎಷ್ಟು ಒಪ್ಪಿ ಅಪ್ಪಿದ್ದರೆಂದರೆ, ಚೈನಾ ಅದನ್ನು ಅಸಿಂಧುಗೊಳಿಸಿ ಭಾರತದ ಮೇಲೆ ದಾಳಿ ನಡೆಸಿ ಮಣಿಸಿದಾಗ, ಸಮರದಲ್ಲಿ ಸೋತ ನೋವಿಗಿಂತ ನೆಹರೂರವರನ್ನು ಕಂಗೆಡಿಸಿದ್ದು "ಪಂಚಶೀಲಹರಣ".&lt;br /&gt;                        ಒಂದೇ ವಾಕ್ಯದಲ್ಲಿ ಹೇಳುವುದಾದರೆ, ನೆಹರೂ ಮೂಸೆಯಿಂದ ಹೊರಬಂದ ಪಂಚಶೀಲ ತತ್ವಗಳು ಭಾರತದ ನೆರೆಹೊರೆಯ ಬಾಂಧವ್ಯ ವೃದ್ಧಿಗಾಗಿ ನಾವು ಸ್ವತಃ ವಿಧಿಸಿಕೊಂಡ ಕಟ್ಟುಪಾಡು. ಅಂದಿಗೂ ಇಂದಿಗೂ ಮನೆಯ ಯಜಮಾನನ ಮಾತೇ ಅಂತಿಮ ಎಂದು ನಂಬಿದ ಸಾಮಾಜಿಕ ವ್ಯವಸ್ಥೆ ನಮ್ಮದು. ಸಹಜವಾಗಿ ಕಿರಿಯ ತಮ್ಮನಾಗಿ ಸರದಾರ ಪಟೇಲ್ ಅವರಂಥ ನಾಯಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ. ಮುಂದಿರುವ ಆಪತ್ತಿನ ಬಗ್ಗೆ ಸರದಾರ ಪಟೇಲ್ ನಮ್ಮನ್ನು ಮುನ್ನೆಚ್ಚರಿಸಿದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಆದರೂ "ಅಪ್ಪ ನೆಟ್ಟ ಆಲದಮರ" ಎಂದು ಅದಕ್ಕೇ ನೇಣು ಹಾಕಿಕೊಂಡಿದ್ದಾಗಿತ್ತು. ಅದಕ್ಕೇ ಅರೆ ಶತಮಾನದ ನಂತರವೂ ದೇಶಕ್ಕೆ ಕಾಶ್ಮೀರಿ ಸಮಸ್ಯೆಯಾದರೆ, ನಮ್ಮ ಹಳ್ಳಿಗಳಲ್ಲಿ ಗಡಿತಂಟೆ, ಬೇಲಿ ಜಗಳಗಳಂತ ಕ್ಷುಲ್ಲಕ ಕಾರಣಗಳಿಗೆ ಕೋರ್ಟು ಅಲೆಯುತ್ತಿರುವ ಕುಟುಂಬಗಳನ್ನು ಕಾಣಬಹುದು. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ "ಮನೆಯ ಹಿರಿಯಣ್ಣನ ಮಾತಿಗೆ ಇದಿರಿಲ್ಲ" ಎಂಬ ನೀತಿಯೇ ಇದಕ್ಕೆಲ್ಲ ಕಾರಣವಿರಬಹುದೆ? ಅದಿರಲಿ, ನಮ್ಮ ಮನೆಯ ನೀತಿ ಪದ್ಧತಿಗಳನ್ನು ನೆರೆಯವರು ಪಾಲಿಸಬೇಕಾದ ಅವಶ್ಯಕತೆಯೂ ಏನಿದೆ? ಸಹಜವಾಗಿ ಚೀನಾ ದೇಶವೂ ಭಾರತವನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ. ಊರಿಗೆ ಉಪಕಾರಿಯಾದ ಹಿರಿಯಣ್ಣ ಮನೆಗೆ ಮಾರಿಯಾಗಿದ್ದ. ಶತಮಾನಗಳಿಂದ ನಮ್ಮನ್ನು ರಕ್ಷಿಸಿದ ಹಿಮಾಲಯವೂ ಹೊರಗಿನ ಆಕ್ರಮಣದಿಂದ ಮನೆಯನ್ನು ಕಾಪಾಡಲು ಅಶಕ್ತವಾಗಿತ್ತು.&lt;br /&gt;                     ಸಾಮಾನ್ಯವಾಗಿ ಅರಿತವರು ತಪ್ಪಿನಿಂದ ಪಾಠ ಕಲಿತರೆ ಮೂರ್ಖರು ತಪ್ಪನ್ನು ಪುನರಾವರ್ತಿಸುತ್ತಾರೆ. ಆದರೆ ಇಂದಿಗೂ ನಾವು ನಮ್ಮ ಕಿರಿಯರನ್ನು ಪ್ರಶ್ನಿಸಲು ಉತ್ತೇಜಿಸುವುದಿಲ್ಲ, ಅವರ ಸಲಹೆ ಕೇಳುವುದಿಲ್ಲ. ಇದು ಬದಲಾಗುವುದು ಸಾಧ್ಯವೇ? ಕಾಲವೇ ಉತ್ತರಿಸಬೇಕು.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113850115854851378?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113850115854851378/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113850115854851378' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/113850115854851378'/><link rel='self' type='application/atom+xml' href='http://www.blogger.com/feeds/20227321/posts/default/113850115854851378'/><link rel='alternate' type='text/html' href='http://kannadablogs.blogspot.com/2006/01/history-repeats.html' title='History Repeats'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113833825764513711</id><published>2006-01-26T20:59:00.000-08:00</published><updated>2006-11-12T19:50:35.396-08:00</updated><title type='text'>Nasbandi and IT!</title><content type='html'>&lt;strong&gt;&lt;strong&gt;ನಸಬಂದಿ ಹಾಗೂ ಐಟಿ!&lt;/strong&gt;&lt;/strong&gt;&lt;br /&gt;&lt;br /&gt;ಮೊನ್ನೆ ಊಟಕ್ಕೆ ಕುಳಿತಾಗ ನನ್ನ ಅಮೇರಿಕನ್ ಸಹೋದ್ಯೋಗಿ ಕೇಳಿದ; ಅಷ್ಟೊಂದು ಬಡತನವಿದ್ದರೂ, ಭಾರತೀಯರು ಐಟಿಯಲ್ಲಿ ಇಷ್ಟೊಂದು ಸಾಧಿಸಲು ಕಾರಣವೇನು? ನಿಮ್ಮ ರಾಜಕಾರಣಿಗಳ ದೂರದರ್ಶಿತ್ವವೇ? ಆಗ ನಾನು ಉತ್ತರಿಸಿದೆ "ಭಾರತದ ಇಂದಿನ ಯುವಪೀಳಿಗೆ ಏನಾದರೂ ಸಾಧಿಸಿದ್ದರೆ ಅದರ ಹಿಂದಿನ ರಹಸ್ಯ ಇಂದಿರಾಗಾಂಧಿಯವರ ಹಲವಾರು ಯಶಸ್ವೀ ಯೋಜನೆಗಳಲ್ಲೊಂದಾದ "ನಸಬಂದಿ" ಕುಟುಂಬ ಕಲ್ಯಾಣ ಯೋಜನೆ ವಿಫಲವಾಗಿದ್ದು". "ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ" ಎಂದು ನೀವು ಯೋಚಿಸಿದರೆ ಮುಂದೆ ಓದಿ.&lt;br /&gt;ಭಾರತದ ಪ್ರಥಮ ಮಹಿಳಾ ಪ್ರಧಾನಿಯಾದ ಇಂದಿರಾಗಾಂಧಿಯವರ ಸಾಧನೆ ಎಷ್ಟೆಂದರೆ, ಇಂದಿಗೂ ಕಾಂಗ್ರೆಸ್ಸಿನವರ ಪ್ರಣಾಳಿಕೆಯಲ್ಲಿ ಹೊಸ ಯೋಜನೆಗಳಿಲ್ಲ. ಆ ಸಾಧನೆಗಳಲ್ಲಿ ಪ್ರಮುಖವಾದದ್ದು, ೧೯೭೦ರ ದಶಕದಲ್ಲಿ ಜಾರಿಗೊಂಡ "ನಸಬಂದಿ" ಯೋಜನೆ. ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ತಡೆಯುವ ಸಲುವಾಗಿ, ನಮ್ಮ ಬುದ್ಧಿವಂತ ಅಧಿಕಾರಿಗಳು ಕಂಡುಹಿಡಿದ ಈ ಯೋಜನೆಯ ಪ್ರಕಾರ, ಸಂತಾನಹರಣಗೊಂಡ ಅಥವಾ ಅದರಲ್ಲಿ ಭಾಗವಹಿಸಲು ಮನವೊಲಿಸಿದ "ಸ್ನೇಹಿತ(?)ನಿಗೆ" ಬಹುಮಾನಗಳನ್ನು ವಿತರಿಸಲಾಗುತ್ತಿತ್ತು. ಈ ಯೋಜನೆಗೆ ಎಷ್ಟು ಒತ್ತು ಕೊಡಲಾಗಿತ್ತೆಂದರೆ, ಅದರ ಫಲಾನುಭವಿಗಳಾಗಲು ಜನರ ಮನವೊಲಿಸುವಂತೆ ಸರಕಾರಿ ಯಂತ್ರವನ್ನು ಯಥೇಚ್ಚವಾಗಿ ಬಳಸಲಾಗಿತ್ತು. ಆರಂಭದಲ್ಲಿ, ಕೆಲ ಕೊಳಚೆ ನಿವಾಸಿಗಳು ಇದರ ಲಾಭ ಪಡೆದು ಸೈಟು ಇತ್ಯಾದಿಗಳನ್ನು ಗಿಟ್ಟಿಸಿದ್ದೂ ಉಂಟು. ಆದರೆ ಈ ಯೋಜನೆ ನಿಜವಾಗಲೂ (ಕು)ಖ್ಯಾತವಾದದ್ದು ಸರಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿದ್ದ ಬಿಡಿಗಾಸು ಹಾಗೂ "ಮರ್ಫಿ" ಟ್ರಾನ್ಸಿಸ್ಟರ್ ಗಳಿಂದ. ಈ ಯೋಜನೆ ವಿಫಲವಾದದ್ದಷ್ಟೇ ಅಲ್ಲ; ಇಂದಿರಾಗಾಂಧಿಯ ಸರಕಾರ ೧೯೭೭ರ ಚುನಾವಣೆಯಲ್ಲಿ ಉರುಳಲು ಭಾಗಶ: ಕಾರಣ ಕೂಡ ಆಗಿತ್ತು ಎಂದು ಕೇಳಿದ್ದೇನೆ. ನಂತರ ೧೯೮೦ರಲ್ಲಿ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದಾಗ ಈ ಯೋಜನೆ ಕಾಂತಿ ಕಳೆದುಕೊಂಡು ಮೂಲೆಗುಂಪಾಗಿತ್ತು.&lt;br /&gt;ಏನೇ ಇರಲಿ, ನಮ್ಮ ಅಧಿಕಾರಿಗಳ ಕೆಲ ಯೋಜನೆಗಳನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಬುದ್ಧಿಯಿರುವ ಯಾವ ಪುರುಷ ಅಥವಾ ಸಮಾಜ ಒಂದು ರೇಡಿಯೋ ಹಾಗೂ ಪುಡಿಗಾಸಿಗಾಗಿ ನಿರ್ವೀರ್ಯರಾಗಲು ಒಪ್ಪುತ್ತಾರೆ? ಜನಸಂಖ್ಯೆ ತಡೆಗಟ್ಟಲು ಇವರಿಗೆ ಇದಕ್ಕಿಂತ ಉತ್ತಮ ಐಡಿಯಾ ಹೊಳೆಯಲಿಲ್ಲವೇ? ಸದ್ಯ, ಹಿಂದು ಧರ್ಮದ ಪ್ರಕಾರ ಪುನರ್ಜನ್ಮದ ಅವಕಾಶವಿರುವುದರಿಂದ ಈ ಯೋಜನೆಯಿಂದ ಭೂಮಿಗೆ ಬರಲಾರದ ನತದೃಷ್ಟ ಆತ್ಮಗಳು ಇನ್ನೆಲ್ಲೋ ಜನಿಸಿರಬಹುದು! ಆದರೆ ಉಳಿದವರ ಗತಿ? ನಮ್ಮ ಐಟಿ ಕಂಪೆನಿಗಳು ನೀಡುವ ಅಂಕಿ-ಅಂಶಗಳನ್ನು ಗಮನಿಸಿದರೆ ಒಂದು ವಿಷಯ ಸ್ಪಷ್ಟ, ಏನಾದರೂ ಒಂದು ವೇಳೆ ಈ ಯೋಜನೆ ನೂರರಷ್ಟು ಯಶಸ್ವಿಯಾಗಿದ್ದರೆ ನಮ್ಮ ಐಟಿ ಕಂಪೆನಿಗಳು ಬರೀ ಮ್ಯಾನೇಜರ್ ಗಳಿಂದ ತುಂಬಿರುತ್ತಿದ್ದವು, ಯಾಕೆಂದರೆ ಈ ಕಂಪೆನಿಗಳಲ್ಲಿ ಕೆಲಸ ಮಾಡುವ ಹೆಚ್ಚಿನವರ ವಯಸ್ಸು ಇಪ್ಪತ್ತೈದರಿಂದ ಮೂವತ್ತು!&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113833825764513711?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113833825764513711/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113833825764513711' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/113833825764513711'/><link rel='self' type='application/atom+xml' href='http://www.blogger.com/feeds/20227321/posts/default/113833825764513711'/><link rel='alternate' type='text/html' href='http://kannadablogs.blogspot.com/2006/01/nasbandi-and-it.html' title='Nasbandi and IT!'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113795359781848005</id><published>2006-01-22T10:05:00.000-08:00</published><updated>2006-11-12T19:50:35.116-08:00</updated><title type='text'>Face To Face with Maa. Mu.</title><content type='html'>&lt;strong&gt;&lt;strong&gt;ಮಾ. ಮು. ಧರ್ಮೂದಾದಾರೊಂದಿಗೆ "ಉಗಿಬಂಡಿ" ವರದಿಗಾರನ ಸಂದರ್ಶನ&lt;/strong&gt;&lt;/strong&gt;&lt;br /&gt;&lt;br /&gt;ಮೊನ್ನೆ ಜೀವರ್ಗಿಯಲ್ಲಿ ಸಂತೆಪೇಟೆಯಲ್ಲಿ ನಡೆದು ಹೋಗುತ್ತಿರುವಾಗ ಗರಡಿಮನೆ ಹತ್ರ ಒಂದು ಗೂಟದ ಬಿಳಿ ಕಾರ್ (ಅಂಬಾಸಡರ್) ನಿಂತಿತ್ತು. ಎಲಾ, ಗರಡಿಮನೆಗೂ ಕಾರಲ್ಲಿ ಬರೋ ಕಾಲ ಬಂತಾ. ಯಾರಿರಬಹುದು ಎಂದು ಕುತೂಹಲದಿಂದ ಒಳನಡೆದು ಕೇಳಿದಾಗ ತಿಳಿದಿದ್ದು; ನಮ್ಮ ಮಾ ಮು ಧರಂಸಿಂಗ್ ರವರು ಈಗ ಬೆಂಗಳೂರಿನ ಸಹವಾಸ ಬಿಟ್ಟು ಈ ಶಾಲೆ ಸೇರಿದ್ದಾರೆ. ಯಾವಾಗ ಗೌಡರು ತಮ್ಮ ರಾಜಕೀಯ ಪಟ್ಟಿನಿಂದ ಯಾಮಾರಿಸಿದರೋ ಆಗಲೇ ನಮ್ಮ ಧರಂದಾದಾ ನಿರ್ಧರಿಸಿದರು, "ದೋಸ್ತಿ ಸರಕಾರದಲ್ಲಿ ಕುಸ್ತಿ ಆಡಬೇಕಂದ್ರ ಹೊಸಾ ಪಟ್ಟು ಕಲೀಲೇ ಬೇಕು, old dog can learn new tricks ಅಂತ ಗಾದೆ ಮಾತೆ ಇರೋವಾಗ ನಾನು ಕಲಿಯೋದು ಯಾವ ಮಹಾ".&lt;br /&gt;ಈ ಮಧ್ಯೆ ನಮ್ಮ "ಉಗಿಬಂಡಿ" ಸಂಪಾದಕರು ಒಂದು ವಾರದಿಂದ ಗಂಟು ಬಿದ್ದಿದ್ರು, ಏನು ಇತ್ತೀಚೆಗೆ ಬರೀತಾನೆ ಇಲ್ಲ, ಪೆನ್ನಲ್ಲಿ ಶಾಯಿ ಖರ್ಚಾಗಿದ್ಯಾ ಅಂತ. ಇಂಥಾ ಸುದ್ದಿ ಸಿಕ್ರೆ ಬಿಡೋರುಂಟಾ? ಬೇರೆ ಪೇಪರ್ನವರು ಬಂದು ಈ ಸುದ್ದಿ ಪಬ್ಲಿಶ್ ಮಾಡೋ ಮೊದಲು ನಾನೇ ಬರೆದ್ರೆ ಒಳ್ಳೇದು ಅಂತ ತೀರ್ಮಾನಿಸಿ ಒಂದು ಸಂದರ್ಶನದ ಅವಕಾಶ ಕೋರಿಯೇ ಬಿಟ್ಟೆ. ನಮ್ಮ ಧರಂದಾದ ಅವರ ದೇಹ ಎಷ್ಟು ದೊಡ್ಡದೋ ಹೃದಯವೂ ಅಷ್ಟೇ ವಿಶಾಲವಾದದ್ದು, ಇಲ್ಲ ಅನ್ನಲಿಲ್ಲ. ಸಮಸ್ಯೆ ಶುರುವಾದದ್ದೇ ಅಲ್ಲಿ, ರಾಗಿ ಮುದ್ದೆ ನಾಡಲ್ಲಿ ಬೆಳೆದ ನಂಗೆ ಜೋಳದ ರೊಟ್ಟಿ ಭಾಷೆ ಸ್ವಲ್ಪ ಕಷ್ಟ. ಆದರೆ ಕಾಕತಾಳೀಯವೆಂಬಂತೆ "&lt;a href="http://noorentusullu.blogspot.com/" target="_new"&gt;ನೂರೆಂಟು ಸುಳ್ಳು&lt;/a&gt;" ವರದಿಗಾರ ಸಂಜಯ ಅಲ್ಲೇ ಬಂದ್ರು. ಕನ್ನಡದ ಬಹುಶೈಲಿ ಕೋವಿದರಾದ ಅವರಿಗೆ ಇದು ಸಮಸ್ಯೆಯಲ್ಲ. "ಕಾರ್ಯವಾಸಿ ಕತ್ತೆಕಾಲು ಕಟ್ಟು" ಎಂಬಂತೆ ನಾನು ವೃತ್ತಿದ್ವೇಷಗಳನ್ನು ಬದಿಗೊತ್ತಿ, ಅಚ್ಚ ಇಂಗ್ಲೀಷಲ್ಲಿ ಅವರ ಸಹಾಯ ಕೇಳಿಬಿಟ್ಟೆ. ಬೇರೆ ಭಾಷೆಯಲ್ಲಿ ಸಹಾಯ ಕೇಳಿದಾಗ ಇಲ್ಲ ಅನ್ನುವ ಕನ್ನಡಿಗರನ್ನು ನಾನು ನೋಡೇ ಇಲ್ಲ. ಓಕೆ ಅಂತ ಅಂದ್ರು ನಮ್ಮ ಸಂಜಯ.&lt;br /&gt;ಸರಿ, ನಮ್ಮ ಸಂದರ್ಶನ ಶುರು ಆಯ್ತು, ಸಾಕಷ್ಟು ಮಾತುಗಳು off the record ಇದ್ವು, ಅವನ್ನೆಲ್ಲ ತೆಗೆದು ಉಳಿದ ಸಂಭಾಷಣೆಗಳನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ, ಎಂಜಾಯ್ ಮಾಡಿ.&lt;br /&gt;&lt;strong&gt;ನಾನು: ನಮ್ಮ ಮಣ್ಣಿನ ಮಗ ನಿಮ್ಮನ್ನೇ ಯಾಮಾರಿಸಿದ್ರಲ್ಲ, ಆಗ ಗುಪ್ತದಳ ಅಕ್ಕಿ ತೌಡು ಜಗೀತಾ ಇತ್ತಾ?&lt;/strong&gt;&lt;br /&gt;ಧರಂ: ಇಲ್ಲ, ಹಾಗೇನಿಲ್ಲ ನಮ್ಮ ಮಣ್ಣಿನ ಮಗನೇ ಯಾಮಾರಿದ್ದು, ನಂಗೆ ಗುಪ್ತದಳದವರು ಸುದ್ದಿ ತಂದ್ರು. ನಾನು ಈ ಮಣ್ಣಿನ ಮೊಮ್ಮಗ ಏನಾದ್ರೂ ಕಿತಾಪತಿ ಮಾಡ್ತಾನಾ ಅಂತ ಕೇಳ್ದೆ, ಆದ್ರೆ ಮಣ್ಣಿನ ಮಗ ನಂಬಲಿಲ್ಲ. ಏನೂ ಯೋಚ್ನೆ ಮಾಡಬೇಡಿ, ಸುಮ್ನೆ ಹೊಸ ವರ್ಷ ಆಚರಿಸಕ್ಕೆ ರೆಸಾರ್ಟಿಗೆ ಹೋಗಿದಾನೆ ಅಂದ್ರು. ಇರಬಹುದು, ಈಗಿನವರೇ ಹಂಗೆ, ಒಂದು ಹಬ್ಬನ ಮುಂದಿನ ವರ್ಷದವರೆಗೂ ಆಚರಿಸ್ತಾರೆ. ನೋಡಿ ನಮ್ಮ ಗಣೇಶ ಹಬ್ಬ, ರಾಜ್ಯೋತ್ಸವ ಎಲ್ಲಾ ತಿಂಗಳುಗಟ್ಟಲೆ ನಡೆಯಲ್ವಾ ಹಂಗೆ ಇವರು ನ್ಯೂ ಇಯರ್ ಆಚರಿಸ್ತಾ ಇದಾರೆ ಅಂತ ತಿಳ್ಕೊಂಡೆ.&lt;br /&gt;&lt;strong&gt;ನಾನು: ಅದು ಸರಿ, ನೀವು ಮೊದಲೇ ಸ್ವಲ್ಪ ನೇರ ನಡೆಯವರು, ನೀವು ಹಳ್ಳಕ್ಕೆ ಬಿದ್ದಿದ್ದರಲ್ಲಿ ಆಶ್ಚರ್ಯ ಇಲ್ಲ ಬಿಡಿ, ಆದ್ರೆ ಈ ಬಿಜೆಪಿಯವರು ಎಂತಾ ಹಲ್ಕಾ ನೋಡಿ, ಬೇರೆಯವರ ಚಟ್ಟದ ಬೆಂಕೀಲಿ ಬೀಡಿ ಹಚ್ಚಕ್ಕೆ ನೋಡ್ತಾ ಇದಾರೆ.&lt;/strong&gt;&lt;br /&gt;ಧರಂ: ಛೆ, ನಂಗೆ ಬಿಜೆಪಿಯವರ ಮೇಲೆ ಬೇಸರ ಏನಿಲ್ಲ ಬಿಡಿ, ಅವರ ಸ್ಥಾನದಲ್ಲಿ ಯಾರೇ ಇದ್ರು ಹಾಗೇ ಮಾಡ್ತಿದ್ರು. ಹಂಗೆ ನೋಡಿದ್ರೆ ನಾವು ಮಣ್ಣಿನ ಮಗಂಗೆ ಪ್ರಧಾನಿಯಾಗಿದ್ದಾಗ ನಮ್ಮ ಪಕ್ಷದ ಚಿಹ್ನೆ (ಕೈ) ಕೊಟ್ಟಿರಲಿಲ್ಲ್ವಾ? ಇನ್ನು ಬಿಜೆಪಿಯವರದ್ದು ತುಂಬಾ ಕಷ್ಟ, ಅವರಿಗೆ ನಮ್ಮಂಗೆ ಚಾನ್ಸ್ ಇಲ್ಲಾ. ನಾವಾದ್ರೆ ಯಾವ ಪಕ್ಷ ಅಧಿಕಾರಕ್ಕೆ ಬಂತೋ ಅಲ್ಲಿಗೆ ಜಂಪ್ ಹೊಡಿಬಹುದು. ಉದಾಹರಣೆಗೆ ನಮ್ಮ ದೇಶಪಾಂಡೆಯವರನ್ನು ನೋಡಿ ಯಾವ ಪಾರ್ಟಿ ಅಧಿಕಾರಕ್ಕೆ ಬಂದ್ರೂ ಅವ್ರು ಮಾತ್ರ ಮಿನಿಸ್ಟರೇ. ಅವರು ವಿಧಾನಸೌಧದಲ್ಲಿ ಒಂದು ರೂಮ್ ಖಾಯಂ ಆಗಿ ರಿಸರ್ವ್ ಮಾಡಿದಾರೆ ಗೊತ್ತಾ? ನಾವು ಚುನಾವಣೇಲಿ ಮಾತ್ರ ಬೇರೆ, ಇಲ್ಲಾಂದ್ರೆ ಎಲ್ಲಾ ಜಾತ್ಯಾತೀತರೆ, ಬಿಜೆಪಿಯವರಿಗೆ ಆ ಅವಕಾಶ ಇಲ್ಲಾ ನೋಡಿ ಅದಕ್ಕೆ ಬೇಳೆ ಬೇಯಿಸ್ತಾ ಇದಾರೆ.&lt;br /&gt;&lt;strong&gt;ನಾನು: ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ನಷ್ಟ ಆಯ್ತು ಬಿಡಿ&lt;/strong&gt;&lt;br /&gt;ಧರಂ: ಇಲ್ಲಿ ಪಾರ್ಟಿಗೆ ನಷ್ಟದ ಪ್ರಶ್ನೆಯೇ ಇಲ್ಲ, ಹೆಂಗಿದ್ರೂ ಇವ್ರು ಕಚ್ಚಾಡ್ತಾರೆ, ಬೇಜಾರಾಗಿ ನಮ್ಮ ಜನ ಮುಂದಿನ ಎಲೆಕ್ಶನ್ ನಲ್ಲಿ ನಮಗೇ ವೋಟು ಹಾಕೋದು. ನಿಜವಾಗಲೂ ನಷ್ಟ ಆಗಿದ್ದು ನಂಗೆ. ಯಾವಾಗ ಆ ಹೈದರಾಬಾದ್ ಬಾಬಾ ಆಶ್ರಮಕ್ಕೆ ಭೇಟಿ ಕೊಟ್ನೊ ಆ ಬಾಬಾನ ಪಾಪವೆಲ್ಲಾ ನಂಗೆ ಅಂಟುಕೊಡು ಬಿಡ್ತು. ನೋಡಿ, ಆವತ್ತು ಅವರ ಆಶೀರ್ವಾದ ತಗೊಂಡು ಕಾರು ಹತ್ತಿದ್ನೋ ಇಲ್ವೋ ಕಾರ್ ಟೈರ್ ಪಂಕ್ಚರ್. ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಹರಕೆ ತೀರಿಸ್ದೆ. ಕಲ್ಲು ದೇವರೇ ವಾಸಿ, ತನ್ನ ಪಾಪಾನೆಲ್ಲ ಆಶೀರ್ವಾದದ ತರಾ ಕೊಡಲ್ಲ. ಎಲ್ಲಾ ನನ್ನ ಕರ್ಮ ಬಿಡಿ. ಯೋಜನಾ ಆಯೋಗದವರೂ ನಂಗೆ ವೆಲ್ ಡನ್ ಅಂತ ಹೇಳಿದ್ರು. ಆದ್ರೆ ಹೀಂಗಾಗೋಯ್ತು.&lt;br /&gt;&lt;strong&gt;ನಾನು: ಹಾಗಾದ್ರೆ ನಿಮ್ಮ ಮುಂದಿನ ದಾರಿಯ ಯೋಚನೆ ಏನು?&lt;/strong&gt;&lt;br /&gt;ಧರಂ: ನಾನು ಮುಂಚಿಂದಲೂ ತೀರಾ ಯೋಚಿಸಿದವನೇ ಅಲ್ಲ, ಒಂಥರಾ ಕೂಲ್ ಪಾರ್ಟಿ, ನೋಡಿ ವಕೀಲನಾಗಿ ಲಾಟರಿ ಹೊಡಿಯೊಕ್ಕಿಂತ ವಾಸಿ ಅಂತ ರಾಜಕೀಯಕ್ಕೆ ಬಂದೆ, ಇಲ್ಲೇ ಮೂರು ದಶಕ ಕಳೆದು ಆಗಿದೆ. ಏನೋ, ಇಡೀ ಕರ್ನಾಟಕನೂ ಕೂಡಾ ನಮ್ ಗುಲ್ಬರ್ಗಾದ ಥರಾ ಇರ್ಲಿ ಅಂತ ನನ್ನ ಆಸೆ. ಗುಲ್ಬರ್ಗಾದ ಥರಾ ಹಿಂದಿನ ಆಚಾರ, ವಿಚಾರ ಕಾಪಾಡಿಕೊಂಡು ಬಂದಿರೋ ಜಿಲ್ಲೆಗಳು ಕಮ್ಮಿ, ಇವತ್ತಿಗೂ ಇಲ್ಲಿಯವರು ಚಕ್ಕಡಿಗಾಡಿ ಅಥವಾ ನಡೆದೇ ಓಡಾಡ್ತಾರೆ. ಕೆಲವು ಹಳ್ಳಿಗಳು ಬಸ್ಸೇ ನೋಡಿಲ್ಲ, ಎಲ್ಲಾ ಕಡೆ ಹೀಂಗೆ ಇದ್ರೆ ಭೇಸು ಇರ್ತಿತ್ತು. ಮನುಷ್ಯನ ಆಸೆಗೆ ಮಿತಿನೇ ಇರಲ್ಲ, ಇವತ್ತು ರೋಡು ಅಂತಾರೆ, ನಾಳೆ ನೀರು, ಮನೆ ಅಂತಾರೆ, ಅದಕ್ಕೆ ಹೇಳೋದು, ಯಾವುದೂ ಬೇಡ ಅಂತ ನಮ್ಮ ಹಿರಿಯರು ಮಾಡಿಟ್ಟ ಕಾಲುದಾರೀಲೇ ಇದ್ರೆ ವಾಸಿ. ನನ್ನ ಮುಂದಿನ ದಾರಿ ಸಿಂಪಲ್, ಈ ಗರಡಿ ಮನೇಲಿ ಹೊಸ ಪಟ್ಟು ಕಲೀತಿನಿ, ರೊಟ್ಟಿ ಕಡೀತೀನಿ. ಮಗಂಗೂ ಹೇಳ್ತಾ ಇದೀನಿ ವಂಶಪರಂಪರೆ ಕಾಪಾಡು, ಮಣ್ಣಿನ ಮೊಮ್ಮಗನ ಥರಾ ಅಧಿಕಾರ ತಗೋ ಅಂತ.&lt;br /&gt;&lt;strong&gt;ನಾನು: ರಾಜಕೀಯ ನಿವೃತ್ತಿಯ ಆಲೋಚನೆ ಇದ್ಯಾ ನಿಮಗೆ?&lt;/strong&gt;&lt;br /&gt;ಧರಂ: ರಾಜಕೀಯದಿಂದ ನಿವೃತ್ತಿ? ಹಂಗಂದ್ರೆ ಹೆಂಗೆ, ರಾಜಕೀಯ ಅನ್ನೋದು ವೃತ್ತಿಯಲ್ಲ ನಿವೃತ್ತಿಯಾಗೋಕೆ. ಅದೆಲ್ಲಾ ಬೇರೆ ದೇಶಗಳಲ್ಲಿ ಇರಬಹುದು. ನಮ್ಮಲ್ಲಿ ಎಲ್ಲ ರಾಜಕಾರಣಿಗಳೂ ಸಾಯೋವರೆಗೂ ನಾಯಕರೆ; ಪೆನ್ಶನ್ ಯಾಕೆ ನಮಗೆ ಅಂತ ನಂಗೆ ಕೆಲವು ಬಾರಿ ಆಲೋಚನೆ ಬರ್ತದೆ.&lt;br /&gt;ಇನ್ನೂ ಸಾಕಷ್ಟು ವಿಚಾರಗಳು ಚರ್ಚೆ ಆದವು, ಆದರೆ ಅವೆಲ್ಲಾ off the record ಆಗಿದ್ರಿಂದ ಇಲ್ಲಿ ನಾವು ಪ್ರಕಟಿಸಲಿಲ್ಲ. ನಿಮಗೆ ತಿಳಿಯುವ ಆಸಕ್ತಿ ಇದ್ದರೆ, ನಮ್ಮ ಪತ್ರಿಕಾಲಯ ಸಂಪರ್ಕಿಸಿ: http://kannadablogs.blogspot.com&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113795359781848005?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113795359781848005/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113795359781848005' title='4 Comments'/><link rel='edit' type='application/atom+xml' href='http://www.blogger.com/feeds/20227321/posts/default/113795359781848005'/><link rel='self' type='application/atom+xml' href='http://www.blogger.com/feeds/20227321/posts/default/113795359781848005'/><link rel='alternate' type='text/html' href='http://kannadablogs.blogspot.com/2006/01/face-to-face-with-maa-mu.html' title='Face To Face with Maa. Mu.'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-20227321.post-113773189079318515</id><published>2006-01-19T20:36:00.000-08:00</published><updated>2006-11-12T19:50:34.790-08:00</updated><title type='text'>No Choice!</title><content type='html'>ಆಗೋವರೆಗೆ ಅಣ್ಣರಾಯ, ಆದಮೇಲೆ ದೊಣ್ಣೆರಾಯ..&lt;br /&gt;&lt;br /&gt;ಇದು ಬರೀ ಕನ್ನಡಿಗರ ಕಥೆಯಲ್ಲ, ಪ್ರಜಾಪ್ರಭುತ್ವ ಪಾಲಿಸುವ ಹೆಚ್ಚಿನ ಎಲ್ಲ ರಾಜ್ಯ, ರಾಷ್ಟ್ರಗಳ ವ್ಯಥೆ. ಸಾಮಾನ್ಯವಾಗಿ ಪ್ರತಿಯೊಂದು ದೇಶದ ನಾಗರಿಕರು ರಾಜಕಾರಣಿಗಳನ್ನು ದ್ವೇಷಿಸುತ್ತಾರೆ. ಎಷ್ಟರ ಮಟ್ಟಿಗೆಂದರೆ, ಯಾವುದೇ ತರಗತಿಯ ವಿದ್ಯಾರ್ಥಿಯನ್ನು ನೀವು "ದೊಡ್ಡವನಾದ ಮೇಲೆ ಏನಾಗ್ತೀಯಾ?" ಅಂತ ಕೇಳಿದರೆ ಅವನು/ಅವಳು ಮುಂದೆ ಉತ್ತಮ ರಾಜಕಾರಣಿಯಾಗುತ್ತೇನೆ ಎಂದು ಹೇಳುವ ಸಂಭವ ತುಂಬಾ ಕಡಿಮೆ. ಯಾರೂ ಕೂಡಾ ಘನ ಉದ್ದೇಶ ಹೊತ್ತು ರಾಜಕಾರಣಿಯಾಗುವುದಿಲ್ಲ, ವಂಶಪಾರಂಪರ್ಯ ಅಥವಾ ಕೆಳಮಟ್ಟದ ರಾಜಕೀಯದಿಂದ ಬರುವ ಮಂದಿಯೇ ಹೆಚ್ಚು. ಇನ್ನು ಕೆಲವರು ಸಾಕಷ್ಟು ಗಳಿಸಿಯಾದ ಮೇಲೆ ಹಿಂದಿನ ಬಾಗಿಲಿನಿಂದ (ವಿಧಾನ ಪರಿಷತ್ತು ಅಥವಾ ರಾಜ್ಯಸಭೆ) ಒಳಬರುತ್ತಾರೆ. ಆದರೆ ಇವರು ಸುಮ್ಮನೆ "ಪ್ರೆಸ್ಟೀಜ್"ಗಾಗಿ ಬಂದವರು; ಅವರಿಂದ ಅನುಕೂಲವೇನಿಲ್ಲದಿದ್ದರೂ ಅಪಾಯವೂ ಕಮ್ಮಿ.&lt;br /&gt;ಸನ್ನಿವೇಶವೇ ಹೀಗಿರುವಾಗ ನಮ್ಮ ಮಣ್ಣಿನ ಮೊಮ್ಮಗ, ಕುಮಾರಸ್ವಾಮಿ ವಂಶಪಾರಂಪರ್ಯವಾಗಿ ಬಂದ ಅವಕಾಶ, ರಕ್ತಗತವಾಗಿ ಬಂದ ರಾಜಕೀಯ ದಾಳಗಳನ್ನು ಬಳಸಿದರೆ ತಪ್ಪೇನು? ಈಗ ನಡೆದಿರುವುದರಲ್ಲಿ ಅತಿಶಯವೇನೂ ಇಲ್ಲ, ಇದು ದಶಕಗಳ ಹಿಂದೆ ಇದೇ ಮರಿಗಳ ಅಪ್ಪಂದಿರು ಬಳಸಿದ ತಂತ್ರವೇ. ಇನ್ನು ಕನ್ನಡಿಗರ ಮಟ್ಟಿಗೆ ಬಂದರೆ, ಆಯ್ಕೆ ಇರುವುದು ಕುರುಡುಗಣ್ಣು ಕುಂಟುಗಾಲಿನ ನಡುವೆ; ಕಾಸೂ ಹಾಳು ತಲೆಯೂ ಬೋಳು.&lt;br /&gt;ಏನೇ ಇರಲಿ, ಸದ್ಯ ಬದಲಾವಣೆಯ ಗಾಳಿ ಬೀಸುತ್ತಿದೆ, ಅದೇ "ವ್ಯಾಯಾಮ-ದ್ವೇಷಿ" ಧರಂರನ್ನು ನೋಡಿ ಬೇಸತ್ತಿದ್ದ ಜನರಿಗೆ ಹೊಸ ಪಾತ್ರಧಾರಿ ನೋಡುವ ಅವಕಾಶ. ಎಲ್ಲ ಬದಲಾವಣೆಗಳಂತೆ ಈ ಬದಲಾವಣೆ ಕೂಡಾ ಭರವಸೆಯ ಬೆಳಕು ತಂದಿದೆ. ಯಾರಿಗೆ ಗೊತ್ತು, ಇದೇ ಸರ್ಕಾರ ನಮ್ಮ ಜನಹಿತ ಕಾಯಬಹುದು, ಬಯಸುವುದರಲ್ಲಿ ಹೋಗುವ ಗಂಟೇನಿದೆ? ಗಾಳಿ ಎತ್ತ ಕಡೆ ಬೀಸಿದರೂ ನನ್ನ ಅಂದಾಜಿನ ಪ್ರಕಾರ ಕೊನೆಯಲ್ಲಿ ಕಾಂಗ್ರೆಸ್ಸಿಗೇ ಲಾಭವಾಗಬಹುದು. ಒಂದೈದು ಶಾಸಕರಿದ್ದರೆ ಕೈ ನೋಡುತ್ತಿದ್ದೆ, ಎಂದು ಪಕ್ಷಾಂತರಿ "ಬಂ" ಕೈ ಹಿಚುತ್ತಿದ್ದರೆ, ನನ್ನ ಗತಿ ಏನು ಎಂದು ರಾಜಶೇಖರ ಮೂರ್ತಿಯಂತವರು ಕಣ್ ಕಣ್ ಬಿಡುವಂತಾಗಿದೆ. ಸದ್ಯ, ಚಡ್ಡಿ ಹಾಕಿ ಧ್ವಜ ಪ್ರಣಾಮ ಮಾಡಿ ಜೀವನ ಕಳೆದದ್ದು ಸಾರ್ಥಕವಾಗಿ ನಮ್ಮ ಯಡಿಯೂರಪ್ಪನವರು ಆಡಳಿತ ಪಕ್ಷದ ಕುರ್ಚಿಯ ಮೆತ್ತೆಯನ್ನು ನೋಡುವಂತಾದರೆ ಅರಳಿದ ಕಮಲ ಧನ್ಯ.&lt;br /&gt;ಇವರು ಏನೇ ಮಾಡಲಿ, ನನ್ನ ಸಂದಿಗ್ಧತೆ ಏನೆಂದರೆ, ಸದ್ಯ ಚುನಾವಣೆ ಆದರೆ ಬರುವ ಖರ್ಚು ಹೆಚ್ಚೋ ಅಥವಾ ಚುನಾವಣಾ ಪ್ರಚಾರದಿಂದ ಬರುವ ಉದ್ಯೋಗ ಭರವಸೆ ಹೆಚ್ಚೋ? ನಿಮ್ಮ ಆಯ್ಕೆ ಏನು?&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113773189079318515?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113773189079318515/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113773189079318515' title='1 Comments'/><link rel='edit' type='application/atom+xml' href='http://www.blogger.com/feeds/20227321/posts/default/113773189079318515'/><link rel='self' type='application/atom+xml' href='http://www.blogger.com/feeds/20227321/posts/default/113773189079318515'/><link rel='alternate' type='text/html' href='http://kannadablogs.blogspot.com/2006/01/no-choice.html' title='No Choice!'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-20227321.post-113729571211961029</id><published>2006-01-14T19:26:00.000-08:00</published><updated>2006-11-12T19:50:33.789-08:00</updated><title type='text'>Right Choice!</title><content type='html'>ಪ್ರಶಸ್ತಿಗೆ ಸಂದ ಗೌರವ&lt;br /&gt;&lt;br /&gt;ಇತ್ತೀಚೆಗೆ ಪ್ರಶಸ್ತಿ ಕೂಡಾ ಒಂದು ವಿವಾದಾತ್ಮಕ ವಸ್ತುವಾಗಿದೆ. ಇಲ್ಲಿ ಸಮಸ್ಯೆ ವಿವಾದದ್ದಲ್ಲ; ಪ್ರಶಸ್ತಿಗೆ ಭಾಜನರಾದ ಅರ್ಹರದು. ಅವರ ಪರಿಸ್ಥಿತಿ ಕಷ್ಟಕರ, ಇತ್ತ ಪ್ರಶಸ್ತಿ ಸಂದ ಬಗ್ಗೆ ಹೆಮ್ಮೆ ಪಡುವ ಹಾಗೂ ಇಲ್ಲ, ಸ್ವೀಕರಿಸದೆ ನಿರಾಕರಿಸುವುದೂ ಕಷ್ಟ; ಅದೂ ಕೂಡ ವಿವಾದದ ವಸ್ತುವೇ. ಅದಕ್ಕಿಂತ ಹೆಚ್ಚಿನದಾಗಿ ಪ್ರಶಸ್ತಿ ಸಮಿತಿಗಳೂ ಅಷ್ಟೆ; ಯಾವುದೋ ಒತ್ತಡಕ್ಕೆ ಒಳಗಾಗಿ ಗೌರವವನ್ನು ರಾಮನವಮಿಯ ಪಾನಕ ಪ್ರಸಾದದಂತೆ ಹಂಚುತ್ತವೆ. ಅದಕ್ಕೆ ಸೂಕ್ತ ಉದಾಹರಣೆ ನಮ್ಮ ಸರ್ಕಾರದ ರಾಜ್ಯಪ್ರಶಸ್ತಿ. ಆಗಲೇ ದ್ವಿಶತಕದ ಹತ್ತಿರದವರೆಗೂ ಶಿಫಾರಸು ಮಾಡಿದ ಗರಿಮೆ ಈ ಸಮಿತಿಗೆ ಇದೆ. ಅದೇನೇ ಇರಲಿ, ಈ ಬಾರಿಯ ಪಂಪ ಪ್ರಶಸ್ತಿಯ ಸಮಿತಿಯ ಆಯ್ಕೆ ಪ್ರಶಂಸನೀಯ.                          &lt;br /&gt;           ಸಮಿತಿಯ ಆಯ್ಕೆಯಾದ ಡಾ. ಎಸ್ ಎಲ್ ಭೈರಪ್ಪನವರು ಅರ್ಹ ವ್ಯಕ್ತಿ ಎಂದು ನಾನು ಅಭಿನಂದಿಸುವುದಕ್ಕಿಂತ ಹೆಚ್ಚಾಗಿ ಪ್ರಶಸ್ತಿ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡುವ ಧೈರ್ಯ ತೋರಿಸಿತು ಎಂದು ಸಂತಸಪಡುತ್ತೇನೆ. ವಾಸ್ತವವಾಗಿ ನೋಡಿದರೆ, ಭೈರಪ್ಪನವರು ಈ ಪ್ರಶಸ್ತಿ ಪುರಸ್ಕಾರಗಳನ್ನು ದಾಟಿ ನಡೆದಾಗಿದೆ. ಅವರನ್ನು ಗೌರವಿಸುವುದು ಅಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ. ಇಷ್ಟಿದ್ದರೂ ನಮ್ಮ ಹಲವಾರು ಪ್ರಶಸ್ತಿ ಸಮಿತಿಗಳು ಈ ಅಂಶವನ್ನು ಗುರುತಿಸುವಲ್ಲಿ ವಿಫಲವಾಗಿವೆ. ಬಹುಶ: ಅವರು ಇನ್ನಾವುದೋ ರಾಜ್ಯದಲ್ಲಿ ಹುಟ್ಟಿ ಅಲ್ಲಿ ಸಾಹಿತ್ಯ ಕೃಷಿ ನಡೆಸಿದ್ದರೆ, ಜ್ಞಾನಪೀಠ ಪ್ರಶಸ್ತಿ ಕೂಡಾ ಅದೆಂದೋ ಅವರ ಪಾಲಾಗಿರುತ್ತಿತ್ತು. ಕನ್ನಡದ ದೌರ್ಭಾಗ್ಯವೋ, ಸೌಭಾಗ್ಯವೋ ಗೊತ್ತಿಲ್ಲ, ಇಲ್ಲಿ ಅರ್ಹರ ಪಟ್ಟಿ ತೀರಾ ಉದ್ದವಿದೆ; ಕಾಯುವ ಆಯುಷ್ಯವನ್ನು ಕಾಲ ಕರುಣಿಸಿದರೆ ಮಾತ್ರ ಪ್ರಶಸ್ತಿ ದೊರಕಲು ಸಾಧ್ಯ. &lt;br /&gt;           ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಅತ್ಯಂತ ಇಷ್ಟಕರವಾಗುವ ಅಂಶ ಅವುಗಳ ಹಿಂದಿನ ಅಧ್ಯಯನಶೀಲತೆ. ಅವರ ಕೃತಿಗಳು "ಸಂತೆಯ ಹೊತ್ತಿನ ಮೂರು ಮೊಳ"ಗಳಂತಲ್ಲ. ಅವರ ಪ್ರತಿಯೊಂದು ಕಾದಂಬರಿಯೂ ವಿಶಿಷ್ಟ, ವಿಭಿನ್ನ. ಎಲ್ಲಾ ದೃಷ್ಟಿಯಿಂದಲೂ ಓದುಗನನ್ನು ಪ್ರಭಾವಿಸಬಲ್ಲ ಅವರ ಕೃತಿಗಳು ನನಗೆ ಇಷ್ಟ. ಅಷ್ಟೇ ಅಲ್ಲ, ಅವರ ಒಂದು ಪುಸ್ತಕ ಕೈಗೆತ್ತಿಕೊಂಡರೆ, ಸರಾಗವಾಗಿ ದಿನಗಳನ್ನು ಕಳೆಯಬಹುದು. ನನಗೆ ಇನ್ನೂ ನೆನಪಿದೆ, ಕಾಲೇಜಿನ ದಿನಗಳಲ್ಲಿ ಅವರ "ಧರ್ಮಶ್ರೀ" ಓದಿದ ನಾನು ನನ್ನ ಕ್ರಿಶ್ಚಿಯನ್ ಸಹಪಾಠಿಯನ್ನು ಚರ್ಚೆಗೆ ಎಳೆದಿದ್ದೆ, ಅವಳು ಚರ್ಚಿಗೆ ಎಳೆದಿದ್ದಳು! ಸದ್ಯ ಪಾದ್ರಿಯ ಪ್ರವಚನಕ್ಕಿಂತ ಹೊರತಾಗಿ ಮುಂದೇನೂ ನಡೆಯಲಿಲ್ಲ. &lt;br /&gt;           ಭೈರಪ್ಪನವರ ಕೃತಿಗಳನ್ನು ವಿಮರ್ಶೆ ಮಾಡುವ ಮಟ್ಟದ ವಿಮರ್ಶಕ ನಾನಲ್ಲವಾದರೂ, ಒಬ್ಬ ಓದುಗನಾಗಿ, ಅವರಿಗೆ ಸಂದ ಈ ಪ್ರಶಸ್ತಿಯಿಂದ ಪ್ರಶಸ್ತಿಯ ಗೌರವ ಇಮ್ಮಡಿಸಿತು ಎಂದು ನಂಬುತ್ತೇನೆ, ಏನಂತೀರಾ?&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113729571211961029?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113729571211961029/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113729571211961029' title='3 Comments'/><link rel='edit' type='application/atom+xml' href='http://www.blogger.com/feeds/20227321/posts/default/113729571211961029'/><link rel='self' type='application/atom+xml' href='http://www.blogger.com/feeds/20227321/posts/default/113729571211961029'/><link rel='alternate' type='text/html' href='http://kannadablogs.blogspot.com/2006/01/right-choice.html' title='Right Choice!'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-20227321.post-113703477121202964</id><published>2006-01-11T18:59:00.000-08:00</published><updated>2006-11-12T19:50:33.394-08:00</updated><title type='text'>Nature's Choice</title><content type='html'>ಹರಿಯುವ ನೀರಿನ ದೊಣ್ಣೆ ನಾಯಕರು&lt;br /&gt;&lt;br /&gt;ಸುಮಾರು ಹದಿನೈದು ವರುಷಗಳ ಹಿಂದಿನ ಕಥೆ. ನಮ್ಮ ಓಣಿಯಲ್ಲೇ ಸ್ಥಿತಿವಂತರಾಗಿದ್ದ ಕುಟುಂಬವೊಂದು ಹೊಸದಾಗಿ ವಿಡಿಯೊಕಾನ್ ಕಲರ್ ಟಿವಿ ತಂದಿತ್ತು. ಆಗ ಇಡೀ ಊರಿನಲ್ಲೇ ಬೆರಳೆಣಿಕೆಯಷ್ಟು ಟಿವಿಗಳಿದ್ದವಷ್ಟೆ. ಅಂಥಾದರಲ್ಲಿ ನಮ್ಮ ಓಣಿಗೇ ಒಂದು ಟಿವಿ ಬಂದರೆ ಹೇಗಾಗಿರಬೇಡ. ನೆರೆಹೊರೆಯ ಎಲ್ಲ ಕುಟುಂಬಗಳೂ ಸಂಭ್ರಮಿಸಿದ್ದವು, ಅಷ್ಟೇ ಅಲ್ಲ, ಮೊದಲ ಬಾರಿಗೆ ಟಿವಿ ಆನ್ ಮಾಡುವಾಗ ಒಂದು ಪೂಜೆ ಕೂಡ ನೆರವೇರಿತು.&lt;br /&gt;ಜಾಗತೀಕರಣದ ಈ ದಿನಗಳಲ್ಲಿ ಅಂದಿನ ಆ ಆನಂದ, ಸಂಭ್ರಮ ನೆನಸಿಕೊಂಡರೆ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆದರೆ ಈ ಮೇಲಿನ ಘಟನೆ ೧೯೮೦-೮೫ ರ ನಡುವೆ ನಮ್ಮ ದೇಶದ ಪ್ರತಿ ಊರಲ್ಲೂ ನಡೆದಿದೆ ಎಂದು ನಾನು ನಂಬುತ್ತೇನೆ. ಭಾರತದಂಥ ದೇಶ ನಾಯಕರ ಸಂಕುಚಿತ ಬುದ್ಧಿ, ದೂರದೃಷ್ಟಿಯ ಕೊರತೆಯಿಂದ ಎಷ್ಟೇ ಬಳಲುತ್ತಿರಬಹುದು. ಆದರೆ ತಂತ್ರಜ್ಞಾನದ ಒಂದು ಅಲೆ ಕ್ರಾಂತಿಯನ್ನೇ ಮಾಡಬಲ್ಲದು ಹಾಗೂ ಅದರ ಪರಿಣಾಮ ನಿರಂತರ.&lt;br /&gt;ಕಾಲವನ್ನೊಮ್ಮೆ ಅವಲೋಕಿಸಿದರೆ ವಿಶ್ವದ ಆರ್ಥಿಕತೆಯಲ್ಲಿ ಒಂದು ಚಕ್ರವನ್ನು ಕಾಣಬಹುದು. ಅಂಥ ಹಲವಾರು ಕ್ರಾಂತಿ ಚಕ್ರಗಳನ್ನು ಭಾರತ ಸ್ವಾಗತಿಸಲಿಲ್ಲ. ಅದಕ್ಕೆ ಕಾರಣ ಆಡಳಿತಾರೂಢ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಾನಂತರ ಭಾರತ ರಷ್ಯಾವನ್ನು, ಅದರ ಸಮಾಜವಾದವನ್ನು ಹಿಂಬಾಲಿಸಿತು. ಸಹಜವಾಗಿ ಐವತ್ತು ವರುಷಗಳಲ್ಲಿ ನಾವು ಆ ನಿರ್ಧಾರದ ಫಲಶ್ರುತಿಯನ್ನು ಕಾಣಬಹುದು. ದಿವಾಳಿಯೆದ್ದಿರುವ ರಷ್ಯನ್ ಒಕ್ಕೂಟದ ರಾಷ್ಟ್ರಗಳು ಭಾರತದ ಅವಳಿ ತಮ್ಮಂದಿರಂತಿವೆ. ಕಾರಣ ಸ್ಪಷ್ಟ; ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳು ಭಾಷಣದ, ಪುಸ್ತಕದ ವಸ್ತುಗಳೇ ಹೊರತು ವಾಸ್ತವದ ಸತ್ಯಗಳಲ್ಲ. ಸಮಾಜವಾದದ ತತ್ವದಂತೆ ಮಾನವ ಮೂಲತ: ಸಂಘಜೀವಿಯಾದರೂ, ಮೂಲ ಪ್ರಕೃತಿಯ ಸಿದ್ಧಾಂತ ಬೇರೆ; ಯೋಗ್ಯತೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ. ಬಂಡವಾಳಶಾಹಿ ರಾಷ್ಟ್ರಗಳು ಅನುಸರಿಸುವುದು ಅದನ್ನೇ. ಸಹಜವಾಗಿ ಸಮಾಜವಾದದ ತತ್ವ ಸಿದ್ಧಾಂತಗಳು ಅವನತಿ ಹೊಂದಿದರೆ ಬಂಡವಾಳಶಾಹಿಗಳು ಬದುಕಿದರು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಕಾಲ ನಿರ್ಧರಿಸುತ್ತದೆ, ನಮ್ಮ ರಾಜಕಾರಣಿಗಳು ದೊಣ್ಣೆ ನಾಯಕರಾಗುವ ಅವಶ್ಯಕತೆಯಿಲ್ಲ.&lt;br /&gt;ಭಾರತದಂಥ ದೇಶಕ್ಕೂ ಆಸರೆಯಿತ್ತು. ತೊಂಬತ್ತರ ದಶಕದ ಆದಿಯಲ್ಲಿ, ಪರಿಸ್ಥಿತಿಯ ಕೈವಾಡದಿಂದಾಗಿ ಬದಲಾವಣೆಯ ಕಾಲ ಬಂದಿತ್ತು. ಅಷ್ಟೇ ಅಲ್ಲ, ಆಗ ಬಂದಿದ್ದ ಮಾಹಿತಿ ತಂತ್ರಜ್ಞಾನಕ್ಕೆ ನಮ್ಮ ನೇತಾಗಳ ಅವಶ್ಯಕತೆಯಿರಲಿಲ್ಲ. ಅವರ ಗೃಹಿಕೆಗೆ ಬರುವಷ್ಟರಲ್ಲಿ ಎಲ್ಲ ಮುಗಿದಿತ್ತು. ಅದರ ಪರಿಣಾಮ: ದೇಸೀ ಬ್ಯಾಂಕುಗಳು, ಸರ್ಕಾರಿ ಕಂಪನಿಗಳಲ್ಲಿ ಯಾರೂ ಪರಿಚಿತರಿಲ್ಲದಿದ್ದಲ್ಲಿ ನಿರುದ್ಯೋಗವೇ ಗತಿಯಾಗಿದ್ದ ನಮ್ಮ ಯುವಕರಿಗೆ ಜೀವನ ಮಾರ್ಗ ಸೃಷ್ಟಿಯಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿದ್ದ ನಮ್ಮ ಅಂಬಾಸಡರ್, ಬಜಾಜ್ ಚೇತಕ್ ಗಳ ಅಸಲಿ ಬಂಡವಾಳ ಹೊರಬಿತ್ತು. ಇಂದು ನಾನು ಇದನ್ನೆಲ್ಲ ಬರೆದರೆ ಸಿನಿಕತನ ಅನಿಸಬಹುದು. ನಿಮ್ಮ ಮನೆಯಲ್ಲಿ ಸೀನಿಯರ್ ಚಿಕ್ಕಪ್ಪನೋ, ಅಣ್ಣನೋ ಇದ್ದರೆ ಕೇಳಿ ನೋಡಿ, ತಪ್ಪಿದ್ದರೆ ತಿದ್ದಿ.&lt;br /&gt;ಬದಲಾದ ಕಾಲ: ರಸ್ತೆ ಸರಿಯಿಲ್ಲದಿದ್ದರೆ ಅದು ಅಂತರಾಷ್ಟ್ರೀಯ ಸುದ್ದಿಯಾಗುತ್ತದೆ, ಆಳುವ ಸರ್ಕಾರ ಕಡೆ ಪಕ್ಷ ಸ್ಪಷ್ಟನೆ ನೀಡುತ್ತದೆ. ದಬ್ಬಣ ಚುಚ್ಚಿದರೂ ಸ್ಪಂದಿಸದ ನಮ್ಮ ದಪ್ಪ ಚರ್ಮದ ಸರ್ಕಾರದಿಂದ ಇದು ಸಾಧ್ಯವಾಗಿದ್ದರೆ ಕಾಲಾಯ ತಸ್ಮೈ ನಮ:&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113703477121202964?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113703477121202964/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113703477121202964' title='2 Comments'/><link rel='edit' type='application/atom+xml' href='http://www.blogger.com/feeds/20227321/posts/default/113703477121202964'/><link rel='self' type='application/atom+xml' href='http://www.blogger.com/feeds/20227321/posts/default/113703477121202964'/><link rel='alternate' type='text/html' href='http://kannadablogs.blogspot.com/2006/01/natures-choice.html' title='Nature&apos;s Choice'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>2</thr:total></entry><entry><id>tag:blogger.com,1999:blog-20227321.post-113676263311568849</id><published>2006-01-08T15:23:00.000-08:00</published><updated>2006-11-12T19:50:33.197-08:00</updated><title type='text'>SideStreet Boys</title><content type='html'>ನೀವು ನನ್ನಂತೆ ಹೊಟ್ಟೆಪಾಡಿಗಾಗಿ ಕೋಡು-ಕುಟ್ಟುವವರಾಗಿದ್ದರೆ(software programmers) ಇಲ್ಲಿನ ಘಟನೆಗಳು ನಿಮ್ಮ ಅನುಭವಕ್ಕೂ ಬಂದಿರಬಹುದು. ನಾನು ಪಶ್ಚಿಮ ದೇಶದ ಪೂರ್ವ ತೀರದಲ್ಲಿ ಐಟಿ ಉದ್ಯೋಗಿಯಾಗಿದ್ದೇನೆ. ಮನೆಗೂ ಆಫೀಸಿಗೂ ಸುಮಾರು ಎರಡು ತಾಸುಗಳ ಪ್ರಯಾಣವಿರುವುದರಿಂದ ಮುಂಜಾನೆ ಸಾಕಷ್ಟು ಬೇಗ ಏಳಬೇಕಾಗುತ್ತದೆ. ಕೋಳಿ ಕೂಗುವ ಮುನ್ನ ಇ-ಕೋಳಿ (alarm clock) ಕೂಗಿಸಿ, ತಯಾರಾಗಿ ಹೊರಟು ಬಸ್ಸು ಹಿಡಿದು ಸಿಟಿ ತಲುಪುತ್ತೇನೆ. ನಂತರ ಸಬ್-ವೇ(ಸಿಟಿಯ ಸಾರಿಗೆ ವ್ಯವಸ್ಥೆ) ಹಿಡಿಯಲು ಸುಮಾರು ೧೦ ನಿಮಿಷ ನಡೆಯಬೇಕಾಗುತ್ತದೆ. ಇಲ್ಲಿ ಬರುತ್ತಿದ್ದಂತೇ ಶುರು ನೋಡಿ, ಸರಸ್ವತಿಯ ಉಪಾಸಕರ ಸಂಗೀತ ಗಂಗೆ.&lt;br /&gt;ಇವರು ಮತ್ತಾರೂ ಅಲ್ಲ, ಪಶ್ಚಿಮ ದೇಶಗಳಲ್ಲಿ ಮರ್ಯಾದೆಯಿಂದ ಬೇಡುವ ಭಿಕ್ಷುಕರು. ಇವರ ಡೀಲ್ ಇಷ್ಟೇ; ನೀವು ಅವರು ಬಾರಿಸುವ ಸಂಗೀತ ಕೇಳಿ ಅವರಿಗೆ ಕಾಸು ಕೊಡಬೇಕು. ಇವರಲ್ಲೂ ಕೂಡಾ ಒಂಥರಾ ಶಿಸ್ತು ಉಂಟು, ಇಬ್ಬರು ವಾದಕರು ಒಂದೇ ಗುಂಪಿನವರಾಗಿರದಿದ್ದರೆ, ಅವರು ಹತ್ತಿರವೇ ನಿಂತು ಸ್ಪರ್ಧಿಸಲಾರರು. ಮರ್ಯಾದೆಯಿಂದ ತಮ್ಮಷ್ಟಕ್ಕೆ ತಾವೇ ದೂರ ನಿಂತು ವ್ಯವಹಾರ ನಡೆಸುತ್ತಾರೆ. ಜೊತೆಗೆ ನಾನು ಗಮನಿಸಿದಂತೆ ಅವರು ಹರಡಿರುವ ಜೋಳಿಗೆಯಲ್ಲಿನ ಕಾಸು ಅವರ ವಾದ್ಯಕ್ಕೆ ಅನುಪಾತದಲ್ಲಿರುತ್ತದೆ. ದೊಡ್ಡ ಹಾಗೂ ಹೆಚ್ಚಿನ ವಾದಕರ ಗುಂಪಿನ ಕಮಾಯಿ ಕೂಡಾ ಹೆಚ್ಚು. ಇಲ್ಲಿನ ವಾದಕರಲ್ಲಿ ಹೆಚ್ಚಿನವರು ಖಾಯಂ ಒಂದೇ ಜಾಗದಲ್ಲಿ ಇರುತ್ತಾರೆ, ಬಹುಶ: ಅವರ ಗಿರಾಕಿಗಳೂ ಖಾಯಂ ಇರಬಹುದೇನೋ.&lt;br /&gt;ನನಗೆ ಸಂಗೀತ ಜ್ಞಾನ ಅಷ್ಟೊಂದು ಇಲ್ಲವಾದರೂ ಕರ್ಕಶ ಮತ್ತು ಸುಶ್ರಾವ್ಯ ಸ್ವರದ ನಡುವಿನ ವ್ಯತ್ಯಾಸ ತಿಳಿಯುತ್ತದೆ. ಆ ಆಧಾರದ ಮೇಲೆ ಹೇಳುವುದಾದರೆ, ಇವರಲ್ಲಿ ಕೆಲವರು ನಿಜಕ್ಕೂ ಒಳ್ಳೆಯ ವಾದಕರು. ಅವರ ಬಗ್ಗೆ ನನಗೆ ಸದಭಿಪ್ರಾಯವುಂಟು. ಇನ್ನು ಉಳಿದವರು ಪಕ್ಕಾ ಮೈಗಳ್ಳರು.&lt;br /&gt;ಪ್ರಾಯಶ: ಇವರದು ಶಾಲಾ ಮಾಸ್ತರರ ಬೆತ್ತದ ರುಚಿ ಕಾಣದ ಸೋಮಾರಿ ದೇಹ; ದಂಡಿಯಾಗಿ ಬೆಳೆದಿದೆ; ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?, ಯಾವುದೇ ಸರ್ಕಾರಿ ಕೋಟಾ ಕೂಡಾ ಲಭ್ಯವಿಲ್ಲದೇ ನಿರುದ್ಯೋಗಿಗಳಾದ ಈ ಸೋಮಾರಿಗಳು ಕೆಲಸ ಹುಡುಕುವ ಬದಲು ಮನೆಯ ಅಟ್ಟದ ಮೇಲೆ ಬಿದ್ದಿದ್ದ ಮುರಿದ ಗಿಟಾರನ್ನೋ, ಕಾಂಗೊವನ್ನೋ (ತಬಲಾದಂಥ ವಾದ್ಯ) ಹುಡುಕಿ ಇಲ್ಲಿ ತಂದು ಬಡಿಯುತ್ತಾರೆ. ಮೊದಲೇ ವಯಸ್ಸಾಗಿ ಪಕ್ಕಾದ ವಾದ್ಯ; ಇವರ ಬಡಿತ ತಾಳಲಾರದೇ ಶ್ರುತಿಯೋ ಅಪಶ್ರುತಿಯೋ ಒಟ್ಟಿನಲ್ಲಿ ಕಿರುಚುತ್ತದೆ. ಕರುಣಾಜನಕವಾದ ಆ ವಾದ್ಯದ ನೋವೇ ಎಷ್ಟೋ ಬಾರಿ ನನ್ನನ್ನು ದಾನಿಯಾಗಲು ಪ್ರೇರೇಪಿಸಿದ್ದುಂಟು.&lt;br /&gt;ಏನೇ ಇದ್ದರೂ ಸದ್ಯ ತಮ್ಮ ಪಾಡಿಗೆ ಸಂಗೀತ ಸಾಧನೆ ನಡೆಸುತ್ತಿರುವ ಇವರು ಟ್ರಾಫಿಕ್ ಸಿಗ್ನಲ್ನಲ್ಲಿ ಕಾಲು ಹಿಡಿಯುವ, ಮನೆ ಮುಂದೆ ಬಂದು ಕಿರುಚುವ ಭಿಕ್ಷುಕರಿಗಿಂತ ಎಷ್ಟೋ ವಾಸಿ, ಏನಂತೀರಾ?&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113676263311568849?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113676263311568849/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113676263311568849' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/113676263311568849'/><link rel='self' type='application/atom+xml' href='http://www.blogger.com/feeds/20227321/posts/default/113676263311568849'/><link rel='alternate' type='text/html' href='http://kannadablogs.blogspot.com/2006/01/sidestreet-boys.html' title='SideStreet Boys'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113658232124750198</id><published>2006-01-06T13:17:00.000-08:00</published><updated>2006-11-12T19:50:32.960-08:00</updated><title type='text'>Iconic Villian</title><content type='html'>ಕೆಡುಕುತನದ ಐಕಾನ್ "ವಜ್ರಮುನಿ" ಇನ್ನಿಲ್ಲ&lt;br /&gt;&lt;br /&gt;            ವಜ್ರಮುನಿ ಕನ್ನಡ ಚಿತ್ರಗಳಲ್ಲಿ ಮೆರೆಯುವ ಕಾಲದಲ್ಲಿ ನಾನಿನ್ನೂ ಪ್ರೈಮರಿ ಸ್ಕೂಲಲ್ಲಿದ್ದೆ. ಸಿನಿಮಾ ಹುಚ್ಚು ಭರ್ಜರಿಯಾಗಿತ್ತು, ಬಹುಶ: ಬೇರೆ ಮನರಂಜನಾ ಮಾರ್ಗವೂ ಇರಲಿಲ್ಲ. ಸರಿ ಸುಮಾರಾಗಿ ಬಿಡುಗಡೆಯಾದ ಕನ್ನಡ ಸಿನಿಮಾಗಳೆಲ್ಲವನ್ನೂ ಅವಕಾಶ ದೊರೆತಾಗ ನೋಡುತ್ತಿದ್ದೆ. ಸುಮಾರು ಎಲ್ಲ ಚಿತ್ರಗಳಲ್ಲೂ ವಜ್ರಮುನಿಯೇ ವಿಲನ್. ನಾನೂ ಕೂಡ ಚಿಕ್ಕ ಹುಡುಗನಾಗಿದ್ದರೂ ಇತರ ಸಹಪಾಠಿಗಳಂತೆ ನನಗೆ ವಜ್ರಮುನಿಯ ಭಯವಿರಲಿಲ್ಲ. ಮೊದಲ ಕೆಲ ರೀಲುಗಳಲ್ಲಿ ಆರ್ಭಟ ಮೆರೆದರೂ ಕೊನೇ ರೀಲ್ ಹೊತ್ತಿಗೆ ಚಚ್ಚಿ ಸರಿದಾರಿಗೆ ತರಲು ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಮೊದಲಾದವರಿದ್ದರು ಎನ್ನುವ ನಂಬಿಕೆಯಿತ್ತು. ನಮ್ಮ ನಿರ್ದೇಶಕರು ಕೂಡಾ ನನ್ನ ನಂಬಿಕೆ ಹುಸಿಗೊಳಿಸಲಿಲ್ಲ, ಅವರಿಗೆ ನಾನು ಆಭಾರಿಯಾಗಿದ್ದೇನೆ.&lt;br /&gt;            ಎರಡು ದಿನಗಳ ಹಿಂದೆ ನಮ್ಮ ದಿಗ್ಗಜ ಖಳನಾಯಕರಲ್ಲೊಬ್ಬರಾಗಿದ್ದ ವಜ್ರಮುನಿ ಕಣ್ಮರೆಯಾದರು. ಇದರ ಬಗ್ಗೆ ಎಲ್ಲಾ ಕನ್ನಡ ಪತ್ರಿಕೆಗಳು ವರದಿ ಮಾಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ಕನ್ನಡಪ್ರಭದ ಸಂಪಾದಕೀಯದಲ್ಲಿ "ಹತ್ವಾರ್" ಬರೆದ ಅಂಕಣ. ಅದರ ಲಿಂಕ್ ಇಲ್ಲಿದೆ:&lt;a href="http://www.kannadaprabha.com/NewsItems.asp?ID=KPE20060106104555&amp;Title=Editorial+Page&amp;amp;amp;lTitle=%D1%DAM%AE%DB%A5%DAP%DE%BE%DA%DF&amp;Topic=0&amp;amp;Dist=0" target="_new"&gt;ಕನ್ನಡಪ್ರಭದ ಅಂಕಣ&lt;/a&gt;&lt;br /&gt;             ವಜ್ರಮುನಿಯವರ ಮರಣದೊಂದಿಗೆ, ಕೆಡುಕುತನದ ಐಕಾನ್ ಕೂಡಾ ಕಣ್ಮರೆಯಾಯಿತು ಎನ್ನುವ ವಾಕ್ಯ ನನ್ನ ಗಮನ ಸೆಳೆದದ್ದಷ್ಟೇ ಅಲ್ಲ, ಕೆಲ ಕಾಲ ವಿಚಾರಕ್ಕೀಡು ಮಾಡಿತು. ಮುಂದಿನ ಕೆಲ ಬ್ಲಾಗ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೇಗೆ ಕೆಡುಕುತನದ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಎಂದು ನೋಡೋಣ.&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113658232124750198?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113658232124750198/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113658232124750198' title='0 Comments'/><link rel='edit' type='application/atom+xml' href='http://www.blogger.com/feeds/20227321/posts/default/113658232124750198'/><link rel='self' type='application/atom+xml' href='http://www.blogger.com/feeds/20227321/posts/default/113658232124750198'/><link rel='alternate' type='text/html' href='http://kannadablogs.blogspot.com/2006/01/iconic-villian.html' title='Iconic Villian'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-20227321.post-113624090825226858</id><published>2006-01-02T14:28:00.000-08:00</published><updated>2006-11-12T19:50:32.736-08:00</updated><title type='text'>Desha Bhaashe</title><content type='html'>ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರಯತ್ನ : ಧರಂಸಿಂಗ್&lt;br /&gt;&lt;br /&gt;ಇದು ಕೆಲದಿನಗಳಿಂದ ಎಲ್ಲಾ ಪತ್ರಿಕೆಗಳಲ್ಲೂ ಪ್ರಕಟವಾಗಿರುವ ಸುದ್ದಿ. ನಿಜ, ಧರಂಸಿಂಗ್ ಅಲ್ಲದೇ ಬೇರಿನ್ನಾರು ಇಂಥ ಹೇಳಿಕೆ ಕೊಡಲು ಸಾಧ್ಯ. ಸುಮಾರು ಮೂರು ದಶಕಗಳ ರಾಜಕಾರಣ ಮಾಡಿ ಕಡಿದು ಇಟ್ಟಿರುವ ಸಾಧನೆ ನೋಡಿದರೆ ಇದೂ ಕೂಡಾ ಅವರ ಸಾಧನಾ ಪಟ್ಟಿ ಸೇರುವುದರಲ್ಲಿ ಸಂದೇಹವೇ ಇಲ್ಲ. ಹೋಗಲಿ, ಈ ಹೇಳಿಕೆಯನ್ನು ಗಂಭೀರವಾಗಿ ವಿಚಾರಿಸಿ ನೋಡಿದರೂ ಕೂಡಾ ಇದೊಂದು ಅಪ್ರಯೋಜಕ ಕೆಲಸ ಎಂದು ಅನಾಯಾಸವಾಗಿ ಹೇಳಬಹುದು. ಸುಮ್ಮನೆ ಕೂತು ವಿಚಾರಿಸಿ: ಈ ಇಂಜಿನೀಯರುಗಳು ಮಾಡುವ ಕೆಲಸ ಏನು? ಬಹುಪಾಲು ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಗಾಣದೆತ್ತಿನಂತೆ ದುಡಿಯುವುದು. ಅವರ ದಿನನಿತ್ಯದ ಕೆಲಸದಲ್ಲಿ ಹರಟೆ (ವಿಚಾರ ವಿನಿಮಯ?) ಅಥವಾ ಕೆಲ ಇ-ಮೇಲ್ ಬಿಟ್ಟರೆ ಕನ್ನಡದ ಬಳಕೆ ಅಷ್ಟಕ್ಕಷ್ಟೇ. ಇರಲಿ, ಅವರ ಮುಂದಿನ ಶಿಕ್ಷಣಕ್ಕೆ ಕನ್ನಡ ಮಾಧ್ಯಮ ದಾರಿಯಾದೀತೆ? ಖಂಡಿತಾ ಇಲ್ಲ. ಇತಿಹಾಸ ನಮಗೆ ಏನಾದರೂ ಪಾಠ ಕಲಿಸಿದ್ದರೆ ಇದೂ ಕೂಡಾ ನಮ್ಮ "ಗರೀಬಿ ಹಠಾವೋ"ದಂಥ ಘೋಷಣಾಮಾತ್ರ ಸಾಧನೆಯಾಗುವುದು ಶತಃಸಿದ್ಧ.&lt;br /&gt;ಇನ್ನು ಕೆಲ ಅಭಿಮಾನಿ ಕನ್ನಡಿಗರು ಯುರೋಪಿನಂತ ಅಥವಾ ಜರ್ಮನ್ನರ ವ್ಯವಸ್ಥೆಯ ಉದಾಹರಣೆ ಕೊಟ್ಟು ವಾದ ಮಂಡಿಸಬಹುದು, ಆದರೆ ನೆನಪಿರಲಿ: ಅವು ರಾಷ್ಠ್ರೀಯ ಭಾಷೆಗಳು, ಆ ನಿಟ್ಟಿನಲ್ಲಿ ಭಾರತದ ಪ್ರತಿ ರಾಜ್ಯವೂ ತನ್ನದೇ ಭಾಷೆಯ ಶಿಕ್ಷಣ ಹೇರಿದರೆ ಪರಿಸ್ಥಿತಿಯೇನಾದೀತು. ಈಗಲೇ ಸಾವಿರ ಪ್ರವೇಶ ಪರೀಕ್ಷೆ ಬರೆಯುತ್ತಿರುವ ನಮ್ಮ ವಿದ್ಯಾರ್ಥಿಗಳ ಗತಿ? ಅಂಥ ಅಭಿಮಾನವಿದ್ದರೆ ದೇಶಕ್ಕೊಂದು ಭಾಷೆ ಅಂದರೆ ಸ್ವಲ್ಪ ಮಟ್ಟಿಗಾದರೂ ಊಹಿಸಬಹುದು. ಅದಕ್ಕಿಂತ ಮೊದಲು ನಮ್ಮ ಘನ ಸರ್ಕಾರದ ಆಡಳಿತ ಭಾಷೆ ಯಾವುದು? ಮೊದಲು ಈ ಅಧಿಕಾರಿ ವರ್ಗಕ್ಕೆ ಕನ್ನಡ ಕಲಿಸುವ ವ್ಯವಸ್ಥೆಯಾಗಬೇಡವೇ?&lt;br /&gt;ನನಗೆ ಗೊತ್ತು, ಈ ಥರ ಬರೆಯುವುದರಿಂದ ಹಲವು ಕನ್ನಡ ಸಂಘಗಳ ಕೆಂಗಣ್ಣಿಗೆ ಗುರಿಯಾಗುವುದಕ್ಕಿಂತ ನನಗೆ ಹೆಚ್ಚಿನ ಗಳಿಕೆಯೇನಿಲ್ಲ. ಆದರೂ ಒಂದು ಆಶಯ: ಕನಿಷ್ಠ ನೀರು, ಉತ್ತಮ ವಸತಿ ಸೌಲಭ್ಯ, ಶುಧ್ದ ಗಾಳಿ ಭಾಷೆಗಿಂತ ಪ್ರಮುಖ ಆದ್ಯತೆಯಾಗಬೇಡವೇ? ಸುಮ್ಮನೇ ಹೇಳಿಕೆ ಕೊಟ್ಟು ಕೂರುವ ಬುದ್ಧಿ ನಮ್ಮ ರಾಜಕಾರಣಿಗಳನ್ನು ಯಾವಾಗ ಬಿಡುವುದೋ ಗೊತ್ತಿಲ್ಲ.&lt;br /&gt;&lt;br /&gt;- ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113624090825226858?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113624090825226858/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113624090825226858' title='1 Comments'/><link rel='edit' type='application/atom+xml' href='http://www.blogger.com/feeds/20227321/posts/default/113624090825226858'/><link rel='self' type='application/atom+xml' href='http://www.blogger.com/feeds/20227321/posts/default/113624090825226858'/><link rel='alternate' type='text/html' href='http://kannadablogs.blogspot.com/2006/01/desha-bhaashe_02.html' title='Desha Bhaashe'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-20227321.post-113569380505562599</id><published>2005-12-27T06:17:00.000-08:00</published><updated>2006-11-12T19:50:31.468-08:00</updated><title type='text'>About The Blog</title><content type='html'>ಇದನ್ನು ನೀವು ಓದುತ್ತಿರುವಿರಾದರೆ ನೀವು ಕೂಡಾ ನನ್ನಂತೆ ಕನ್ನಡ ಬಲ್ಲವರಾಗಿರಬೇಕು. ನೀವು ಗೂಗಲಿಸುವಾಗ ಈ ಪುಟ ತಲುಪಿದ್ದರೆ ನನ್ನಂತೆ ಅಂತರ್ಜಾಲ ಪಟುವೂ ಹೌದು. ನೀವು ಯಾರೇ ಇದ್ದರೂ ಕನ್ನಡ ಅಕ್ಷರ ಪ್ರೇಮಿಯಾಗಿದ್ದರೆ, ಸರಿಯಾದ ವಿಳಾಸವನ್ನೇ ತಲುಪಿದ್ದೀರಿ. ಇಲ್ಲಿನ ಬರಹಗಳ ಮೂಲ ಉದ್ದೇಶ ನನ್ನಲ್ಲಿ ಹೂತಿಟ್ಟಿರುವ ವಿಚಾರಗಳ ತೋರ್ಪಡಿಕೆಗೆ ಸೂಕ್ತ ವೇದಿಕೆ ಕಲ್ಪಿಸುವುದು ಹಾಗೂ ಅವುಗಳನ್ನು ಸಮಾನ ಮನಸ್ಕರಲ್ಲಿ ಹಂಚಿಕೊಳ್ಳುವುದು. ನಿಮ್ಮ ಯಾವತ್ತೂ ಅಭಿಪ್ರಾಯಗಳಿಗೆ ಸ್ವಾಗತ.&lt;br /&gt;&lt;br /&gt;ಇತಿ ನಿಮ್ಮೆಲ್ಲರ&lt;br /&gt;ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/20227321-113569380505562599?l=kannadablogs.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadablogs.blogspot.com/feeds/113569380505562599/comments/default' title='Post Comments'/><link rel='replies' type='text/html' href='http://www.blogger.com/comment.g?blogID=20227321&amp;postID=113569380505562599' title='6 Comments'/><link rel='edit' type='application/atom+xml' href='http://www.blogger.com/feeds/20227321/posts/default/113569380505562599'/><link rel='self' type='application/atom+xml' href='http://www.blogger.com/feeds/20227321/posts/default/113569380505562599'/><link rel='alternate' type='text/html' href='http://kannadablogs.blogspot.com/2005/12/about-blog.html' title='About The Blog'/><author><name>Uday Hegde</name><uri>http://www.blogger.com/profile/14503002966062882536</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>6</thr:total></entry></feed>
