ಕೆಡುಕುತನದ ಐಕಾನ್ "ವಜ್ರಮುನಿ" ಇನ್ನಿಲ್ಲ
ವಜ್ರಮುನಿ ಕನ್ನಡ ಚಿತ್ರಗಳಲ್ಲಿ ಮೆರೆಯುವ ಕಾಲದಲ್ಲಿ ನಾನಿನ್ನೂ ಪ್ರೈಮರಿ ಸ್ಕೂಲಲ್ಲಿದ್ದೆ. ಸಿನಿಮಾ ಹುಚ್ಚು ಭರ್ಜರಿಯಾಗಿತ್ತು, ಬಹುಶ: ಬೇರೆ ಮನರಂಜನಾ ಮಾರ್ಗವೂ ಇರಲಿಲ್ಲ. ಸರಿ ಸುಮಾರಾಗಿ ಬಿಡುಗಡೆಯಾದ ಕನ್ನಡ ಸಿನಿಮಾಗಳೆಲ್ಲವನ್ನೂ ಅವಕಾಶ ದೊರೆತಾಗ ನೋಡುತ್ತಿದ್ದೆ. ಸುಮಾರು ಎಲ್ಲ ಚಿತ್ರಗಳಲ್ಲೂ ವಜ್ರಮುನಿಯೇ ವಿಲನ್. ನಾನೂ ಕೂಡ ಚಿಕ್ಕ ಹುಡುಗನಾಗಿದ್ದರೂ ಇತರ ಸಹಪಾಠಿಗಳಂತೆ ನನಗೆ ವಜ್ರಮುನಿಯ ಭಯವಿರಲಿಲ್ಲ. ಮೊದಲ ಕೆಲ ರೀಲುಗಳಲ್ಲಿ ಆರ್ಭಟ ಮೆರೆದರೂ ಕೊನೇ ರೀಲ್ ಹೊತ್ತಿಗೆ ಚಚ್ಚಿ ಸರಿದಾರಿಗೆ ತರಲು ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್ ಮೊದಲಾದವರಿದ್ದರು ಎನ್ನುವ ನಂಬಿಕೆಯಿತ್ತು. ನಮ್ಮ ನಿರ್ದೇಶಕರು ಕೂಡಾ ನನ್ನ ನಂಬಿಕೆ ಹುಸಿಗೊಳಿಸಲಿಲ್ಲ, ಅವರಿಗೆ ನಾನು ಆಭಾರಿಯಾಗಿದ್ದೇನೆ.
ಎರಡು ದಿನಗಳ ಹಿಂದೆ ನಮ್ಮ ದಿಗ್ಗಜ ಖಳನಾಯಕರಲ್ಲೊಬ್ಬರಾಗಿದ್ದ ವಜ್ರಮುನಿ ಕಣ್ಮರೆಯಾದರು. ಇದರ ಬಗ್ಗೆ ಎಲ್ಲಾ ಕನ್ನಡ ಪತ್ರಿಕೆಗಳು ವರದಿ ಮಾಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ಕನ್ನಡಪ್ರಭದ ಸಂಪಾದಕೀಯದಲ್ಲಿ "ಹತ್ವಾರ್" ಬರೆದ ಅಂಕಣ. ಅದರ ಲಿಂಕ್ ಇಲ್ಲಿದೆ:ಕನ್ನಡಪ್ರಭದ ಅಂಕಣ
ವಜ್ರಮುನಿಯವರ ಮರಣದೊಂದಿಗೆ, ಕೆಡುಕುತನದ ಐಕಾನ್ ಕೂಡಾ ಕಣ್ಮರೆಯಾಯಿತು ಎನ್ನುವ ವಾಕ್ಯ ನನ್ನ ಗಮನ ಸೆಳೆದದ್ದಷ್ಟೇ ಅಲ್ಲ, ಕೆಲ ಕಾಲ ವಿಚಾರಕ್ಕೀಡು ಮಾಡಿತು. ಮುಂದಿನ ಕೆಲ ಬ್ಲಾಗ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೇಗೆ ಕೆಡುಕುತನದ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಎಂದು ನೋಡೋಣ.
- ಕನ್ನಡಿಗ
Use Baraha fonts to read this blog.. http://www.baraha.com
Friday, January 06, 2006
Subscribe to:
Post Comments (Atom)
No comments:
Post a Comment